MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • Thimithi Festival: ಕೆಂಡದ ಮೇಲೆ ನಡೆದು ದ್ರೌಪದಿಗಾಗಿ ಅಗ್ನಿಪರೀಕ್ಷೆ ಮಾಡ್ತಾರೆ ಇಲ್ಲಿನ ಜನ

Thimithi Festival: ಕೆಂಡದ ಮೇಲೆ ನಡೆದು ದ್ರೌಪದಿಗಾಗಿ ಅಗ್ನಿಪರೀಕ್ಷೆ ಮಾಡ್ತಾರೆ ಇಲ್ಲಿನ ಜನ

ತಮಿಳುನಾಡಿನ ತಿಮಿಥಿ ಎಂಬ ಒಂದು ಆಚರಣೆ ಇದೆ. ಈ ಪದ್ಧತಿಯ ಪ್ರಕಾರ ಅರ್ಜುನ ಮತ್ತು ದ್ರೌಪದಿಯ ಮದುವೆಯಿಂದ ಹಿಡಿದು ಹಿಜಡಾಗಳ ಬಲಿಯವರೆಗೆ ಅನೇಕ ಆಚರಣೆಗಳನ್ನು ನಡೆಸಲಾಗುತ್ತದೆ. ದೀಪಾವಳಿಯ ಸಮಯದಲ್ಲಿ ಇದನ್ನು ರಾಮ್ ಲೀಲಾದಂತೆಯೇ ಆಚರಿಸಲಾಗುತ್ತದೆ. ಈ ಆಚರಣೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.  

2 Min read
Pavna Das
Published : Jul 29 2023, 12:30 PM IST
Share this Photo Gallery
  • FB
  • TW
  • Linkdin
  • Whatsapp
19

ಸೀತಾಮಾತೆಯು ಅಗ್ನಿಪರೀಕ್ಷೆಯನ್ನು ಮಾಡಿಸಿಕೊಂಡಿದ್ದಳು ಎಂದು ನಾವು ಕೇಳಿದ್ದೇವೆ.  ಇಂದಿಗೂ ಜನರು ದೇವಿ ಅಥವಾ ಆದಿಶಕ್ತಿಯನ್ನು ಮೆಚ್ಚಿಸಲು ಕೆಂಡಗಳ ಮೇಲೆ ನಡೆಯುತ್ತಾರೆ ಅನ್ನೋದು ಗೊತ್ತಿರತ್ತೆ. ಆದರೆ ದ್ರೌಪದಿಯ ಚಾರಿತ್ರ್ಯವನ್ನು ರಕ್ಷಿಸಲು ಜನರು ಕೆಂಡದ ಮೇಲೆ ನಡೆಯುವ  (walk on fire) ಬಗ್ಗೆ ಕೇಳಿದ್ದೀರಾ? ಇಂಥದ್ದೊಂದು ಆಚರಣೆ ತಮಿಳುನಾಡಿನಲ್ಲಿ ನಡೆಯುತ್ತೆ. 
 

29

ದ್ರೌಪದಿಗಾಗಿ ಮಾಡಲಾಗುವ ತಮಿಳುನಾಡಿನ ಸಂಪ್ರದಾಯ ಇದಾಗಿದ್ದು, ಈ ಆಚರಣೆಯನ್ನು ತಿಮಿಥಿ (thimithi) ಎಂದು ಕರೆಯಲಾಗುತ್ತದೆ. ಈ ಐದು ದಿನಗಳ ಹಬ್ಬವನ್ನು ಪ್ರತಿವರ್ಷ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಆಚರಿಸಲಾಗುತ್ತದೆ, ಅಲ್ಲಿ ಪಾಂಡವರ ಪತ್ನಿ ದ್ರೌಪದಿಯ ಗೌರವವನ್ನು ರಕ್ಷಿಸಲಾಗುತ್ತದೆ. ಈ ಹಬ್ಬವನ್ನು ತಮಿಳರು ಆಚರಿಸುತ್ತಾರೆ. 
 

39

ತಿಮಿಥಿ ಪದ್ಧತಿಯನ್ನು ಯಾವಾಗ ಆಚರಿಸಲಾಗುತ್ತದೆ?: ತಿಮಿಥಿ ಆಚರಣೆಯನ್ನು ಅಕ್ಟೋಬರ್ ಮತ್ತು ನವಂಬರ್ ನಡುವೆ ಆಚರಿಸಲಾಗುತ್ತದೆ, ಆದರೆ ಬೆಂಕಿಯಲ್ಲಿ ನಡೆಯುವ ಆಚರಣೆ ಯಾವಾಗಲೂ ದೀಪಾವಳಿಗೆ (deepavali) ಒಂದು ವಾರ ಮೊದಲು ನಡೆಯುತ್ತದೆ. ಇದನ್ನು ಐಪಾಸಿ ತಿಂಗಳು ಎಂದು ಕರೆಯಲಾಗುತ್ತದೆ. 

