ಬಾದಾಮಿ ನಾಮಪತ್ರ ಸಲ್ಲಿಕೆ ಮುಂದೂಡಿದ ಸಿಎಂ; ದೇವಿ ಮೊರೆ ಹೋದ್ರಾ ಸಿದ್ದರಾಮಯ್ಯ?
- ಸಿಎಂ ಸಿದ್ದರಾಮಯ್ಯಗೆ ಇತ್ತ ಚಾಮುಂಡೇಶ್ವರಿ ಅತ್ತ ಬನಶಂಕರಿ
- ನಾಮಪತ್ರ ಸಲ್ಲಿಕೆಯನ್ನು ಮುಂದೂಡಿದ ಸಿದ್ದರಾಮಯ್ಯ; ದೇವಿ ಮೊರೆ ಹೋದರೇ ಸಿಎಂ?
ಚಾಮುಂಡೇಶ್ವರಿಯಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ, ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವುದನ್ನು ಮುಂದೂಡಿದ್ದಾರೆ. ಮಂಗಳವಾರ ಬಾದಾಮಿಯ ಬನಶಂಕರಿಯ ‘ದೇವಿ ವಾರ’ವಾಗಿರುವುದರಿಂದ ಅದೇ ದಿನ ದರ್ಶನ ಪಡೆದು ನಾಮಪತ್ರ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಸ್ಥಳೀಯ ಮುಖಂಡರು ಬನಶಂಕರಿ ದೇವಾಲಯದ ಅರ್ಚಕರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆಂದು ಹೇಳಲಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿಯ ದರ್ಶನ ಮಾಡಿ, ಪೂಜೆ ಸಲ್ಲಿಸಿದ ನಂತರವೇ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದ್ದರು.