Asianet Suvarna News Asianet Suvarna News

ಪ್ರಾರ್ಥನೆ ಜೊತೆಗೆ ಸಂವಿಧಾನದ ಪೂರ್ವ ಪೀಠಿಕೆ ಪಠಣ ಕಡ್ಡಾಯ: ಸರ್ಕಾರ!

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಪಠಣ ಕಡ್ಡಾಯ|ಬೆಳಗಿನ ಪ್ರಾರ್ಥನೆ ಜೊತೆಗೆ ಪೂರ್ವ ಪೀಠಿಕೆ ಪಠಣ| ಜ.26ರಂದು ಗಣರಾಜ್ಯೋತ್ಸವ ದಿನಚಾರಣೆ ವೇಳೆ ಹೊಸ ಆದೇಶ ಜಾರಿ| ಮಹಾರಾಷ್ಟ್ರ ಸರ್ಕಾರದಿಂದ ಪೂರ್ವ ಪೀಠಿಕೆ ಪಠಣ ಕಡ್ಡಾಯ ಆದೇಶ| ಮಕ್ಕಳಲ್ಲಿ ಸಂವಿಧಾನದ ಮಹತ್ವ ದ ಅರಿವು ಮೂಡಿಸುವ ಉದ್ದೇಶ ಎಂದ ಸಚಿವೆ ವರ್ಷಾ ಗಾಯಕ್‌ವಾಡ್| 

Maharashtra Government Made Text Of Preamble Of The Constitution Compulsory In Schools
Author
Bengaluru, First Published Jan 22, 2020, 12:52 PM IST

ಮುಂಬೈ(ಜ.22): ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇನ್ನು ಮುಂದೆ ಬೆಳಗ್ಗೆಯ ಪ್ರಾರ್ಥನೆ ವೇಳೆ, ಸಂವಿಧಾನದ ಪೂರ್ವ ಪೀಠಿಕೆ ಹೇಳುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಇದೇ ಜ.26ರಂದು ಗಣರಾಜ್ಯೋತ್ಸವ ದಿನಚಾರಣೆ ದಿನದಂದು ಈ ಹೊಸ ಆದೇಶ ಜಾರಿಗೆ ಬರಲಿದೆ ಎಂದು ಸಚಿವೆ ವರ್ಷಾ ಗಾಯಕ್‌ವಾಡ್ ಸ್ಪಷ್ಟಪಡಿಸಿದ್ದಾರೆ.

ಮಕ್ಕಳಲ್ಲಿ ಸಂವಿಧಾನದ ಮಹತ್ವ ಹಾಗೂ ಅದರ ಗುಣ ವಿಶೇಷತೆಗಳ ಕುರಿತು ಜಾಗೃತಿ ಮೂಡಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರ್ಷಾ ಗಾಯಕ್‌ವಾಡ್ ಹೇಳಿದ್ದಾರೆ.

ಇವರಲ್ವೇ ಹಿರಿಯರು: ಬಿಡಿಗಾಸೂ ಪಡೆಯದೆ ಇಡೀ ಸಂವಿಧಾನ ಕೈಯ್ಯಲ್ಲೇ ಬರೆದರು!

ಬೆಳಗಿನ ಪ್ರಾರ್ಥನೆ ಜೊತೆಗೆ ಸಂವಿಧಾನದ ಪೂರ್ವ ಪೀಠಿಕೆ ಹೇಳುವುದು ಇನ್ನು ಮುಂದೆ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ಎಂದು ವರ್ಷಾ ಗಾಯಕ್‌ವಾಡ್ ಸುದ್ದಿಗಾರರಿಗೆ ತಿಳಿಸಿದರು.

2013ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಈ ಕುರಿತು ಆದೇಶ ಹೊರಡಿಸಿತ್ತಾದರೂ, ಅದನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿರಲಿಲ್ಲ. ನಂತರ ಸರ್ಕಾರ ಬದಲಾಗಿ ಈ ನಿರ್ಣಯ ನೇಪಥ್ಯಕ್ಕೆ ಸರಿದಿತ್ತು.

Follow Us:
Download App:
  • android
  • ios