49

ಈ ಆಚರಣೆಯನ್ನು ಯಾಕೆ ಮಾಡಲಾಗುತ್ತದೆ?: ದ್ರೌಪದಿ ತಮಿಳುನಾಡಿನಲ್ಲಿ ಪೂಜಿಸಲ್ಪಡುವ ತಾಯಿ ಮಾರಿಯಮ್ಮನ್ ನ ಅವತಾರ ಎಂದು ನಂಬಲಾಗಿದೆ. ದ್ರೌಪದಿಯ ಚಾರಿತ್ರ್ಯವನ್ನು ರಕ್ಷಿಸಲು ಜನರು ಕೆಂಡದ ಮೇಲೆ ನಡೆಯುವ ಪದ್ಧತಿ ಇದೆ. ಈ ಪದ್ಧತಿಯನ್ನು ಶ್ರೀಲಂಕಾ, ಫಿಜಿ, ಸಿಂಗಾಪುರ್, ಮಲೇಷ್ಯಾ, ಮಾರಿಷಸ್ ಮುಂತಾದ ದೇಶಗಳಲ್ಲಿಯೂ ತಮಿಳರು ಆಚರಿಸುತ್ತಾರೆ. 

59

ತಿಮಿಥಿ ಪದ್ಧತಿಯನ್ನು ಹೇಗೆ ಆಚರಿಸಲಾಗುತ್ತದೆ?: ತಿಮಿಥಿಯನ್ನು ಆಚರಿಸುವಾಗ, ಪಾಂಡವರು ಮತ್ತು ಕೌರವರ ಯುದ್ಧದ ಅನೇಕ ದೃಶ್ಯಗಳನ್ನು ನಾಟಕದ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಹಬ್ಬ ಪ್ರಾರಂಭವಾಗುವ ತಿಂಗಳುಗಳ ಮೊದಲು ಸಿದ್ಧತೆಗಳು ಪ್ರಾರಂಭವಾಗುತ್ತವೆ. ಈ ಸಂದರ್ಭದಲ್ಲಿ ಭಕ್ತರಿಗೆ ಅನೇಕ ಕಟ್ಟುನಿಟ್ಟಾದ ನಿಯಮಗಳನ್ನು ನೀಡಲಾಗುತ್ತದೆ. ಅವರು ಯಾವಾಗಲೂ ಧರ್ಮ, ಪೂಜೆಯನ್ನು ಅನುಸರಿಸಬೇಕಾಗಿರುವುದರಿಂದ, ಈ ಸಮಯದಲ್ಲಿ ಮಾಂಸ ಮತ್ತು ಮೀನು ತಿನ್ನುವುದನ್ನು ನಿಷೇಧಿಸಲಾಗಿದೆ. ದೀಪಾವಳಿಗೆ ಒಂದು ವಾರ ಮೊದಲು, ಅರ್ಜುನ ಮತ್ತು ಹನುಮಾನ್ ಆಗಮನವನ್ನು ಸೂಚಿಸಲು ಶ್ರೀ ಮಾರಿಯಮ್ಮನ್ ದೇವಾಲಯದ ಮೇಲೆ ಧ್ವಜವನ್ನು ಹಾರಿಸಲಾಗುತ್ತದೆ. 

69

ನಂತರ ದೇಗುಲದಲ್ಲಿ ಒಂದು ಜಾಗದಲ್ಲಿ ಬೆಂಕಿ ಹಾಕಲಾಗುತ್ತದೆ ಮತ್ತು ಅದರಲ್ಲಿ ಹೆಚ್ಚಾಗಿ ಶ್ರೀಗಂಧವನ್ನು ಬಳಸಲಾಗುತ್ತದೆ. ಬೆಂಕಿಯ ಮೇಲೆ ನಡೆಯಲು ಅನೇಕ ರೀತಿಯ ಪದ್ಧತಿಗಳಿವೆ. ಇದು ಎಷ್ಟು ಕಾಲ ಇರುತ್ತದೆ, ಯಾವ ಮಂತ್ರಗಳನ್ನು ಪಠಿಸಲಾಗುತ್ತದೆ, ಯಾರು ಯಾವ ಸಮಯದಲ್ಲಿ ಬೆಂಕಿಯನ್ನು ಪ್ರವೇಶಿಸುತ್ತಾರೆ, ಎಲ್ಲವನ್ನೂ ಮುಂಚಿತವಾಗಿ ನಿರ್ಧರಿಸಲಾಗುತ್ತದೆ. ಬೆಂಕಿಯ ಮೇಲೆ ನಡೆಯುವವರನ್ನು ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ ಮತ್ತು ಅರಿಶಿನ ಮತ್ತು ಬೇವಿನ ಎಲೆಗಳನ್ನು ಅವರ ಮಣಿಕಟ್ಟಿಗೆ ಕಟ್ಟಲಾಗುತ್ತದೆ. 
 

