ಅನೈತಿಕ ಸಂಬಂಧದ ವಿಡಿಯೋ ವಿಚಾರ : ತಂದೆ, ಮಗನ ಕೊಲೆ
ಅನೈತಿಕ ಸಂಬಂಧದ ವಿಚಾರವಾಗಿ ತಂದೆ ಮಗನನ್ನು ಸಂಬಂಧಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಕೊಲೆಯ ಹಿಂದೆ ವೈಯಕ್ತಿಕ ದ್ವೇಷವೂ ಇದೆ ಎನ್ನಲಾಗಿದೆ.
ಜಾವಗಲ್ [ಅ.16]: ಅನೈತಿಕ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಾವಗಲ್ ಸಮೀಪದ ಗುಡ್ಡದ ಕೆಂಗನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಗಂಗಪ್ಪ (70) ಮತ್ತು ಅವರ ಮಂಜು (28) ಕೊಲೆಯಾದವರು. ಕೃಷ್ಣಪ್ಪ ಕೊಲೆಗೈದ ಆರೋಪಿ. ಕೃಷ್ಣಪ್ಪ ಮತ್ತು ಗಂಗಪ್ಪ ಇಬ್ಬರು ಸಹೋದರ ಸಂಬಂಧಿಗಳು.
ಘಟನೆ ವಿವರ: ಆರೋಪಿ ಕೃಷ್ಣಪ್ಪನ ಪತ್ನಿಯೊಂದಿಗೆ ಕೊಲೆಯಾದ ಮಂಜು ಅನೈತಿಕ ಸಂಬಂಧ ಹೊಂದಿದ್ದ. ಈ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಸಾಕ್ಷ್ಯ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೃಷ್ಣಪ್ಪನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ನಂತರ ಎರಡೂ ಕುಟುಂಬದವರು ಒಮ್ಮತಕ್ಕೆ ಬಂದು ನ್ಯಾಯಪಂಚಾಯಿತಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ, ಮಂಜು ಪದೇಪದೆ ಕೃಷ್ಣಪ್ಪನಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಇದರಿಂದ ಬೇಸತ್ತ ಮಂಜು ಹಣ ಕೊಡುವುದಾಗಿ ಹೇಳಿ ಮಂಜುನನ್ನು ತೋಟದ ಮನೆಗೆ ಕರೆಸಿಕೊಂಡು ಮರದ ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈದಿದ್ದಾನೆ. ಈ ವೇಳೆ ಅಡ್ಡಬಂದ ಮಂಜು ತಂದೆ ಗಂಗಪ್ಪನನ್ನು ಕೂಡ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಇಬ್ಬರ ಮೃತದೇಹಗಳನ್ನು ತೆಂಗಿನ ಗರಿಯಿಂದ ಮುಚ್ಚಿಟ್ಟು ಪೊಲೀಸ್ ಠಾಣೆ ಹೋಗಿ ಶರಣಾಗಿದ್ದಾನೆ.
ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಯಕ್ತಿಕ ದ್ವೇಷವೂ ಕಾರಣ!
ಕೊಲೆಗೆ ಕೇವಲ ಅನೈತಿಕ ಸಂಬಂಧ ಒಂದೇ ಕಾರಣವಲ್ಲ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಕೊಲೆಯ ಸಂದರ್ಭದಲ್ಲಿ ಕೃಷ್ಣಪ್ಪನ ಮನೆಯ ಇತರೆ ಮೂರು ಜನ ಸದಸ್ಯರೂ ಸಾಥ್ ಎಂದು ಸ್ಥಳೀಯರು ಶಂಕೆವ್ಯಕ್ತಪಡಿಸಿದ್ದಾರೆ.