7 ಮಂದಿ ಹತ್ಯೆಗೈದ ಶಬನಂ ಕ್ಷಮೆ ಅರ್ಜಿ: ಗಲ್ಲು ಶಿಕ್ಷೆಗೆ ತಡೆ!
ಪ್ರಿಯಕರನ ಜೊತೆಗಿನ ಮದುವೆಗಾಗಿ ಮತ್ತು ಭರಿಸುವ ಔಷಧಿ ಬೆರೆಸಿದ ಹಾಲು ಕುಡಿಸಿ 7 ಮಂದಿ ಕುಟುಂಬ ಸದಸ್ಯರ ಹತ್ಯೆ| ಶಬನಂ ಕ್ಷಮೆ ಅರ್ಜಿ| ಗಲ್ಲು ಶಿಕ್ಷೆಗೆ ತಡೆ
ಲಖನೌ(ಫೆ.24): ಪ್ರಿಯಕರನ ಜೊತೆಗಿನ ಮದುವೆಗಾಗಿ ಮತ್ತು ಭರಿಸುವ ಔಷಧಿ ಬೆರೆಸಿದ ಹಾಲು ಕುಡಿಸಿ 7 ಮಂದಿ ಕುಟುಂಬ ಸದಸ್ಯರ ಹತ್ಯೆಗೈದಿದ್ದ ಉತ್ತರ ಪ್ರದೇಶದ ಮಹಿಳಾ ದೋಷಿ ಶಬನಂ ಅವರು ಕ್ಷಮಾದಾನ ಕೋರಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಕುರಿತಾಗಿ ರಾಜ್ಯಪಾಲರು ತಮ್ಮ ನಿರ್ಧಾರ ಕೈಗೊಳ್ಳುವವರೆಗೆ ಶಬನಂ ಅವರ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ಸಿಕ್ಕಿದೆ. ಅವರಿಗೆ ಮಥುರಾ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲು ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಕ್ಷಮಾದಾನ ಅರ್ಜಿ ಸಲ್ಲಿಕೆ ವಿಚಾರ ಬೆಳಕಿಗೆ ಬಂದಿದೆ.
ಅಲ್ಲದೆ ಆಕೆಯ ಪುತ್ರ ಸಹ ತಮ್ಮ ತಾಯಿಗೆ ಕ್ಷಮೆ ನೀಡಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕೋರಿಕೆ ಸಲ್ಲಿಸಿದ್ದಾರೆ.