Asianet Suvarna News Asianet Suvarna News

ರೆಸಾರ್ಟ್ ತಲುಪಿದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬೌನ್ಸರ್ ಗಳ ಭದ್ರತೆ

ರೆಸಾರ್ಟ್ ರಾಜಕಾರಣ ರಂಗೇರಿದೆ. ಕಾಂಗ್ರೆಸ್ - ಜೆಡಿಎಸ್ ಶಾಸಕರು ರೆಸಾರ್ಟ್ ತಲುಪಿದ್ದಾರೆ.  ಶಾಸಕರಿಗೆ ಬೌನ್ಸರ್​​​​ಗಳ ಭದ್ರತೆ ಒದಗಿಸಲಾಗಿದೆ.  ವಿಶೇಷವಾಗಿ ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ್ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.  ಇಬ್ಬರು ಶಾಸಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಬೌನ್ಸರ್​​ಗಳಿಗೆ ಡಿಕೆಶಿ ಸೂಚನೆ ನೀಡಿದ್ದಾರೆ. 

ಬೆಂಗಳೂರು (ಮೇ. 18): ರೆಸಾರ್ಟ್ ರಾಜಕಾರಣ ರಂಗೇರಿದೆ. ಕಾಂಗ್ರೆಸ್ - ಜೆಡಿಎಸ್ ಶಾಸಕರು ರೆಸಾರ್ಟ್ ತಲುಪಿದ್ದಾರೆ.  

ಶಾಸಕರಿಗೆ ಬೌನ್ಸರ್​​​​ಗಳ ಭದ್ರತೆ ಒದಗಿಸಲಾಗಿದೆ.  ವಿಶೇಷವಾಗಿ ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ್ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.  ಇಬ್ಬರು ಶಾಸಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಬೌನ್ಸರ್​​ಗಳಿಗೆ ಡಿಕೆಶಿ ಸೂಚನೆ ನೀಡಿದ್ದಾರೆ. 

ನಾಗೇಂದ್ರ & ಗಣೇಶ್ ನಮ್ಮನ್ನು ಬಿಡಿ ಎಂದು ಡಿ.ಕೆ ಶಿವಕುಮಾರ್​​​ಗೆ ಒತ್ತಾಯಿಸಿದ್ದಾರೆ. ಆದರೆ  ಇಬ್ಬರು ತಪ್ಪಿಸಿಕೊಂಡ್ರೆ ಕಾಂಗ್ರೆಸ್ ಕೈಗೆ ಸಿಗಲ್ಲ ಎಂದು ಕಟ್ಟೆಚ್ಚರ ವಹಿಸಲು ಡಿಕೆಶಿ ಸೂಚನೆ ನೀಡಿದ್ದಾರೆ. ಬಿಎಸ್ ವೈ ಎಷ್ಟು ದಿನಗಳೊಳಲಾಗಿ ಬಹುಮತ ಸಾಬೀತುಪಡಿಸಬೇಕೆಂದು 10.30 ಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರ ಬೀಳಲಿದ್ದು, ಬಿಜೆಪಿ ಬಹುಮತ ಸಾಬೀತು ಪಡಿಸುವ ಒತ್ತಡದಲ್ಲಿದೆ. 

Video Top Stories