#JanataCurfew ಏನಿರುತ್ತೆ, ಏನಿರೋಲ್ಲ..? ಇಲ್ಲಿದೆ ಡಿಟೇಲ್ಸ್..!
ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂ ಜಾರಿ ಇರಲಿದ್ದು, ಈ ಸಂದರ್ಭ ಯಾರೂ ಹೊರಗೆ ಓಡಾಡುವಂತಿಲ್ಲ. ಬೆಂಗಳೂರಲ್ಲಿ ಜನತಾ ಕರ್ಫ್ಯೂ ಹೇಗಿರಲಿದೆ..? ಏನೆಲ್ಲಾ ಲಭ್ಯವಿದೆ, ಏನೆಲ್ಲಾ ಲಭ್ಯವಿಲ್ಲ, ಇಲ್ಲಿದೆ ಡೀಟೆಲ್ಸ್
ಜನತಾ ಕರ್ಫ್ಯೂ ಹಿನ್ನೆಲೆ ಭಾನುವಾರ ಶೇ. 10ರಷ್ಟು ಬಸ್ಗಳು ಮಾತ್ರ ಓಡಾಡಲಿವೆ.
ಬೆಂಗಳೂರಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಇಸ್ಕಾನ್ ನಾಳೆ ಬಂದ್ ಆಗಿರಲಿದೆ.
ಎಲ್ಲಾ ರೀತಿಯ ರೆಸ್ಟೋರೆಂಟ್ಗಳೂ ನಾಳೆ ಮುಚ್ಚಿರುತ್ತವೆ. ಯಾರೂ ಮನೆಯಿಂದ ಹೊರಬರುವಂತಿಲ್ಲ.
ಜನರು ಹೊರಗೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಓಡಾಡಿದಲ್ಲಿ ಕೇಸ್ ಆಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಇರಲಿದ್ದು, ಪರೀಕ್ಷೆಗಳು ನಿಗದಿಪಡಿಸಿದಂತೆಯೇ ನಡೆಯಲಿವೆ.
ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್ಗಳೂ ಮುಚ್ಚಿರಲಿದ್ದು, ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತವೆ.
ಚಿತ್ರ ಮಂದಿರಗಳೂ ಭಾನುವಾರ ಮುಚ್ಚಿರಲಿವೆ