ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!
ಒಂದೂವರೆ ವರ್ಷದವಳಾಗಿದ್ದಾಗಲೇ 50 ರಾಗಗಳ ಗುರುತಿಸುತ್ತಿದ್ದ ಅಸಾಮಾನ್ಯ ಪ್ರತಿಭೆ ವಾರಿಜಾಶ್ರೀ ವೇಣುಗೋಪಾಲ್. ನಾಲ್ಕು ವರ್ಷದವಳಿದ್ದಾಗಲೇ 200 ರಾಗಗಳಿಗೆ ತಾಳ ಹಾಕುತ್ತಿದ್ದರು. ಇದೀಗ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ತೀರ್ಪುಗಾರರಲ್ಲಿ ಒಬ್ಬರು. ಅದ್ಭುತವಾದ ಕಂಠದೊಂದಿಗೆ, ಕೊಳಲು ವಾದಕಿಯೂ ಆಗಿರುವ ವಾರಿಜಾ ಲೈಫ್ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ...
ವಾರಿಜಾಶ್ರೀ ಹುಟ್ಟಿ, ಬೆಳೆದಿದ್ದು ಮೈಸೂರಲ್ಲಿ. ತಂದೆ-ತಾಯಿ ಇಬ್ಬರೂ ಸಂಗೀತಗಾರರು.
ನಾಲ್ಕು ವರ್ಷದವಳಾದಾಗ 200 ರಾಗಗಳು ವಾರಿಜಾಗೆ ಕರಗತವಾಗಿದ್ದವು.
ಪ್ರಾಥಮಿಕ ಸಂಗೀತವನ್ನು ತಂದೆ ವೇಣುಗೋಪಾಲ್ ಅವರಿಂದಲೇ ಕಲಿತರು.
'ಹೆಳವನಕಟ್ಟೆ ಗಿರಿಯಮ್' ಧಾರಾವಾಹಿಯಲ್ಲಿ ದಾಸರ ಪದಗಳನ್ನು ಹಾಡಿ, ಮನೆ ಮಾತಾದರು.
'Quartet' ಸಂಗೀತ ಗುಂಪಿನ ಬ್ರ್ಯಾಂಡ್ ರಾಯಭಾರಿ ಇವರು.
'ಪರ್ಲ್ ಆಫ್ ಬೆಂಗಳೂರು', 'ಕೆಂಪೇಗೌಡ ರಾಜ್ಯ ಪ್ರಶಸ್ತಿ' ಇವರ ಮುಡಿಗೇರಿದೆ.
ಹಾಡು ಮತ್ತು ಕೊಳಲು ಎರಡರ ಸಂಗಮದ `ಬಿದಿರು' ಆಲ್ಬಂ ಇವರದ್ದು.
ದಾಸ ಸಾಹಿತ್ಯವನ್ನು ಆಧುನಿಕ ಸಂಗೀತಕ್ಕೆ ಅಳವಡಿಸಿದ್ದಾರೆ ವಾರಿಜಾ.
'ಅರ್ಪಣ', 'ಉಪಾಸನಾ', 'ಮೇಳ ರಾಗ ಮಾಲಿಕಾ', 'ಕಾಯೋ ಎನ್ನ ಗೋಪಾಲ' ಇವರ ಇತರೆ ಆಲ್ಬಂಗಳು.
ಇತ್ತೀಚಿಗೆ 'ತುರ್ತು ನಿರ್ಗಮನ' ಚಿತ್ರದಲ್ಲಿ 'ಜೋರು ಜೋರಾಗಿ' ಹಾಡು ಹಾಡಿದ್ದಾರೆ.