ಬಿಜೆಪಿ ನಾಯಕರ ಮಧ್ಯೆ ‘ಬಿ ಫಾರ್ಮ್’ಗಾಗಿ ಕದನ! ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಉಭಯನಾಯಕರು
- ಟಿಕೆಟ್ ಘೋಷಣೆಯಾಗಿ 6 ದಿನಗಳಾದರೂ ಸಿಗದ ‘ಬಿ ಫಾರ್ಮ್’
- ತನ್ನ ಮಗನಿಗೆ ಬಿ ಫಾರಂ ನೀಡಬೇಕೆಂದು ಸಂಗಣ್ಣ ಕರಡಿ ಪಟ್ಟು
ಕೊಪ್ಪಳ ಕ್ಷೇತ್ರದ ‘ಬಿ ಫಾರಂ’ಗಾಗಿ ಬಿಜೆಪಿ ನಾಯಕರು ಕಿತ್ತಾಟ ನಡೆಸುತ್ತಿದ್ದಾರೆ. ಕೊಪ್ಪಳ ಕ್ಷೇತ್ರದಿಂದ ಚಂದ್ರಶೇಖರ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಆದರೆ ತನ್ನ ಮಗನಿಗೆ ಬಿ ಫಾರಂ ನೀಡಬೇಕೆಂದು ಸಂಗಣ್ಣ ಕರಡಿ ಪಟ್ಟು ಹಿಡಿದಿದ್ದಾರೆ. ಈ ನಡುವೆ ಬಂಡಾಯ ಶಮನಕ್ಕಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಗಣ್ಣಗೆ ಬುಲಾವ್ ಮಾಡಿದ್ದಾರೆ. ಬಿ ಫಾರಂಗಾಗಿ ಉಭಯ ಬಣದ ನಾಯಕರು ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ. ನಾಮಪತ್ರ ಸಲ್ಲಿಸಲು ಕೇವಲ 2 ದಿನಗಳು ಬಾಕಿ ಉಳಿದಿವೆ.