79

ದ್ರೌಪದಿ ಮತ್ತು ಅರ್ಜುನನ ವಿವಾಹದ ಆಚರಣೆ: ಈ ಹಬ್ಬದ ಎರಡನೇ ಪ್ರಮುಖ ಪದ್ಧತಿಯೆಂದರೆ ದ್ರೌಪದಿ ಮತ್ತು ಅರ್ಜುನರ ವಿವಾಹ ಸಮಾರಂಭ. ಇದನ್ನು ಬಹಳ ಆಡಂಬರದಿಂದ ಆಚರಿಸಲಾಗುತ್ತದೆ ಮತ್ತು ಇದರ ನಂತರ, ಹಿಜಡಾಗಳ ಬಲಿಯನ್ನು (ಇದು ಮಾನವ ಬಲಿಯನ್ನು ಒಳಗೊಂಡಿರುವುದಿಲ್ಲ) ಮಾಡಲಾಗುತ್ತದೆ. ಮಹಾಭಾರತ ಯುದ್ಧದ ಮೊದಲು ಪಾಂಡವರ ವಿಜಯವನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಯಿತು ಎಂದು ನಂಬಲಾಗಿದೆ.  ತಿಮಿಥಿಗೆ ಎರಡು ದಿನಗಳ ಮೊದಲು, ಕುರುಕ್ಷೇತ್ರ ಯುದ್ಧವನ್ನು ಸಹ ತೋರಿಸಲಾಗುವುದು. ಅದಕ್ಕಾಗಿ ಪಾಂಡವರು ಮತ್ತು ಕೌರವರ ನಡುವಿನ 18 ದಿನಗಳ ಯುದ್ಧವನ್ನು ವಿವರಿಸುವ ಬೆಳ್ಳಿ ರಥದ ಯಾತ್ರೆಯನ್ನು ನಡೆಸಲಾಗುತ್ತದೆ.  

89

ಬೆಂಕಿಯಲ್ಲಿ ನಡೆಯೋರು ಯಾರು?: ಬೆಂಕಿ ಕೆಂಡದಲ್ಲಿ ಯಾರು ನಡೆಯಬೇಕು ಎಂದು ಮೊದಲೇ ನಿರ್ಧರಿಸಲಾಗಿದೆ ಮತ್ತು ಮುಖ್ಯ ಪುರೋಹಿತರು ಈ ಕೆಲಸವನ್ನು ಆರಂಭಿಸುತ್ತಾರೆ. ಮೊದಲು ಪುರೋಹಿತರು ತಲೆಯ ಮೇಲೆ ಕಲಶವನ್ನು ಇಟ್ಟು ಬೆಂಕಿಯ ಮೇಲೆ ನಡೆಯುತ್ತಾರೆ. ಬಳಿಕ ಒಬ್ಬೊಬ್ಬರಾಗಿ ಕೆಂಡದ ಮೇಲೆ ನಡೆಯುತ್ತಾರೆ. 

99

ಕೆಲವರು ಕೆಂಡಗಳ ಮೇಲೆ ನಡೆಯುವುದನ್ನು ದೈವಿಕ ಶಕ್ತಿಯ ಪ್ರದರ್ಶನವೆಂದು ಪರಿಗಣಿಸಿದರೆ, ಕೆಲವರು ಅದನ್ನು ವಿಜ್ಞಾನದೊಂದಿಗೆ ಸಂಯೋಜಿಸುತ್ತಾರೆ, ಆದರೆ ಸತ್ಯವೆಂದರೆ ಈ ಹಬ್ಬವು ಜನರ ಶ್ರದ್ಧೆಯನ್ನು ಒಳಗೊಂಡಿದೆ.  ಕೆಲವರು ಇದನ್ನು ಮೂಢನಂಬಿಕೆ ಎಂದೇ ಹೇಳಬಹುದು. ಆದರೆ ಪ್ರತಿಯೊಬ್ಬರಿಗೂ ಅವರವರದೇ ಆದ ನಂಬಿಕೆ ಇದೆ ಅಲ್ವಾ? 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved