Asianet Suvarna News Asianet Suvarna News

ಗುರುವಾಯೂರು ದೇಗುಲದ ಗಜರತ್ನಂ ಪದ್ಮನಾಭನ್‌ ಆನೆ ಇನ್ನಿಲ್ಲ!

ಕೇರಳ ಗುರುವಾಯೂರು ದೇಗುಲದ ಗಜರತ್ನಂ ಪದ್ಮನಾಭನ್‌ ಆನೆ ಇನ್ನಿಲ್ಲ| ಅತ್ಯಂತ ಜನಪ್ರಿಯ ಆನೆಗಳ ಪೈಕಿ ಒಂದಾದ ಗಜರತ್ನಂ

Guruvayur temple elephant Gajaratnam Padmanabhan dies at 84
Author
Bangalore, First Published Feb 28, 2020, 7:44 AM IST

ತ್ರಿಶ್ಶೂರ್‌[ಫೆ.28]: ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಗುರುವಾಯೂರು ದೇಗುಲದ ಅತ್ಯಂತ ಜನಪ್ರಿಯ ಆನೆಗಳ ಪೈಕಿ ಒಂದಾದ ಗಜರತ್ನಂ ಗುರುವಾಯೂರು ಪದ್ಮನಾಭನ್‌ ಬುಧವಾರ ಸಾವಿಗೀಡಾಗಿದೆ.

ದೇವಾಲಯದ ಕೃಷ್ಣನ ಮೂರ್ತಿಯನ್ನು ಈ ಆನೆ ಹೊರುತ್ತಿತ್ತು. 84 ವರ್ಷದ ಈ ಆನೆ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಪಾಲಕ್ಕಾಡಿನ ಒಟ್ಟಪಲ್ಲಂನಲ್ಲಿ 1954ರಲ್ಲಿ ಜನಿಸಿದ ಈ ಆನೆ, ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿತ್ತು.

ಕಳೆದ 66 ವರ್ಷಗಳಿಂದ ಶ್ರೀ ಕೃಷ್ಣನ ಮೂರ್ತಿಯನ್ನು ಹೊತ್ತು ದೇವಾಲಯದ ಉತ್ಸವದಲ್ಲಿ ಭಾಗಿ ಆಗುತ್ತಿತ್ತು. ತನ್ನ ಉದ್ದನೆಯ ದಂತ ಮತ್ತು ದೈತ್ಯ ದೇಹದ ಕಾರಣದಿಂದ ಗಜರತ್ನ ಎಂಬ ಬಿರುದಿಗೆ ಪಾತ್ರವಾಗಿತ್ತು.

Follow Us:
Download App:
  • android
  • ios