ಬಡವರು ಕೂಡಾ ರಾಜಕೀಯದ ಮುಂಚೂಣಿಗೆ ಬರಬೇಕು: ಎಂಇಪಿ ಮುಖ್ಯಸ್ಥೆ ಡಾ. ನೌಹಿರಾ ಶೇಖ್
ರಾಜಕೀಯ ಅಖಾಡದಲ್ಲಿ ಇತ್ತೀಚೆಗಷ್ಟೇ ಪದಾರ್ಪಣೆ ಮಾಡಿರುವ ಮಹಿಳಾ ಎಂಪವರ್ಮೆಂಟ್ ಪಾರ್ಟಿ [ಎಂಇಪಿ] ಕರ್ನಾಟಕ ವಿಧಾನ ಸಭೆ ಚುನಾವಣಾ ಕಣಕ್ಕೆ ಧುಮುಕಿದೆ. ಈ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥೆ ಡಾ. ನೌಹಿರಾ ಶೇಖ್, ಪ್ರತಿನಿಧಿ ಮೊಹಮ್ಮದ್ ಯಾಕೂಬ್ ಜತೆ ಮಾತನಾಡಿದ್ದಾರೆ.
ತಮ್ಮ ಪಕ್ಷವು ಮುಸ್ಲಿಮರಿಗೆ ಸೀಮಿತವಾಗಿಲ್ಲ, ಅದು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುತ್ತದೆ.
ಅನ್ಯಾಯದ ವಿರುದ್ಧ ಜನಪರ ಹೋರಾಟ ನಡೆಸುವುದು ಪಕ್ಷದ ಧ್ಯೇಯೋದ್ದೇಶವಾಗಿದೆ.
ಭಾರತೀಯರ ಜಾತಿ/ಧರ್ಮ ಬೇರೆ ಬೇರೆಯಾಗಿದ್ದರೂ, ದೇಶದ ಸಂವಿಧಾನವು ಅವರೆಲ್ಲರನ್ನು ಒಂದುಗೂಡಿಸುತ್ತದೆ.
ಧರ್ಮವು ವೈಯುಕ್ತಿಕ ವಿಚಾರ, ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು