Asianet Suvarna News Asianet Suvarna News

ಮಾಧ್ಯಮಗಳೆದುರು ಕಣ್ಣೀರಿಟ್ಟ ಸಚಿವರ ಪುತ್ರಿ

ತಂದೆ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಏಕಾಏಕಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ನನಗೆ ದಿಗ್ಬಂಧನ ಹಾಕಿದ್ದಾರೆ.  ಹಣ ಹಂಚುತ್ತಿದ್ದೀರಿ ಎಂದು ಆರೋಪಿಸಿ ಕಾರ್ಪೊರೇಟರ್ ಕೃಷ್ಣಮೂರ್ತಿ ಸೇರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ದೊಡ್ಡ ಹೈಡ್ರಾಮಾನೇ ಸೃಷ್ಟಿ ಮಾಡಿದರು'

'ನಾನು ರಾಜಾಜಿನಗರದ ಇಎಸ್ಐ ಆಸ್ಪತ್ರೆ ಬಳಿಯ ಸೋಷಿಯಲ್ ಮೀಡಿಯಾ ಕಚೇರಿಯಲ್ಲಿ ತಂದೆ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಏಕಾಏಕಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ನನಗೆ ದಿಗ್ಬಂಧನ ಹಾಕಿದ್ದಾರೆ.  ಹಣ ಹಂಚುತ್ತಿದ್ದೀರಿ ಎಂದು ಆರೋಪಿಸಿ ಕಾರ್ಪೊರೇಟರ್ ಕೃಷ್ಣಮೂರ್ತಿ ಸೇರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ದೊಡ್ಡ ಹೈಡ್ರಾಮಾನೇ ಸೃಷ್ಟಿ ಮಾಡಿದರು' ಎಂದು ದಿಶಾ ಆರೋಪಿಸಿದ್ದಾರೆ.