ವೈರಸ್ ನಿಯಂತ್ರಣಕ್ಕೆ ಇನ್ನೆಷ್ಟು ದಿನ ಬೇಕು?
ನಮ್ಮ ದೇಶದ ಗಾತ್ರಕ್ಕೆ ಹೋಲಿಸಿದರೆ ಸೋಂಕು ಹರಡದಂತೆ ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಕೊರೋನಾ ಸೋಂಕಿದ್ದ ಕೇರಳ ಮೂಲದ ಮೂವರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಪೀಡಿತ ದೇಶಗಳಿಂದ ಪ್ರಯಾಣದ ಇತಿಹಾಸ ಹೊಂದಿರುವ ಮತ್ತು ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಜನರ ಪರಿಶೀಲನೆಗೆ ‘ಸಂಪರ್ಕ ಕಣ್ಗಾವಲು’ ವ್ಯವಸ್ಥೆಯನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ.
ಚೀನಾ ಮೂಲದ ಕೊರೋನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, 4000ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಭಾರತದಲ್ಲೂ 73 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇಂಡಿಯನ್ ಎಕ್ಸಪ್ರೆಸ್ನೊಂದಿಗೆ ಮಾತನಾಡಿ, ಭಾರತದಲ್ಲಿ ವೈರಸ್ ನಿಯಂತ್ರಣಕ್ಕೆ ಹೇಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.
ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ
ವೈರಸ್ ನಿಯಂತ್ರಣಕ್ಕೆ ಇನ್ನೆಷ್ಟುದಿನ ಬೇಕು?
ಮುಂದಿನ ಒಂದು ವಾರದಲ್ಲಿಯೇ ಭಾರತದಲ್ಲಿ ಕೊರೋನಾವೈರಸ್ ಸೋಂಕು ಕಡಿಮೆಯಾಗಲಿದೆ ಎಂದು ನನಗನಿಸುತ್ತಿದೆ. ಆದಾಗ್ಯೂ ಇತರ ದೇಶಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತವೆ, ಜನರಲ್ಲಿ ಎಷ್ಟರ ಮಟ್ಟಿಗೆ ಅರಿವು ಮೂಡಿದೆ ಎಂಬ ಅಂಶಗಳು ಮುಖ್ಯವಾಗುತ್ತವೆ.
ಭಾರತದಲ್ಲಿ ಕೊರೋನಾ ವೈರಸ್ ಭೀಕರತೆ ಹೇಗಿದೆ ಮತ್ತು ಅದನ್ನು ಬಗ್ಗು ಬಡಿಯಲು ಭಾರತ ಹೇಗೆ ಸಿದ್ಧವಾಗುತ್ತಿದೆ?
ನಮ್ಮ ದೇಶದ ಗಾತ್ರಕ್ಕೆ ಹೋಲಿಸಿದರೆ ಸೋಂಕು ಹರಡದಂತೆ ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಕೊರೋನಾ ಸೋಂಕಿದ್ದ ಕೇರಳ ಮೂಲದ ಮೂವರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಪೀಡಿತ ದೇಶಗಳಿಂದ ಪ್ರಯಾಣದ ಇತಿಹಾಸ ಹೊಂದಿರುವ ಮತ್ತು ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಜನರ ಪರಿಶೀಲನೆಗೆ ‘ಸಂಪರ್ಕ ಕಣ್ಗಾವಲು’ ವ್ಯವಸ್ಥೆಯನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ. ಕೊರೋನಾದಿಂದ ಇದುವರೆಗೆ ದೇಶದಲ್ಲಿ ಯಾವುದೇ ಸಾವು ಸಂಭವಿಸಿರುವುದು ದೃಢಪಟ್ಟಿಲ್ಲ.
ಕೊರೋನಾಗೆ 1 ವಾರ ಅಘೋಷಿತ ಕರ್ನಾಟಕ ಬಂದ್ : ಏನೇನು ಇರಲ್ಲ..?
ಆದಾಗ್ಯೂ ನಾವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಪ್ರತ್ಯೇಕ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಮೀಸಲಿಡುವಂತೆ ಈಗಾಗಲೇ ರಾಜ್ಯ ಮತ್ತು ಕೇಂದ್ರದ ಸುಪರ್ದಿಗೆ ಒಳಪಟ್ಟಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬೇಕಾದ ಪ್ರತ್ಯೇಕ ಹಾಸಿಗೆಗಳು ಮತ್ತು ಸಲಕರಣಗೆಗಳು ದೇಶಾದ್ಯಂತ ಲಭ್ಯವಿವೆ. ದೇಶಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 17,000 ಪ್ರತ್ಯೇಕ ಹಾಸಿಗೆಗಳು ಇವೆ. ಅಲ್ಲದೆ ಸುಮಾರು 14,000 ಕ್ವಾರಂಟೈನ್ (ಪ್ರತ್ಯೇಕವಾಗಿರಿಸುವುದು) ಹಾಸಿಗೆಗಳೂ ಲಭ್ಯವಿವೆ. ಪ್ರಮುಖ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಪರಿಸ್ಥಿತಿಯ ನಿಯಂತ್ರಣಕ್ಕೆ ಅಗತ್ಯ ಬೆಂಬಲ ನೀಡುವ ಭರವಸೆ ನೀಡಿದ್ದೇನೆ.
50 ಕ್ಕೂ ಹೆಚ್ಚು ಲ್ಯಾಬೋರೇಟರಿಗಳಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಏರ್ಪೋರ್ಟ್ ಅಧಿಕಾರಿಗಳು ಮತ್ತು ವಲಸೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಸಾಧಿಸಲಾಗುತ್ತಿದೆ.
ಸಾರ್ವಜನಿಕರಲ್ಲೂ ಅರಿವು ಮೂಡಿಸುವ ದೃಷ್ಟಿಯಿಂದ ಸಾಕಷ್ಟುಕ್ರಮ ಕೈಗೊಳ್ಳುತ್ತಿದ್ದೇವೆ. ಮೊಬೈಲ್ ಫೋನ್ಗಳಿಗೆ 117.2 ಕೋಟಿ ಸಂದೇಶ ಕಳುಹಿಸಿದ್ದೇವೆ, 156 ದಿನಪತ್ರಿಕೆಗಳಿಗೆ ಜಾಹೀರಾತು ನೀಡಿದ್ದೇವೆ. ಕೊರೋನಾ ವೈರಸ್ನಿಂದ ಪಾರಾಗಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಮೊಬೈಲ್ ಮೂಲಕವೂ ಜಾಗೃತಿ ಮೂಡಿಸುತ್ತಿದ್ದೇವೆ.
ಕೊರೋನಾ ನಿಯಂತ್ರಣಕ್ಕೆ ಜನರು ಗುಂಪುಗೂಡುವುದನ್ನು ನಿಯಂತ್ರಿಸಬೇಕು. ಆದರೆ ಸಾರ್ವಜನಿಕ ವಾಹನಗಳ ಬಳಕೆ ಎಷ್ಟು ಸುರಕ್ಷಿತ?
ಹೌದು, ವೈರಸ್ ನಿಯಂತ್ರಣಕ್ಕೆ ಹೆಚ್ಚೆಚ್ಚು ಜನರು ಒಟ್ಟಿಗೆ ಸೇರದಂತೆ ಸಲಹೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಾಹನಗಳ ಬಳಕೆ ಒಂದು ದೊಡ್ಡ ಸಮಸ್ಯೆಯೇ. ಸಲಹೆ, ಸೂಚನೆಗಳನ್ನು ಮೀರಿ ಸೋಂಕಿತರು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದರಿಂದ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ. ಹಾಗಾಗಿ ಸೋಂಕಿನಿಂದ ಪಾರಾಗಬೇಕೆಂದರೆ ಸಾರ್ವಜನಿಕ ಆರೋಗ್ಯ ಇಲಾಖೆ ಸೂಚಿಸಿರುವ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.
ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ, ಜನರಿಂದ ಅಂತರ ಕಾಯ್ದುಕೊಳ್ಳುವ ಮುಖಾಂತರ, ನೈರ್ಮಲ್ಯ ಕಾಪಾಡಿಕೊಳ್ಳುವ ಮುಖಾಂತರ ಪಾರಾಗಬಹುದು. ರೈಲು, ಮೆಟ್ರೋಗಳನ್ನು ಆಗಾಗ ಸ್ವಚ್ಛ ಮಾಡುತ್ತಿರುವಂತೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಅಂಬಾನಿಗೆ ಕೊರೋನಾ ಶಾಕ್; ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟ!
ಮಕ್ಕಳು ಶಾಲೆಗೆ ಹೋಗುವುದು ಸುರಕ್ಷಿತವೇ?
ನಮ್ಮ ಮಕ್ಕಳು ಆರೋಗ್ಯವಂತರಾಗಿ, ಸುರಕ್ಷಿತವಾಗಿರಬೇಕೆಂಬುದು ನಮ್ಮೆಲ್ಲರ ಬಯಕೆ. ಅದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಸೋಂಕು ತಡೆಗಟ್ಟಲು ಬೇಕಾದ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕೆಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಔಷಧ ಸಂಶೋಧನಾ ಮಂಡಳಿ ಸೆಕೆಂಡ್ ಲೈನ್ ಎಚ್ಐವಿ ಔಷಧವನ್ನು ಕೊರೋನಾ ವಿರುದ್ಧದ ಲಸಿಕೆಯಾಗಿ ಬಳಸಲು ಅನುಮತಿ ಪಡೆದಿದೆ. ಇದರಿಂದ ಉಪಯೋಗ ಆಗುತ್ತಿದೆಯೇ? ನಮ್ಮಲ್ಲಿ ಅಗತ್ಯಕ್ಕೆ ತಕ್ಕಷ್ಟುಮಾಸ್ಕ್ ಮತ್ತು ಆರೋಗ್ಯ ಸಲಕರಣೆಗಳು ಲಭ್ಯವಿವೆಯೇ?
ಹೌದು, ಕೊರೋನಾ ರೋಗಿಗಳಿಗೆ ಸೆಕೆಂಡ್ ಲೈನ್ ಎಚ್ಐವಿ ಔಷಧಿ ಬಳಕೆಗೆ ಐಸಿಎಂಆರ್ ಅನುಮತಿ ಪಡೆದಿದೆ. ಆದರೆ ಕೊರೋನಾ ಸೋಂಕಿತ ರೋಗಿಗಳ ತುರ್ತು ಚಿಕಿತ್ಸೆಗೆ ಮಾತ್ರ ಇದನ್ನು ಬಳಸಲಾಗುತ್ತಿದೆ. ಈ ಕಾಂಬಿನೇಷನ್ ಥೆರಪಿಯನ್ನು ಇದುವರೆಗೆ ಜೈಪುರದಲ್ಲಿ ಇಬ್ಬರು ಇಟಾಲಿಯನ್ ಪ್ರಜೆಗಳ ಮೇಲೆ ಮಾತ್ರ ಪ್ರಯೋಗ ಮಾಡಲಾಗಿದೆ. ಹಾಗೆಯೇ ದೇಶದಲ್ಲಿ ಅಗತ್ಯವಿರುವ ಮಾಸ್ಕ್ಗಳು, ಆರೋಗ್ಯ ಸಲಕರಣೆಗಳು ಲಭ್ಯವಿವೆ, ಆ ಬಗ್ಗೆ ಆತಂಕ ಬೇಡ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಟ್ರಾವೆಲ್ ಅಡ್ವೈಸರಿಯಲ್ಲಿ ಉಲ್ಲೇಖಿಸದ ದೇಶಗಳಿಗೆ ಪ್ರವಾಸ ಎಷ್ಟು ಸುರಕ್ಷಿತ?
ಸದ್ಯಕ್ಕೆ ನಮ್ಮ ಗಮನ ಕೊರೋನಾ ಹರಡಿರುವ 100ಕ್ಕೂ ಹೆಚ್ಚು ದೇಶಗಳೆಡೆಗಿದೆ. ಚೀನಾ, ಇರಾನ್, ರಿಪಬ್ಲಿಕ್ ಆಫ್ ಕೊರಿಯಾ, ಇಟಲಿ ಮತ್ತು ಜಪಾನ್ನಿಂದ ದೂರ ಇರುವಂತೆ ಭಾರತೀಯರಿಗೆ ಸಲಹೆ ನೀಡಿದ್ದೇವೆ. ಹಾಗೆಯೇ 19 ದೇಶಗಳಿಗೆ ಅನಗತ್ಯ ಪ್ರವಾಸ ಬೇಡ ಎಂದೂ ಹೇಳಿದ್ದೇವೆ. ಜೊತೆಗೆ ವಿದೇಶಗಳಿಗೆ ತೆರಳುವಾಗ ಸರಳ ಆರೋಗ್ಯ ಸಲಹೆಗಳನ್ನು ಅನುಸರಿಸುವಂತೆ ಹೇಳಿದ್ದೇವೆ.
ಥೈಲ್ಯಾಂಡ್ನಿಂದ ಆಗಮಿಸುವ ಪ್ರವಾಸಿಗರನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತಿದೆ. ಆದಾಗ್ಯೂ ದೆಹಲಿಯಲ್ಲಿ ಪತ್ತೆಯಾದ ಮೂರನೇ ಪ್ರಕರಣದಲ್ಲಿ ವ್ಯಕ್ತಿ ಏರ್ಪೋರ್ಟ್ನಿಂದ ಪರೀಕ್ಷೆಗೆ ಒಳಪಡದೆ ತಪ್ಪಿಸಿಕೊಂಡಿದ್ದು ಹೇಗೆ? ಕೇರಳ ರೋಗಿ ಕೂಡ ತಪ್ಪಿಸಿಕೊಂಡಿದ್ದು ಹೇಗೆ?
ನನಗೆ ದೆಹಲಿ ಪ್ರಕರಣದ ಬಗ್ಗೆ ಗೊತ್ತಿದೆ. ಆತ ಫೆಬ್ರವರಿ 23ರಂದು ಭಾರತಕ್ಕೆ ಮರಳಿದ್ದ. ಆದರೆ ಥೈಲ್ಯಾಂಡ್ನಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡಿದ್ದು ಫೆ.25ರಿಂದ. ಆ ಸಮಯದಲ್ಲಿ ಆತನಲ್ಲಿ ರೋಗದ ಲಕ್ಷಣವೂ ಕಂಡುಬಂದಿಲ್ಲ.
ಇದಲ್ಲದೆ, ಮೂರು ಕೇರಳ ರೋಗಿಗಳಿಗೆ ಸಂಬಂಧಪಟ್ಟಂತೆ, ಅವರು ಫೆಬ್ರವರಿ 29ರಂದು ಭಾರತಕ್ಕೆ ಬಂದಿದ್ದರು. ಆನ್ಬೋರ್ಡ್ ಪ್ರಕಟಣೆಗಳು, ಸೂಚನೆಗಳು ಮತ್ತು ಸಹಾಯ ಕೇಂದ್ರದ ಹೊರತಾಗಿಯೂ ಅವರು ತಮ್ಮ ಪ್ರಯಾಣದ ಇತಿಹಾಸವನ್ನು ಸ್ವಯಂಪ್ರೇರಣೆಯಿಂದ ವರದಿ ಮಾಡಲಿಲ್ಲ. ಸ್ಕ್ರೀನಿಂಗ್ ಸಮಯದಲ್ಲಿ ಅವರಲ್ಲಿ ರೋಗ ಲಕ್ಷಣ ಇರಲಿಲ್ಲ.
ದೆಹಲಿ ಗಲಭೆ ವಿಷಯವನ್ನು ಮುಚ್ಚಿಹಾಕಲು ದೇಶದಲ್ಲಿ ಕೊರೋನಾ ಭೀತಿ ಹುಟ್ಟಿಸಲಾಗುತ್ತಿದೆ ಎಂದು ಕೆಲ ಮುಖ್ಯಮಂತ್ರಿಗಳು ಆರೋಪಿಸುತ್ತಿದಾರೆ. ನೀವೇನು ಹೇಳುತ್ತೀರಿ?
ಇಂಥ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ನಾನು ಮಾತಾಡುವುದಿಲ್ಲ. ಒಬ್ಬ ಆರೋಗ್ಯ ಸಚಿವನಾಗಿ ಸದ್ಯ ನನ್ನ ಗಮನ ಏನಿದ್ದರೂ ಸೋಂಕು ನಿಯಂತ್ರಣಕ್ಕೆ ಸಾಧ್ಯವಾದಷ್ಟುಕ್ರಮ ಕೈಗೊಳ್ಳುವುದು. ಈ ಸಂದರ್ಭದಲ್ಲಿ ಮಾಧ್ಯಮಗಳು ನಮ್ಮೊಂದಿಗೆ ಕೈಜೋಡಿಸಿ, ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಕೊರೋನಾ ಭೀತಿ: 'ವಾಟ್ಸಾಪ್ನಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಹೆದರಬೇಡಿ'
ಆಯುಷ್ ಸಚಿವಾಲಯ ಕೊರೋನಾ ವೈರಸ್ ನಿಯಂತ್ರಣಕ್ಕೆ ಪರ್ಯಾಯ ಔಷಧಗಳನ್ನು ಬಳಸಬಹುದು ಎಂಬ ಅಡ್ವೈಸರಿಯನ್ನು ಬಿಡುಗಡೆ ಮಾಡಿದೆ. ಯೋಗ ಮತ್ತು ಗೋಮೂತ್ರ ಕೊರೋನಾವನ್ನು ಗುಣಪಡಿಸಬಲ್ಲವು ಎಂಬ ಗ್ರಹಿಕೆ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಆಯುರ್ವೇದ ಮತ್ತು ಯೋಗದ ಶಕ್ತಿಯ ಬಗ್ಗೆ ನನಗೆ ಪೂರ್ಣ ನಂಬಿಕೆ ಇದೆ. ಇವೆರಡೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದಾಗ್ಯೂ ಆಯುಷ್ ಸಚಿವಾಲಯ ತಾನು ಫೆ.4 ಮತ್ತು ಜನವರಿ 29ರಂದು ಬಿಡುಗಡೆ ಮಾಡಿದ ಅಡ್ವೈಸರಿ ಬಗ್ಗೆ ಸ್ಪಷ್ಟೀಕರಣ ನೀಡಿ, ಈ ಅಡ್ವೈಸರಿಯು ಮುನ್ನೆಚ್ಚರಿಕಾ ಕ್ರಮ ಮಾತ್ರ ಎಂದಿದೆ.
ವೈರಸ್ ನಿಯಂತ್ರಣಕ್ಕೆ ಇನ್ನೂ ಎಷ್ಟು ಸಮಯ ಬೇಕು?
ಮುಂದಿನ ಒಂದು ವಾರದಲ್ಲಿಯೇ ಕಡಿಮೆಯಾಗಲಿದೆ ಎಂದು ನನಗನಿಸುತ್ತಿದೆ. ಆದಾಗ್ಯೂ ಇತರ ದೇಶಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತವೆ, ಜನರಲ್ಲಿ ಎಷ್ಟರ ಮಟ್ಟಿಗೆ ಅರಿವು ಮೂಡಿದೆ ಎಂಬ ಅಂಶಗಳೂ ಮುಖ್ಯವಾಗುತ್ತವೆ.
ಚೀನಾದ ವಸ್ತುಗಳ ಮೇಲಿನ ಆಮದು ನಿರ್ಬಂಧ ಎಷ್ಟರ ಮಟ್ಟಿಗೆ ಔಷಧ ಲಭ್ಯತೆ ಮೇಲೆ ಪ್ರಭಾವ ಬೀರುತ್ತದೆ. ನಮ್ಮಲ್ಲಿ ಎಷ್ಟುದಾಸ್ತಾನು ಇದೆ?
ಚೀನಾದ ವಸ್ತುಗಳ ಮೇಲೆ ಆಮದು ನಿರ್ಬಂಧ ಹೇರಿದ ಬಳಿಕ ಔಷಧಗಳ ಕೊರತೆ ಉಂಟಾಗದಂತೆ ಔಷಧ ಇಲಾಖೆಯು ಈ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ನಮ್ಮಲ್ಲಿ 5-9 ತಿಂಗಳಿಗೆ ಬೇಕಾಗುಷ್ಟುಔಷಧ ದಾಸ್ತಾನು ಇದೆ. ಹಾಗಾಗಿ ನಿರ್ಬಂಧವು ಔಷಧಗಳ ಲಭ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- ಸಂದರ್ಶನ
ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವ