MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಪಿರಿಯಡ್ಸ್ ಸಮಯದಲ್ಲಿ ಹೆಣ್ಮಕ್ಕಳು ಉಪ್ಪಿನಕಾಯಿ ಮುಟ್ಟಬಾರದು ಅನ್ನೋದು ಯಾಕೆ ಗೊತ್ತ?

ಪಿರಿಯಡ್ಸ್ ಸಮಯದಲ್ಲಿ ಹೆಣ್ಮಕ್ಕಳು ಉಪ್ಪಿನಕಾಯಿ ಮುಟ್ಟಬಾರದು ಅನ್ನೋದು ಯಾಕೆ ಗೊತ್ತ?

ಮುಟ್ಟಿನ ಸಮಯದಲ್ಲಿ,  ಉಪ್ಪಿನಕಾಯಿಯನ್ನು ಮುಟ್ಟಬಾರದು ಅಂತ ನಮ್ಮ ಅಜ್ಜಿಯರು ಹೇಳಿರೋದನ್ನು ನೀವು ಕೇಳಿರಬೇಕು ಅಲ್ವಾ?. ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿಯನ್ನು ಸ್ಪರ್ಶಿಸೋದ್ರಿಂದ ಅದು ಬೇಗನೆ ಹಾಳಾಗುತ್ತದೆ ಅಂತೆ, ಅದು ನಿಜಾನ? ನೋಡೋಣ.  

2 Min read
Pavna Das
Published : Jan 22 2025, 05:38 PM IST| Updated : Jan 22 2025, 05:50 PM IST
Share this Photo Gallery
  • FB
  • TW
  • Linkdin
  • Whatsapp
15

ಮಹಿಳೆಯರಲ್ಲಿ ಮುಟ್ಟಿನ ಬಗ್ಗೆ ಅಥವಾ ಋತುಚಕ್ರದ (periods) ಬಗ್ಗೆ ಇಂದಿನ ಸಮಯದಲ್ಲಿ ಸಾಕಷ್ಟು ಜಾಗೃತಿ ಇದೆ. ಆದರೆ ಇಂದಿಗೂ, ಅನೇಕ ಮನೆಗಳಲ್ಲಿ, ಅಜ್ಜಿಯರು ಹೇಳಿದ ಕೆಲವು ವಿಷಯಗಳನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಉದಾಹರಣೆಗೆ ಯಾವುದೇ ವಸ್ತುಗಳನ್ನು ಮುಟ್ಟದಿರೋದು, ಮುಖ್ಯವಾಗಿ ಉಪ್ಪಿನಕಾಯಿಯನ್ನು ಮುಟ್ಟದಿರುವುದು (do not touch pickle on periods) ಇತ್ಯಾದಿ. ಅನೇಕ ಜನರು ಇದನ್ನು ಮೂಢನಂಬಿಕೆ ಎಂದು ಕರೆಯುತ್ತಾರೆ, ಇನ್ನೂ ಕೆಲವರು ಅದನ್ನು ಅನುಸರಿಸೋದು ಸರಿ ಎನ್ನುತ್ತಾರೆ. ನಿಜವಾಗಿಯೂ ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದ್ರೆ ಏನಾಗುತ್ತೆ?
 

25

ಋತುಚಕ್ರದ ಕುರಿತು ನಂಬಿಕೆಗಳು : 
ಮುಟ್ಟಿನ ಸಮಯದಲ್ಲಿ, ಉಪ್ಪಿನಕಾಯಿ ಮುಟ್ಟುವುದು, ಕೂದಲು ತೊಳೆಯುವುದು, ಕುಟುಂಬದೊಂದಿಗೆ ಮಲಗುವುದು, ದೇವಾಲಯಕ್ಕೆ ಹೋಗುವುದು (going to temple), ಅಡುಗೆಮನೆಗೆ ಹೋಗುವುದು, ಸಸ್ಯಗಳಿಗೆ ನೀರು ಹಾಕುವುದು ಎಲ್ಲವನ್ನೂ ನಿಷೇಧಿಸಲಾಗಿದೆ ಎಂದು ಅಜ್ಜಿಯರು ಅಥವಾ ನಮ್ಮ ಹಿರಿಯರು ನಂಬುತ್ತಾರೆ. ಮುಟ್ಟಿನ ಸಮಯದಲ್ಲಿ, ಮಹಿಳೆಯರನ್ನು ಹೆಚ್ಚಿನ ಎಲ್ಲಾ ಕೆಲಸಗಳಿಂದ ದೂರವಿರಿಸಲಾಗುತ್ತಿತ್ತು. ಈ ನಂಬಿಕೆಗಳನ್ನು ಇನ್ನೂ ಅನೇಕ ಮನೆಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದಾರೆ. 

