Asianet Suvarna News Asianet Suvarna News

ಗೋರಿಗಳ ಮೇಲೆ ರಾಮ ಮಂದಿರ ನಿರ್ಮಾಣ ಮಾಡ್ತಿರಾ? ಹೊಸ ನಾಟಕ ಶುರು!

'ಮುಸ್ಲಿಮರ ಗೋರಿಗಳ ಮೇಲೆ ರಾಮ ಮಂದಿರ ಕಟ್ತಿರಾ'? 'ಗೋರಿಗಳ ಮೇಲೆ ಮಂದಿರ ನಿರ್ಮಾಣ ಸರಿಯಾದ ನಿರ್ಧಾರವೇ'? 'ಸನಾತನ ಧರ್ಮದ ಉಲ್ಲಂಘನೆ ಮಾಡಿದಂತಾಗುವುದಿಲ್ಲವೇ?'| ರಾಮ ಮಂದಿರ ನಿರ್ಮಾಣಕ್ಕೆ ಕ್ಯಾತೆ ತೆಗೆದ ವಕೀಲ ಎಂ.ಆರ್. ಶಂಷದ್| ದೇವಾಲಯ ಟ್ರಸ್ಟ್ ಸಮಿತಿಗೆ ಪತ್ರ ಬರೆದ ವಕೀಲ ಎಂ.ಆರ್.ಶಂಷದ್| ಬಾಬ್ರಿ ಮಸೀದಿ ನೆಲಸಮವಾದ ಸ್ಥಳದ ಸುತ್ತ ಸ್ಮಶಾನವಿದೆ ಎಂದ ವಕೀಲ ಶಂಷದ್| ಗೋರಿಗಳ ಮೇಲೆ ಮಂದಿರ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿ ದೇವಾಲಯ ಸಮಿತಿಗೆ ಪತ್ರ|

Lawyer Shamshad Says Ram Temple Construction On Muslim Graves Violation of Religion Says
Author
Bengaluru, First Published Feb 18, 2020, 4:26 PM IST

ಅಯೋಧ್ಯೆ(ಫೆ.18): ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ. ಅದರಂತೆ ಕೇಂದ್ರ ಸರ್ಕಾರ ಕೂಡ ಭೂಮಿ ಪರಭಾರೆಗೆ ಸಮಿತಿ ರಚಿಸಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆದರೆ ಈ ಪ್ರಕ್ರಿಯೆಗೆ ತಡೆ ನೀಡಲು ಮುಂದಾಗಿರುವ ವಕೀಲ ಎಂ.ಆರ್ ಶಂಷದ್, ಹೊಸ ಕ್ಯಾತೆಯೊಂದನ್ನು ತೆಗೆದಿದ್ದಾರೆ. ಉದ್ದೇಶಿತ ರಾಮ ಮಂದಿರ ಕಟ್ಟುವ ಜಾಗದಲ್ಲಿ ಮುಸ್ಲಿಮರ ಗೋರಿಗಳಿದ್ದು, ಗೋರಿಗಳ ಮೇಲೆ ಮಂದಿರ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ದೇವಾಲಯ ಟ್ರಸ್ಟ್ ನಾಯಕತ್ವ ವಹಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕೆ.ಕೆ. ಪರಾಶರನ್ ಪತ್ರ ಬರೆದಿರುವ ಶಂಷದ್, ಗೋರಿಗಳ ಮೇಲೆ ಮಂದಿರ ಕಟ್ಟಿದರೆ ಸನಾತನ ಧರ್ಮದ ಉಲ್ಲಂಘನೆ ಮಾಡಿದಂತ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

"In view of Sanatan Dharma, you need to consider whether the Ram Temple can have a foundation of Muslim graves"- Advocate M.R Shamshad writes to newly-formed #RamMandir trust, requesting them to leave out the graveyard part of the 67-acres.

Reporting:
https://t.co/kdkhJddL5Q

— Fatima Khan (@khanthefatima) February 17, 2020

ಬಾಬ್ರಿ ಮಸೀದಿ ನೆಲಸಮವಾದ ಸ್ಥಳದ ಸುತ್ತ ಸ್ಮಶಾನವಿದೆ. 1885ರ ಗಲಭೆಯಲ್ಲಿ ಮೃತಪಟ್ಟ 75 ಮುಸ್ಲಿಮರನ್ನು ಅಲ್ಲಿಯೇ ಸಮಾಧಿ ಮಾಡಲಾಗಿದೆ. ಹೀಗಾಗಿ ಗೋರಿಗಳ ಮೇಲೆ ಮಂದಿರ ನಿರ್ಮಿಸುವುದರಿಂದ ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಶಂಷದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಸ್ಲಿಮರ ಸಮಾಧಿಯ ಮೇಲೆ ರಾಮ ಮಂದಿರ ನಿರ್ಮಿಸುವುದು ಸರಿಯೇ ಎಂದು ಪರಿಗಣಿಸುವಂತೆ ಪತ್ರದಲ್ಲಿ ಕೋರಲಾಗಿದೆ. ಈ ಮೂಲಕ ಮಂದಿರ ನಿರ್ಮಾಣಕ್ಕೆ ತಡೆ ನೀಡುವ ಪ್ರಯತ್ನ ಮಾಡಲಾಗಿದ್ದು, ಈ ಕುರಿತು ದೇವಾಲಯ ಸಮಿತಿ ಏನು ನಿರ್ಧಾರ ತಳೆಯಲಿದೆ ಕಾದು ನೋಡಬೇಕಿದೆ.

Follow Us:
Download App:
  • android
  • ios