‘ಪ್ರತಿಸ್ಪರ್ಧಿ ಯಾರೇ ಆಗಿರಲಿ, ನನಗೆ ಚಿಂತೆಯಿಲ್ಲ’
- ಬಾದಾಮಿಯಿಂದ ಕಣಕ್ಕಿಳಿಯಲಿರುವ ಸಿಎಂ ಸಿದ್ದರಾಮಯ್ಯ
- ಸಿಎಂ ಎದುರಾಳಿಯಾಗಿ ಶ್ರೀರಾಮುಲು ಕಣಕ್ಖಿಳಿಸಲು ಬಿಜೆಪಿ ಚಿಂತನೆ
ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿಯಲು ನಿರ್ಧರಿಸಿದ್ದು, ಬಿಜೆಪಿ ಪ್ರಬಲ ಎದುರಾಳಿಯನ್ನು ಕಣಕ್ಕಿಳಿಸಿಲು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಶ್ರೀರಾಮುಲುರನ್ನು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ತನಗೆ ಎದುರಾಳಿಯ ಬಗ್ಗೆ ಚಿಂತೆಯಿಲ್ಲ. ಚುನಾವಣೆಗಳು ಸಿದ್ಧಾಂತದ ಮೇಲೆ ನಡೆಯುತ್ತವೆ, ಕೋಮುವಾದವನ್ನು ಸೋಲಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.