MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಅಂದುಕೊಂಡದ್ದು ತಕ್ಷಣ ನೆರವೇರಬೇಕೇ? ಹಾಗಿದ್ರೆ ಬೆಳಗ್ಗೆ ಯಾರಿಗೂ ಗೊತ್ತಾಗದಂತೆ ಈ ಕೆಲ್ಸ ಮಾಡಿ

ಅಂದುಕೊಂಡದ್ದು ತಕ್ಷಣ ನೆರವೇರಬೇಕೇ? ಹಾಗಿದ್ರೆ ಬೆಳಗ್ಗೆ ಯಾರಿಗೂ ಗೊತ್ತಾಗದಂತೆ ಈ ಕೆಲ್ಸ ಮಾಡಿ

ಜೀವನದಲ್ಲಿನ ಎಲ್ಲಾ ಸಮಸ್ಯೆ ನಿವಾರಣೆಯಾಗಿ ನೀವು ಅಂದುಕೊಂಡದ್ದೆಲ್ಲಾ, ನಿಜವಾಗಲು ಆರಂಭಿಸಿದ್ರೆ ಮತ್ತೇನು ಬೇಕಲ್ವಾ ಈ ಜೀವನದಲ್ಲಿ. ಇದೆಲ್ಲಾ ಆಗಬೇಕು ಅಂದ್ರೆ ಈ ಪರಿಹಾರವನ್ನು ಯಾರಿಗೂ ಗೊತ್ತಾಗದಂತೆ ಮಾಡಿ.  

2 Min read
Pavna Das
Published : Jun 30 2024, 05:05 PM IST
Share this Photo Gallery
  • FB
  • TW
  • Linkdin
  • Whatsapp
16

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಬರೋದು ಸಾಮಾನ್ಯ. ಆದ್ರೆ ಕೆಲವು ವ್ಯಕ್ತಿಗಳಿಗೆ ಎಷ್ಟೊಂದು ಸಮಸ್ಯೆ ಬರುತ್ತೆ ಅಂದ್ರೆ, ಅದರಿಂದ ಹೊರ ಬರೋದಕ್ಕೆ ಆಗದೇ ನರಳುತ್ತಾರೆ. ಈ ಸಮಸ್ಯೆ ಅನ್ನೋದು ಇದ್ಯಲ್ಲ, ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ದೇವತೆಗಳನ್ನೂ ಬಿಟ್ಟಿಲ್ಲ. ದೇವತೆಗಳನ್ನೆ ಬಿಟ್ಟಿಲ್ಲಾಂದ್ರೆ ಹುಲು ಮಾನವರು ನಾವು, ನಮಗೆ ಬಾರದೇ ಇದ್ದೀತೆ? ಆದ್ರೆ ಸಮಸ್ಯೆ ಬರೋದು ಒಳ್ಳೆಯದೇ… ಸಮಸ್ಯೆ ಬಂದ್ರೇನೆ ಮನುಷ್ಯ ಸ್ಟ್ರಾಂಗ್ ಆಗಿ ಜೀವಿಸೋಕೆ ಸಾಧ್ಯ. ಸಮಸ್ಯೆಗಳನ್ನು ಎದುರಿಸೋಕೆ ವಾಸ್ತು ನಿಯಮವೊಂದನ್ನ (vastu tips) ಹೇಳುತ್ತೀವಿ ಕೇಳಿ. ಇದನ್ನ ಮಾಡಿದ್ರೆ, ನಿಮ್ಮ ಎಲ್ಲಾ ಮನೋಕಾಮನೆಗಳು ಈಡೇರುತ್ತೆ. 

26

ನಾವಿಲ್ಲಿ ತಿಳಿಸ್ತಿರೋ ಪರಿಹಾರವನ್ನ ನೀವು ಮಂಗಳವಾರವೇ ಮಾಡಬೇಕು. ಮಂಗಳವಾರ ಮುಂಜಾನೆ ಸೂರ್ಯೋದಯಕ್ಕೂ (before sunrise) ಮುನ್ನ ಎದ್ದು ಸ್ನಾನ ಮಾಡಿ ಫ್ರೆಶ್ ಆಗಿ. ಈ ಉಪಾಯ ಮಾಡೊದಕ್ಕೆ ನಿಮಗೆ ಒಂದು ಚಮಚ ಕುಂಕುಮ ಬೇಕು. ಇದನ್ನ ದೇಹಕ್ಕೆ ಮೇಲಿಂದ ಕೆಳಗೆ ಅಂದ್ರೆ ಅಡಿಯಿಂದ ಮುಡಿಯವರೆಗೂ ದೃಷ್ಟಿ ತೆಗೆಯೋವಂತೆ ನಾಲ್ಕು ಬಾರಿ  ಸುತ್ತಬೇಕು. 
 

36

ಕುಂಕುಮವನ್ನು ದೇಹಕ್ಕೆ ಸುತ್ತುವಾಗ ನಿಮ್ಮ ಕಷ್ಟ ದೂರಾಗಿ, ಸಂಪತ್ತು ಕೈಸೇರುವಂತೆ ಪ್ರಾರ್ಥಿಸಿ. ಬಳಿಕ ಈ ಕುಂಕುಮವನ್ನ ಓಂ ಹಂ ಹನುಮತೆ ನಮಃ ಎನ್ನುವ ಹನುಮಂತನ ಮಂತ್ರವನ್ನು (hanuman mantra) ಜಪಿಸುತ್ತ,  ನದಿ ನೀರಿನಲ್ಲಿ ಬಿಡಿ. ಹೀಗೆ ಮಾಡೋದ್ರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ನೀರಿನಂತೆ ಕರಗಿ ಹೋಗುತ್ತೆ. ಮಾನಸಿಕ ಸಮಸ್ಯೆ (Mental Health Issues) , ಶಾರೀರಿಕ ಸಮಸ್ಯೆ (Physical Health Issuse), ಆರ್ಥಿಕ ಸಮಸ್ಯೆ (Economic Health Issues) ಕೂಡ ನೀವು ಅಂದುಕೊಳ್ಳೋದಕ್ಕೂ ಮೊದಲೇ ಬಗೆ ಹರಿಯುತ್ತೆ.  
 

46

ಎರಡನೇಯದಾಗಿ ಒಂದು ಕಪ್ ಹಾಲಿಗೆ ಎರಡು ತುಳಸಿ ಎಲೆಗಳನ್ನ ಹಾಕಿ, ಅದನ್ನ ದೊನ್ನೆ ಎಲೆಯ ತಟ್ಟೆಯಲ್ಲಿ ಹಾಕಿ ಅರಳಿ ಮರದ ಕೆಳಗೆ ಇಟ್ಟು ಭಕ್ತಿಯಿಂದ, ನಿಮ್ಮ ಮನೋಕಾಮನೆಗಳನ್ನು ಹೇಳಬೇಕು. ಈಗ ಅರಳಿ ಮರದ ಬಳಿ ದೀಪ ಹಚ್ಚಿಟ್ಟು, ಪ್ರದಕ್ಷಿಣೆ ಹಾಕಿ. ಈ ಕೆಲಸವನ್ನು ಸಹ ಮಂಗಳವಾರ ದಿನ ಮಾಡಿದ್ರೇನೆ ಅದರಿಂದ ಶುಭ ಫಲ ಸಿಗೋದು. ಇದರಿಂದ ನೀವು ಇಲ್ಲಿವರೆಗೆ ಅನುಭವಿಸಿದ ಹಣದ ಸಮಸ್ಯೆ ದೂರವಾಗಿ, ಹಣ ನಿಮ್ಮೆಡೆಗೆ ಹೊಳೆಯಂತೆ ಹರಿದು ಬರುತ್ತದೆ. ನೀವು ಅಂದುಕೊಂಡದ್ದೆಲ್ಲಾ ಶೀಘ್ರವಾಗಿ ಈಡೇರುತ್ತೆ. 
 

56

ಮಂಗಳವಾರ ಶ್ರೇಷ್ಟ ದಿನವಾಗಿರೋದ್ರಿಂದ ಈ ದಿನ ನೀವು ಮಾಡಿದ ಕಾರ್ಯಗಳು ಶುಭಫಲವನ್ನೇ ತರುತ್ತೆ. ಈ ದಿನ ನೀವು ಕೆಂಪು ಬಣ್ಣದ ಚಪ್ಪಲಿ ಖರೀದಿಸಿ, ಅದನ್ನ, ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ.  ಇದರಿಂದ ಹಣ ನಿಮ್ಮತ್ತ ಶೀಘ್ರದಲ್ಲೇ ಹರಿದು (money ) ಬರುತ್ತೆ. ಅಷ್ಟೆ ಅಲ್ಲ ಹಣ ಮಾಡೋ ಎಲ್ಲಾ ದಾರಿಯೂ ತೆರೆದುಕೊಳ್ಳುತ್ತೆ. ಮಂಗಳವಾರ ಬಡಜನರಿಗೆ ಕೆಂಪು ಬಣ್ಣದ ಚಪ್ಪಲ್ ದಾನ ಮಾಡೊದ್ರಿಂದ ಮಂಗಳ ದೋಷ ಸಹ ನಿವಾರಣೆಯಾಗುತ್ತೆ. 

66

ನಿರ್ಗತಿಕರಿಗೆ ಮಂಗಳವಾರ ದಿನ ನೀವು ಸಹಾಯ ಮಾಡಿದ್ರಿ ಅಂದ್ರೆ, ಅಂದ್ರೆ ಅವರಿಗೆ ಆಹಾರ ಕೋಡೋದು, ನೀರು ಅಥವಾ ಅವರಿಗೆ ಅಗತ್ಯ ಇರುವಂತಹ ವಸ್ತುಗಳನ್ನ ನೀಡೋದ್ರಿಂದ ಮಂಗಳನೂ ಖುಷಿಪಡ್ತಾನೆ, ಆಂಜನೇಯನಿಗೂ ಖುಷಿಯಾಗುತ್ತೆ ಎಲ್ಲಾ ದೇವತೆಗಳು ಖುಷಿಯಾಗಿದ್ರೆ, ನಿಮ್ಮ ಮನೆ ಮೇಲೆಯೂ ಈ ದೇವರ ಆಶೀರ್ವಾದ ಇದ್ದೆ ಇರುತ್ತೆ, ಹಾಗಾಗಿ ಮನೆಯಲ್ಲಿ ಎಲ್ಲರೂ ಸಂತೋಷವಾಗಿ, ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯವಾಗುತ್ತೆ. ಎಲ್ಲಾ ರೀತಿಯ ನಕಾರಾತ್ಮಕತೆ ಮನೆಯಿಂದ ದೂರಾಗುತ್ತೆ. ಜೊತೆಗೆ ಎಲ್ಲಾ ರೀತಿಯ ಧನ, ಸಂಪತ್ತಿನಿಂದ ನಿಮ್ಮ ಮನೆ ತುಂಬುತ್ತೆ. ಆದ್ರೆ ಈ ಎಲ್ಲಾ ಉಪಾಯವನ್ನು ಯಾರಿಗೂ ಹೇಳದೇ ಸೀಕ್ರೆಟ್ ಆಗಿ ಮಾಡೋದನ್ನ ಮರೀಬೇಡಿ.  
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಣ (Hana)
ಜ್ಯೋತಿಷ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved