ಸಂಬಂಧ ಮುಂದುವರಿಸಲು ನಿರಾಕರಣೆ: ಗೋವಾ ಬೀಚ್ನಲ್ಲಿ ಚಾಕುವಿನಿಂದ ಇರಿದು ಯುವತಿಯ ಹತ್ಯೆ
- ಸಂಬಂಧ ಮುಂದುವರಿಸಲು ನಿರಾಕರಣೆ
- ಚಾಕುವಿನಿಂದ ಇರಿದು 19 ವರ್ಷದ ಯುವತಿಯ ಕೊಲೆ
- ಗೋವಾ ಪೊಲೀಸರಿಂದ 26 ವರ್ಷದ ಯುವಕನ ಬಂಧನ
ಪಣಜಿ: ಸಂಬಂಧ ಮುಂದುವರಿಸಲು ನಿರಾಕರಿಸಿದ 19 ವರ್ಷ ಪ್ರಾಯದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಗೋವಾದ ಬೀಚ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ಕಿಶನ್ ಕಲಂಗುಟ್ಕರ್ (Kishan Kalangutkar) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಗೋವಾದ (South Goa) ವೆಲ್ಸೊನ್ ಬೀಚ್ನಲ್ಲಿ (Velsaon beach) ಈ ಘಟನೆ ನಡೆದಿದೆ. ಬೀಚ್ನಲ್ಲಿ ಶವ ಪತ್ತೆಯಾದ ಒಂದು ದಿನದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯೂ 19 ವರ್ಷ ಪ್ರಾಯದ ಯುವತಿಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದ. ಆಕೆ ಕಾಲೇಜೊಂದರಲ್ಲಿ ಓದುತ್ತಿದ್ದ ಆಕೆ ಬುಧವಾರ ಈತನೊಂದಿಗೆ ಬೀಚ್ಗೆ ಬಂದಿದ್ದಳು ಎಂದು ದಕ್ಷಿಣ ಗೋವಾದ ಸೂಪರಿಟೆಂಡೆಂಟ್ ಆಪ್ ಪೊಲೀಸ್ ಅಭಿಷೇಕ್ ಧನಿಯಾ (Abhishek Dhania) ಹೇಳಿದ್ದಾರೆ. ಆಕೆ ಈ ಸಂಬಂಧವನ್ನು ಇನ್ನು ಮುಂದೆ ಮುಂದುವರಿಸಲಾಗದು ಎಂದು ಹೇಳಿದ ಹಿನ್ನೆಲೆಯಲ್ಲಿ ಆರೋಪಿ ಆಕೆಯ ವಿರುದ್ಧ ಅಸಮಾಧಾನಗೊಂಡಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಯಸಿಯನ್ನು ಭಯಾನಕವಾಗಿ ಕೊಂದ ಪಾಗಲ್ ಪ್ರೇಮಿ, ಕ್ರೈಂ ಸೀನ್ ನೋಡಿ ಬೆಚ್ಚಿ ಬಿದ್ದ ಪೊಲೀಸರು!
ಆಕೆಯ ನಿರ್ಧಾರದಿಂದ ಕೋಪಗೊಂಡ ಆತ ಸ್ಥಳದಲ್ಲೇ ಆಕೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಇರಿತದಿಂದಾಗಿ ಸ್ಥಳದಲ್ಲೇ ಪ್ರಾಣಬಿಟ್ಟ ಆಕೆಯ ದೇಹವನ್ನು ಬೀಚ್ ಬಳಿ ಬೆಳೆದಿದ್ದ ಪೊದೆಗಳಲ್ಲಿ ಎಸೆದು ಹೋಗಿದ್ದ. ಇದಾದ ಬಳಿಕ ಯುವತಿಯ ಮೃತದೇಹ ಕಂಡ ಯಾರೋ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪೊದೆಯಲ್ಲಿದ್ದ ಶವವನ್ನು ಹೊರ ತೆಗೆದು ಮಹಜರಿಗೆ ಕಳುಹಿಸಿ ತನಿಖೆ ಆರಂಭಿಸಿದ್ದಾರೆ. ಬಳಿಕ ಆರೋಪಿ ಕಿಶನ್ ಕಲಂಗುಟ್ಕರ್ನನ್ನು ಬಂಧಿಸಿದ್ದಾರೆ.
ಮದುವೆ ವಾರ್ಷಿಕೋತ್ಸವದ ಸಂಭ್ರಮದ ದಿನವೇ ಪಾಪಿ ಪತಿ ಪತ್ನಿಯನ್ನು ಕೊಲೆ (Murder) ಮಾಡಿದ ಘಟನೆ ಕೆಲ ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಪತ್ನಿಗೆ ನೇಣು ಹಾಕಿ ಕೊಲೆ ಮಾಡಿ ಪಾಪಿ ಪತಿರಾಯ ಭೀಮರಾಯ ಎಸ್ಕೆಪ್ ಆಗಿದ್ದ. ಸೌರಾಷ್ಟ್ರಹಳ್ಳಿಯ ಪಾರ್ವತಿ ಹಾಗೂ ಗೋಪಾಳಪುರ ಗ್ರಾಮದ ಭೀಮರಾಯ ನಡುವೆ ಕಳೆದ ವರ್ಷ ಮೇ 13 ರಂದು ಗೋಪಾಳಪುರ ಗ್ರಾಮದಲ್ಲಿ ವಿವಾಹವಾಗಿತ್ತು. ಭೀಮರಾಯ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ದಂಪತಿಗಳು ಆರಂಭದ ಕೆಲ ತಿಂಗಳ ಕಾಲ ಪರಸ್ಪರ ಪ್ರೀತಿಯಿಂದ ಇದ್ದರು. ಆದರೆ, ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಗಂಡ ಭೀಮರಾಯ ಹೆಂಡತಿ ಪಾರ್ವತಿ ಜೊತೆ ಜಗಳ ಮಾಡುತ್ತಿದ್ದನಂತೆ. ಈ ವಿಚಾರವಾಗಿ ಇಬ್ಬರ ನಡುವೆ ನಿರಂತರವಾಗಿ ಜಗಳ ನಡೆಯುತಿತ್ತು.
ರಾಯಚೂರು: ಒಂದು ಹೆಣ್ಣಿಗಾಗಿ ಇಬ್ಬರ ಕಿತ್ತಾಟ, ಕೊಲೆಯಲ್ಲಿ ಅಂತ್ಯ
ಈ ಮಧ್ಯೆ ಯಲ್ಹೇರಿ ಗ್ರಾಮದ ಜಾತ್ರೆ ಹಿನ್ನೆಲೆ ಬೆಂಗಳೂರಿನಿಂದ ದಂಪತಿಗಳು ಗೋಪಾಳಪುರ ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿ ವಾಸವಾಗಿದ್ದರು. ಮೇ 13ರಂದು ಮದುವೆ ವಾರ್ಷಿಕೋತ್ಸವದ ದಿನ, ಇಬ್ಬರ ನಡುವೆ ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಜಗಳ ಶುರುವಾಗಿದ್ದು, ತಡರಾತ್ರಿ ಭೀಮರಾಯ ಪತ್ನಿ ಪಾರ್ವತಿಗೆ ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನೇ ಅಕ್ಕ ಕೊಲೆ ಮಾಡಿದ ಘಟನೆಯೊಂದು ಹುಬ್ಬಳ್ಳಿಯ ನೂಲ್ವಿ ಗ್ರಾಮದ ಹೊರವಲಯದಲ್ಲಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲಿಯೆ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌಡ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು.