Asianet Suvarna News Asianet Suvarna News

ಹಿಜ್ಬುಲ್ ಮುಜಾಹಿದ್ದೀನ್‌ ಸ್ಫೋಟಕ ತಜ್ಞ ಮಟಾಶ್, ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ!

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪದನಾ ಸಂಘಟನೆಯ ಒಬ್ಬಬ್ಬ ಉಗ್ರರನ್ನು ಭಾರತೀಯ ಸೇನೆ ನರಕಕ್ಕೆ ಕಳುಹಿಸುತ್ತಿದೆ. ಇತ್ತೀಚೆಗೆ ಹಿಜ್ಬುಲ್  ಕಮಾಂಡರ್ ರಿಯಾಝ್ ನೈಕೂಗೆ ನರಕ ತೋರಿಸಿದ ಬೆನ್ನಲ್ಲೇ, ಇದೀಗ IED ತಜ್ಞನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆದರೆ ಉಗ್ರರ ಕಾಳಗದಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವುದು ತೀವ್ರ ನೋವು ತಂದಿದೆ.

Indian Army killed IED expert of Hizb ul Mujahideen in encounter at Jammu and Kashmir
Author
Bengaluru, First Published May 18, 2020, 3:19 PM IST

ದೋಡಾ(ಮೇ.18): ಜಮ್ಮ ಮತ್ತು ಕಾಶ್ಮೀರದ ಗುಂಡಾನ ಜಿಲ್ಲೆಯ ದೋಡಾ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ವಾದನೆ ಸಂಘಟನೆಯ ಸುಧಾರಿತ ಸ್ಫೋಟಕ ತಜ್ಞ(IED)ತಾಹೀರ್ ಅಹಮ್ಮದ್ ಭಟ್‌ನನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಸೇನೆ ನಡೆಸಿದ ಕಾರ್ಯಚರಣೆಯಲ್ಲಿ ತಾಹಿರ್ ಅಹಮ್ಮದ್ ಜೊತೆ ಇನ್ನೋರ್ವ ಉಗ್ರ ಹತನಾಗಿರುವ ಶಂಕೆ ವ್ಯಕ್ತವಾಗಿದೆ.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಉಗ್ರರೊಂದಿಗನ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ(10RR) ಯೋಧ ಹುತಾತ್ಮರಾಗಿದ್ದಾರೆ. ಸದ್ಯ ಕಾರ್ಯಚರಣೆ ನಡೆಸಿದ ಸ್ಥಳದಿಂದ ಛಿದ್ರವಾಗಿರುವ ವಸ್ತುಗಳನ್ನು ಹೊರತೆಗೆಯಲಾಗುತ್ತಿದೆ. ಉಗ್ರರ ಅಡಗುತಾಣ ಗುರುತಿಸಿ ಕಾರ್ಯಚರಣೆ ನಡೆಸಲಾಗಿದೆ.  ಉಗ್ರ ತಾಹಿರ್ ಅಹಮ್ಮದ್ ಜೊತೆ ಮತ್ತೊರ್ವ ಉಗ್ರ ಹತನಾಗಿರುವ ಕುರಿತು ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ ಎಂದು ದೋಡಾ ಜಿಲ್ಲಾ ಪೊಲೀಸ್ ಮುಮ್ತಾಝ್ ಅಹಮ್ಮದ್ ಹೇಳಿದ್ದಾರೆ.

ಕೂಡಿಟ್ಟ ಹಣ, ಪಿಎಂ ಕೇರ್ಸ್ ಫಂಡ್‌ಗೆ ದಾನ ಮಾಡಿದ ಹುತಾತ್ಮ ಯೋಧನ ಪತ್ನಿ!

ತಾಹಿರ್ ಅಹಮ್ಮದ್ ಬಳಸುತ್ತಿದ್ದ AK47 ಗನ್, ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿ ತಾಹೀರ್ ಅಹಮ್ಮದ್ ಸುಧಾರಿತ ಸ್ಫೋಟಕ ತಜ್ಞನಾಗಿ ಗುರುತಿಸಿಕೊಂಡಿದ್ದ. 2019ರ ಮಾರ್ಚ್ ತಿಂಗಳಲ್ಲಿ ಬನಿಹಾಲ್ ವಲಯದಲ್ಲಿ CRPF ಬೆಂಗಾವಲು ವಾಹನದ ಮೇಲೆ IED ಸ್ಫೋಟಿಸಿದ್ದ. 2019ರ ಏಪ್ರಿಲ್ ತಿಂಗಳಲ್ಲಿ RSS ಕಾರ್ಯಕರ್ತ ಚಂದ್ರಕಾಂತ್ ಶರ್ಮಾ ಹಾಗೂ ಮತ್ತೊರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.

ಚೆನಾಬ್ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ IED ತಜ್ಞ ತಾಹೀರ್ ಅಹ್ಮಮ್ಮದ್ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ನೇಮಿಸಿಕೊಳ್ಳುತ್ತಿದ್ದ. ಯುವರಿಗೆ ಹಾಗೂ ಅವರ ಕುಟುಂಬಕ್ಕೆ ಹಣದ ಆಮಿಷ ನೀಡಿ ಭಯೋತ್ವಾದನೆ ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದ. ಇದೀಗ ಚೆನಾಬ್ ಕಣಿವೆಯಲ್ಲಿ ಸೇನೆಯ ಕಾರ್ಯಚರಣೆ ಆರಂಭಗೊಂಡಿದೆ.

Follow Us:
Download App:
  • android
  • ios