35

ಉಪ್ಪಿನಕಾಯಿ ಮುಟ್ಟುವುದನ್ನು ಏಕೆ ನಿಷೇಧಿಸಲಾಗಿದೆ?
ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿಯನ್ನು ಮುಟ್ಟಬಾರದು ಎನ್ನುತ್ತಾರೆ ಅಜ್ಜಿಯಂದಿರು. ಮುಟ್ಟಿನ ಸಮಯದಲ್ಲಿ ಮಹಿಳೆ ಉಪ್ಪಿನಕಾಯಿಯನ್ನು ಮುಟ್ಟಿದರೆ, ಅದು ಬೇಗನೆ ಹಾಳಾಗುತ್ತದೆ ಎನ್ನುವ ನಂಬಿಕೆ ಅವರದ್ದು. ಆದಾಗ್ಯೂ, ಇದರ ಹಿಂದೆ ಯಾವುದೇ ವೈಜ್ಞಾನಿಕ ಸತ್ಯವಿಲ್ಲ. ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ (effects on health) ಅಂತ ಕೆಲವು ತಜ್ಞರು ಹೇಳುತ್ತಾರೆ. ಹಾಗಾಗಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಬಾರದಿರಲು, ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದರೆ, ಅದು ಹಾಳಾಗುತ್ತೆ, ಹಾಗಾಗಿ ಉಪ್ಪಿನಕಾಯಿ ಹತ್ತಿರವೂ ಸುಳಿಯಬಾರದು ಎಂದು ಹೇಳಲಾಗುತ್ತಿತ್ತು. 

45

ಇತರ ನಂಬಿಕೆಗಳು : 
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹಾನಿ ಮಾಡುವ ವಿಷಯಗಳಿಂದ ಮಹಿಳೆಯರನ್ನು ದೂರವಿಡಲಾಗುತ್ತದೆ. ಉದಾಹರಣೆಗೆ, ಮುಟ್ಟಿನ ಸಮಯದಲ್ಲಿ (periods time) ಅವರು ಅಶುದ್ಧರಾಗಿದ್ದಾರೆ ಎಂದು ಮಹಿಳೆಯರಿಗೆ ಹೇಳಲಾಗುತ್ತದೆ, ಈ ಕಾರಣದಿಂದಾಗಿ ಅವರನ್ನು ಅಡುಗೆಮನೆಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದರೆ ಇದರ ಹಿಂದಿನ ಕಾರಣವೆಂದರೆ ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹವು ದುರ್ಬಲವಾಗಿರುತ್ತದೆ. ಆ ಸಮಯದಲ್ಲಿ, ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲು ಅಡುಗೆಮನೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಯಿತು.

55

ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹದಿಂದ ಕೊಳಕು ರಕ್ತ ಹೊರಬರುತ್ತದೆ. ಇದಲ್ಲದೆ, ಆ ಸಮಯದಲ್ಲಿ ಮಹಿಳೆ ದೈಹಿಕವಾಗಿ ಮತ್ತು ಮಾನಸಿಕವಾಗಿ (mentally week) ತುಂಬಾ ದುರ್ಬಲಳಾಗಿದ್ದಾಳೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಮನೆಕೆಲಸಗಳಿಂದ ಆಕೆಗೆ ವಿಶ್ರಾಂತಿಯನ್ನು ನೀಡಲು , ಆಕೆಯನ್ನು ದೂರವಿಡುವ ಕ್ರಮಗಳನ್ನು ಅನುಸರಿಸಲಾಯಿತು, ಅದರ ನಂತರ ಮಹಿಳೆಯ ದೇಹವು ಸಂಪೂರ್ಣ ವಿಶ್ರಾಂತಿ ಪಡೆಯಬಹುದು. ಆದರೆ ನಂತರ ದಿನಗಳಲ್ಲಿ ಅದನ್ನು ನಂಬಿಕೆಯಂತೆ ಆಚರಿಸುತ್ತಾ ಬಂದಿದ್ದಾರೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಋತುಚಕ್ರ

Latest Videos
Recommended Stories
Recommended image1
ಪ್ರಾಣ ಸ್ನೇಹಿತೆಗೆ ದ್ರೋಹ ಬಗೆದು ಆಕೆಯ ಗಂಡನಿಂದಲೇ ಗರ್ಭಿಣಿಯಾದ ಖ್ಯಾತ ನಟಿ; ಮುಂದೇನಾಯ್ತು?
Recommended image2
ಚಳಿಗಾಲದಲ್ಲಿ ಚಪಾತಿ ಹಪ್ಪಳದಂತೆ ಗಟ್ಟಿಯಾಗಿದ್ರೆ ಹತ್ತಿಯಂತೆ ಸಾಫ್ಟ್‌ ಆಗಿರಲು ಇಷ್ಟು ಮಾಡಿದ್ರೆ ಸಾಕು
Recommended image3
ರಾಜ್ ಹೆಸರನ್ನು ಸಮಂತಾ ಬಲಗೈ ಮಧ್ಯದ ಬೆರಳಿನಲ್ಲಿ ಅಡಗಿಸಿಟ್ಟ ರಹಸ್ಯವೇನು? ನಟಿಯ ಗುಟ್ಟು ರಟ್ಟಾಯ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved