Asianet Suvarna News Asianet Suvarna News

'ವ್ಯಾಪಾರಿ ಸರಕಾಗಿರುವ ಹೆಣ್ಣಿನ ಮೈ, ಮನ​ಸ್ಸು'

ಇಂದಿನ ಕಾಲದಲ್ಲಿ ಹೆಣ್ಣಿನ ಮೈ ಮನಸ್ಸು ವ್ಯಾಪಾರಿ ಸರಕಾಗಿದೆ ಎಂದು ರಾಮನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಮಹಿಳಾ ಹೋರಾಟಗಾರರು ತಮ್ಮ ಆತಂಕ ಹೊರಹಾಕಿದರು.

Feminist Speaks About Women issues in Ramanagara Kannada Sahitya Sammelana
Author
Bengaluru, First Published Jan 25, 2020, 11:15 AM IST

ಎಂ. ಅ​ಫ್ರೋಜ್ ಖಾನ್‌

ರಾ​ಮ​ನ​ಗ​ರ [ಜ.25]: ಮಹಿ​ಳೆಯ ಅಭಿ​ವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಸುಕು ಹಾಕುವ ಪರದಾ ಪದ್ಧ​ತಿ​ಯಿಂದ ಹೊರ ಬಂದಿಲ್ಲ. ಆಧು​ನಿಕ ಸರಕು ಸಂಸ್ಕೃ​ತಿಯ ಪ್ರತಿ​ಯೊಂದು ಕ್ಷೇತ್ರ​ದ​ಲ್ಲಿಯೂ ಸ್ತ್ರೀಯ ದೇಹ​ವನ್ನು ‘ಕಮಾ​ಡಿ​ಟಿ’ ಎಂಬಂತೆ ಬಳ​ಸಿ​ಕೊ​ಳ್ಳು​ತ್ತಿದೆ. ಇದ​ರಷ್ಟೇ ಅಪಾ​ಯ​ಕ​ರ​ವಾದ ಕೋಮು​ವಾದ ಹೆಣ್ಣಿನ ಮೈ ಮನ​ಸ್ಸು​ಗ​ಳನ್ನೇ ತನ್ನ ಸಾಧ​ನ​ವಾಗಿ ಬಳ​ಸಿ​ಕೊ​ಳ್ಳು​ತ್ತಿದೆ ಎನ್ನುವುದು ಮಹಿಳಾ ಪ್ರತಿನಿಧಿಗಳ ಅಭಿಮತ.

ನಗ​ರದ ಆರ್‌ವಿಸಿಎಸ್‌ ಕನ್ವೆನ್ಷನ್‌ ಹಾಲ್‌ನ ಜಿ.ಪಿ.​ ರಾ​ಜ​ರತ್ನಂ ವೇದಿ​ಕೆ​ಯಲ್ಲಿ ನಡೆ​ಯು​ತ್ತಿ​ರುವ ರಾಮನಗರ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರ​ವಾರ ಮಹಿಳಾ ಗೋಷ್ಠಿಯಲ್ಲಿ ಪ್ರಾಧ್ಯಾ​ಪ​ಕರು, ಸಾಹಿ​ತಿ​ಗಳು ಹಾಗೂ ಮಹಿಳಾ ಹೋರಾ​ಟ​ಗಾ​ರರು ವ್ಯಕ್ತ​ಪ​ಡಿ​ಸಿದ ಆತಂಕದ ನುಡಿ​ಗ​ಳಿವು.

ತಲ್ಲಣಗಳ ಅನುಭವ:

ಮಹಿ​ಳೆಯ ಬದುಕು ಆದಿ​ಕಾ​ಲ​ದಿಂದಲೂ ಸಂಕೀ​ರ್ಣ​ತೆ​ಗಳ ಮೊತ್ತ. ಈ ಆಧು​ನಿಕ ಕಾಲ​ವಂತೂ ಸಂಕ್ರ​ಮಣ ಘಟ್ಟದ ಎಲ್ಲಾ ಗೊಂದ​ಲ​ಗಳ ವ್ಯವ​ಸ್ಥೆ​ಯ​ಲ್ಲದ ವ್ಯವಸ್ಥೆ. ಹೀಗಿ​ರು​ವಲ್ಲಿ ಇಂದಿನ ಮಹಿಳೆ ಹಿಂದೆಂದಿ​ಗಿಂತಲೂ ಹೆಚ್ಚು ಸೂಕ್ಷ್ಮ ಸಂವೇ​ದಿ​ಯಾಗಿ ಹಲವು ಬಗೆಯ ತಲ್ಲ​ಣ​ಗ​ಳನ್ನು ಸ್ವತಃ ಅನು​ಭ​ವಿ​ಸುವ ಅನಿ​ವಾ​ರ್ಯ​ತೆ​ಯಾ​ಗಿ​ದ್ದಾಳೆ ಎಂದು ‘ಮಹಿಳೆ ಮತ್ತು ಆಧುನಿಕ ತಲ್ಲ​ಣ​ಗಳು’ ವಿಷಯ ಮಂಡಿ​ಸಿದ ಬಿಡದಿ ಸರ್ಕಾರಿ ಪ್ರಥಮ ದರ್ಜೆ ಸಹಾ​ಯಕ ಪ್ರಾಧ್ಯಾ​ಪಕಿ ಶೋಭಾ​ರಾಣಿ ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

20ನೇ ಶತ​ಮಾ​ನದ ಕೊನೆಯ ಭಾಗ ಮತ್ತು 21ನೇ ಶತ​ಮಾ​ನದ ಇಂದಿನ ಕಾಲ​ಘ​ಟ್ಟ​ದಲ್ಲಿ ವಿಶ್ವ​ದಾ​ದ್ಯಂತ ಎಲ್ಲಾ ಕ್ಷೇತ್ರ​ಗ​ಳಲ್ಲಿ ಮಹ​ತ್ತರ ಬದ​ಲಾ​ವ​ಣೆ​ಗಳು ಅತ್ಯಂತ ಶೀಘ್ರ​ಗ​ತಿ​ಯಲ್ಲಿ ಜರು​ಗು​ತ್ತಿವೆ. ಈ ಬದ​ಲಾ​ವ​ಣೆ​ಗಳ ಪರಿ​ಣಾಮ ಪುರು​ಷರ ಮೇಲಾ​ಗು​ವು​ದ​ಕ್ಕಿಂತ ತೀವ್ರ​ವಾಗಿ ಮತ್ತು ವಿಭಿ​ನ್ನ​ವಾಗಿ ಸ್ತ್ರೀಯರ ಮೇಲಾ​ಗು​ತ್ತಿದೆ.

ಜಾಹಿರಾತು:  ಒಂದಡೆ ಸರಕು ಸಂಸ್ಕೃ​ತಿಯ ಸಾಧ​ನ​ವಾಗಿ ಹೆಣ್ಣನ್ನು ಜಾಹೀ​ರಾ​ತಿ​ನಲ್ಲಿ ಬಗೆ ಬಗೆ​ಯಾಗಿ ಬಳ​ಸಿ​ಕೊ​ಳ್ಳು​ತ್ತಲೇ ಮತ್ತೊಂದೆಡೆ ಅಂಥ ಉಡು​ಗೆ​ಗ​ಳನ್ನು ತೊಟ್ಟು ಹಾಗೆ ಸಾರ್ವ​ಜ​ನಿ​ಕ​ವಾಗಿ ಕಾಣಿ​ಸಿ​ಕೊ​ಳ್ಳು​ವುದು ನಿರ್ಲ​ಜ್ಜ​ವೆಂದೂ, ಅದೇ ಅವಳ ಮೇಲಾ​ಗು​ತ್ತಿ​ರುವ ಲೈಂಗಿಕ ದೌರ್ಜ​ನ್ಯಕ್ಕೆ ಕಾರಣ ಎಂದೂ ಹೇಳ​ಲಾ​ಗು​ತ್ತಿದೆ. ಒಂದೆಡೆ ರಾತ್ರಿ ಪಾಳಿಯ ಕೆಲ​ಸ​ವನ್ನು ಪುರುಷ ಮತ್ತು ಸ್ತ್ರೀ ಎಂಬ ಬೇಧ​ವಿ​ಲ್ಲದೆ ಎಲ್ಲ​ರಿಗೂ ಕಡ್ಡಾಯ ಮಾಡಿ​ರುವ ಆಧು​ನಿಕ ಉದ್ಯೋಗ ವ್ಯವಸ್ಥೆ, ಮತ್ತೊಂದೆಡೆ ಲೈಂಗಿಕ ಕಿರು​ಕು​ಳಕ್ಕೆ ಬಲಿ​ಯಾದ ಹೆಣ್ಣನ್ನು ಅವ​ಳದೇ ತಪ್ಪು ಎಂಬಂತೆ ದೂಷಿ​ಸು​ತ್ತದೆ. ಇಂತಹ ಮಾತು​ಗ​ಳನ್ನು ನ್ಯಾಯ ಸ್ಥಾನ​ದಲ್ಲಿ ಕುಳಿ​ತ​ವರು ಹಾಗೂ ಮಾನವ ಹಕ್ಕು​ಗಳ ಆಯೋ​ಗ ಆಡು​ತ್ತಿದೆ ಎಂದು ನೊಂದು ನುಡಿ​ದ​ರು.

ಇದು ಸ್ತ್ರೀಯ ಬದು​ಕಿನ ಕ್ರಮ​ವನ್ನು ಮಾತ್ರ​ವ​ಲ್ಲದೆ ಅವಳ ವಸ್ತ್ರ ಸಂಹಿ​ತೆ​ಯನ್ನು, ಭಾಷಾ ಬಳ​ಕೆ​ಯನ್ನು ನಿರ್ಧ​ರಿ​ಸುವ, ನಿಯಂತ್ರಿ​ಸುವ ಪುರು​ಷ​ ಕೇಂದ್ರಿತ ವ್ಯವ​ಸ್ಥೆಯ ಪ್ರತಿ​ಬಿಂಬ​ಗ​ಳಂತೆ ಗೋಚಿ​ರಿಸು​ತ್ತದೆ. ಆಧು​ನಿಕ ಸರಕು ಸಂಸ್ಕೃ​ತಿಯ ಪ್ರತಿ​ಯೊಂದು ಕ್ಷೇತ್ರ​ದ​ಲ್ಲಿಯೂ ಸ್ತ್ರೀಯ ದೇಹ​ವನ್ನು ‘ಕಮಾ​ಡಿ​ಟಿ’ ಎಂಬಂತೆ ಬಳ​ಸಿ​ಕೊ​ಳ್ಳು​ತ್ತಿದೆ. ಇದ​ರಷ್ಟೇ ಅಪಾ​ಯ​ಕ​ರ​ವಾದ ಮತ್ತೊಂದು ವಿಚಾರ ಕೋಮು​ವಾದ ಪ್ರಬ​ಲ​ಗೊ​ಳ್ಳು​ತ್ತಿ​ರುವುದು ಎಂದು ಹೇಳಿ​ದರು.

ಪ್ರೇಮ ವಿವಾ​ದ​:  ಈ ಕೋಮು​ವಾದವನ್ನು ಪ್ರೇರೇ​ಪಿ​ಸು​ತ್ತಿ​ರುವ ವರ್ಗ ಯಾವುದೇ ಇರಲಿ ಎರಡೂ ವರ್ಗ​ಗಳು ತಮ್ಮ ಸಾಧ​ನ​ವಾಗಿ ಬಳ​ಸು​ತ್ತಿ​ರು​ವುದು ಹೆಣ್ಣಿನ ಮೈ ಮನ​ಸ್ಸು​ಗ​ಳನ್ನೇ. ಪ್ರೇಮ ವಿವಾ​ದ​ಗಳು ಇಂದು ವ್ಯಕ್ತಿ​ಗಳ ಮತ್ತು ಕುಟುಂಬ​ಗಳ ನಡು​ವಿನ ವಿಚಾ​ರ​ವಾ​ಗದೆ, ಜಾತಿ​ಗಳ - ಧರ್ಮ​ಗಳ ನಡು​ವಿನ ವಿಚಾ​ರ​ವಾ​ಗಿವೆ. ಲವ್‌ ಜಿಹಾದ್‌, ಮರ್ಯಾದಾ ಹತ್ಯೆ​ಯಂತಹ ಪ್ರಕ​ರ​ಣ​ಗ​ಳನ್ನು ಗಮ​ನಿ​ಸಿ​ದರೆ ಈ ಅಂಶ ಗ್ರಹಿಕೆಗೆ ಬರು​ತ್ತದೆ. ಒಟ್ಟಿ​ನಲ್ಲಿ ಈ ಸರಕು ಸಂಸ್ಕೃತಿ ಮತ್ತು ಕೋಮುವಾದ ಎರಡೂ ಸಮಾ​ಜ​ದ​ಲ್ಲಿ​ರ​ಬೇ​ಕಾದ ಲಿಂಗ ಸೂಕ್ಷ್ಮತೆಯನ್ನೇ ಬಲಿ ಹಾಕು​ತಿವೆ. ಬಲಿ ಬೇಡು​ತ್ತಿವೆ ಎಂದು 
ಶೋಭಾ​ರಾಣಿ ಆತಂಕ ವ್ಯಕ್ತ​ಪ​ಡಿ​ಸಿ​ದರು.

ಮುಸುಕು ಹಾಕುವ ಪರದಾ ಪದ್ಧ​ತಿ:

‘ಅಭಿವ್ಯಕ್ತಿ ಸ್ವಾತಂತ್ರ್ಯ​ದಲ್ಲಿ ಮಹಿ​ಳೆ​ಯರ ಪಾತ್ರ’ ಕುರಿತು ವಿಚಾರ ಮಂಡಿ​ಸಿದ ಶಿಕ್ಷಕಿ ಸುಮಂಗಲ ಸಿದ್ದ​ರಾಜು, ಆಧು​ನಿಕ ಕ್ಷೇತ್ರ​ಗಳ ದುಡಿಮೆ, ಕೃಷಿ ಕೆಲಸ, ಮನೆ ಕೆಲಸ, ಮಕ್ಕಳು ಮನೆ ನಿರ್ವಹಣೆ, ಬೌದ್ಧಿಕ, ಸೃಜನ ಶೀಲ ಕಾರ್ಯ ಹಾಗೂ ನೀತಿ ಶಿಕ್ಷಣ ನೀಡಿ ಜನಾಂಗ​ವನ್ನು ನಿರ್ಮಾ​ಣ ಮಾಡು​ವಲ್ಲಿ ಮಹಿಳೆ ನೀಡಿ​ರುವ ಕೊಡು​ಗೆ​ಗ​ಳನ್ನು ನೆನೆ​ಪಿ​ಸಿ​ಕೊಂಡರೆ ಅವ​ರಿಗೆ ಅಭಿ​ವ್ಯಕ್ತಿ ಸ್ವಾತಂತ್ರ್ಯ ಬೇಡ ಅನ್ನೋರು ಮನು​ವನ್ನು ಬಿಟ್ಟರೆ ಮತ್ಯಾರು ಸಿಗು​ವು​ದಿಲ್ಲ ಎಂದು ಟೀಕಿ​ಸಿ​ದ​ರು.

ಸಂತಾ​ನೋ​ತ್ಪತ್ತಿ, ಶಿಶು​ಪಾ​ಲ​ನೆ​ಯಲ್ಲಿ ಸಿಲು​ಕಿ​ದ​ವ​ಳನ್ನು ದುರ್ಬ​ಲ​ತೆಯ ದೃಷ್ಟಿ​ಯಿಂದ ಆಕೆಯ ಸಾಮ​ಥ್ಯ​ರ್‍ ಅಳೆ​ಯು​ವುದು ಎಷ್ಟುಸರಿ. ಪುರು​ಷ​ರಾ​ಗಲಿ, ಸ್ತ್ರೀಯ​ರಾ​ಗಲಿ ದುಡಿ​ಮೆ​ಯಿಂದ ಆತ್ಮ​ಗೌ​ರವ, ಆತ್ಮ​ವಿ​ಶ್ವಾಸ ಸಿಗು​ವುದು ಇವೆ​ರಡೂ ಇದ್ದಲ್ಲಿ ಅಭಿ​ವ್ಯ​ಕ್ತಿ​ಗೇನೂ ಕೊರ​ತೆ​ಯಿ​ರ​ಲಾ​ರದು. ಅಭಿ​ವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛಾ​ಚಾ​ರ​ವಲ್ಲ. ಅದು ರಾಷ್ಟ್ರದ ಭದ್ರ​ತೆಗೆ ಧಕ್ಕೆ ತರ​ಬಾ​ರದು, ಸಮು​ದಾ​ಯದ ಹಿತಾ​ಸ​ಕ್ತಿಗೆ ಪೂರ​ಕ​ವಾ​ಗಿ​ರ​ಬೇಕು ಎಂದ​ರು.

ಲಿಂಗ ಸಮಾ​ನತೆ:

ಲಿಂಗ ತಾರ​ತ​ಮ್ಯ​ವ​ನ್ನು ಸಾಧ​ನ​ವ​ನ್ನಾಗಿ ಮಾಡಿ​ಕೊಂಡು ರಾಜ್ಯ​ವನ್ನು ಪುರುಷ ಪ್ರಧಾನ ಉಕ್ಕಿನ ಕೋಟೆ​ಯಂತೆ ಆವ​ರಿ​ಸಿದೆ. ಇವೆ​ಲ್ಲ​ದರ ನಡುವೆ ಮಹಿಳೆ ತನ್ನನ್ನು ತಾನು ತೆರೆ​ದು​ಕೊ​ಳ್ಳ​ಬೇ​ಕಿದೆ. ಅಭಿ​ವ್ಯಕ್ತಿ ಸ್ವಾತಂತ್ರ್ಯದ ಪರಿ​ಣಾ​ಮವಾಗಿ ಸ್ತ್ರೀ ಶಕ್ತಿ ಮುಖ್ಯ​ವಾ​ಹಿ​ನಿಗೆ ಬಂದಿತು. ಲಿಂಗ ಸಮಾ​ನತೆ ಪಟ್ಟಿ​ ಯಲ್ಲಿ 87ನೇ ದೇಶ ಭಾರತ. ಅರ್ಥ, ಶಿಕ್ಷಣ, ಆರೋಗ್ಯ, ರಾಜ​ಕೀಯ ಎಲ್ಲ​ದ​ರ​ಲ್ಲಿಯು ಮಹಿ​ಳೆಯ ಸಾಧನೆ ಲೆಕ್ಕ ಹಾಕಿ ಗುರು​ತಿ​ಸು​ತ್ತಾರೆ. ಆದರೂ ಅಭಿ​ವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಸುಕು ಹಾಕುವ ಪರದಾ ಪದ್ಧ​ತಿ​ಯಿಂದ ಹೊರ ಬಂದಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದರು.

ರೈತ​ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾ​ಧ್ಯಕ್ಷೆ ಅನು​ಸೂ​ಯಮ್ಮ ಅಧ್ಯ​ಕ್ಷತೆ ವಹಿ​ಸಿ​ದ್ದರು. ಕಸಾಪ ಮಾಗಡಿ ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ ಆಶಯ ನುಡಿ​ಗ​ಳ​ನ್ನಾ​ಡಿ​ದರು. ಸಮ್ಮೇ​ಳ​ನಾ​ಧ್ಯಕ್ಷ ಪ್ರೊ.ಎಂ.​ ಶಿ​ವ​ನಂಜಯ್ಯ, ಪತ್ನಿ ಸರೋ​ಜಮ್ಮ, ಮಹಿಳಾ ಹೋರಾ​ಟ​ಗಾರ್ತಿ ಜಯಮ್ಮ, ಬಿ.ಸಿ.​ ಪಾ​ರ್ವ​ತಮ್ಮ, ಸಮಾಜ ಸೇವಕಿ ವಿಮಲಾ ಯೋಗೇಸ್‌, ಉಷಾ ನಂಜೇ​ಗೌಡ ಉಪ​ಸ್ಥಿ​ತ​ರಿ​ದ್ದರು.

Follow Us:
Download App:
  • android
  • ios