ಸಚಿವ ಶ್ರೀರಾಮುಲು ಪುತ್ರಿಯ ಕಲ್ಯಾಣವಂತೆ, ವರನ್ಯಾರು ಗೊತ್ತೆ..?
ಕರ್ನಾಟಕ ಆರೋಗ್ಯ ಸಚಿವ ಬಿ. ಶ್ರೀರಾಮಲು ಸದ್ಯ ತಮ್ಮ ಪುತ್ರಿಯ ಮದುವೆ ಸಿದ್ಧತೆಗಳಲ್ಲಿ ಬ್ಯುಸಿಯಾಗಿದ್ದು, ಮಗಳ ಮದ್ವೆಗೆ ಬರುವಂತೆ ರಾಜ್ಯ ಹಾಗೂ ರಾಷ್ಟ್ರ ನಾಯರನ್ನ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಅದರಲ್ಲೂ ಪ್ರಧಾನಮಂತ್ರಿ ಅವರನ್ನ ಭೇಟಿ ಮಾಡಿ ಮದುವೆಗೆ ಬರುವಂತೆ ಕೋರಿಕೊಂಡಿದ್ದಾರೆ. ಅಷ್ಟಕ್ಕೂ ರಾಮುಲು ಪುತ್ರಿ ಯಾರು? ಪುತ್ರಿಯ ಕೈಹಿಡಿಯಲಿರುವ ಅಳಿಯ ಯಾರು..? ಇಲ್ಲಿದೆ ಫೋಟೋ ಝಲಕ್..
ಸಚಿವ ಶ್ರೀರಾಮುಲು ತಮ್ಮ ಪುತ್ರಿ ಮದ್ವೆ ಕಾರ್ಯಕ್ರಮಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಶ್ರೀರಾಮುಲು ಅವರು ಹೈದರಾಬಾದ್ ಮೂಲದ ಉದ್ಯಮಿ ಪುತ್ರನಿಗೆ ತಮ್ಮ ಮಗಳನ್ನ ದಾರೆ ಎರೆದುಕೊಡಲಿದ್ದಾರೆ.
ಇದೇ ಮಾರ್ಚ್ 05ರಂದು ಶ್ರೀರಾಮುಲು ಪುತ್ರಿ ರಕ್ಷಿತಾಳ ಅದ್ದೂರಿ ವಿವಾಹ ಮಹೋತ್ಸವ ನಡೆಯಲಿದೆ
ಇದೇ ಮಾರ್ಚ್ 05ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಅದ್ದೂರಿ ವಿವಾಹ ಮಹೋತ್ಸವ ನಡೆಯಲಿದೆ
ಶ್ರೀರಾಮುಲು ಪುತ್ರಿ ರಕ್ಷಿತಾ ಹೈದರಾಬಾದ್ ಮೂಲದ ಉದ್ಯಮಿ ಪುತ್ರ ಶೆಟ್ಟಿಪಲ್ಲಿ ಲಲಿತ್ ಸಂಜೀವ್ ರೆಡ್ಡಿ ಅವರ ಕೈಹಿಡಿಯಲಿದ್ದಾರೆ.
ಇತ್ತೀಚೆಗಷ್ಟೇ ರಕ್ಷಿತಾ ಮತ್ತು ಶೆಟ್ಟಿಪಲ್ಲಿ ಲಲಿತ್ ಸಂಜೀವ ರೆಡ್ಡಿ ಎಂಗೇಜ್ಮೆಂಟ್ ಆಗಿತ್ತು
ಇತ್ತೀಚೆಗೆ ರಕ್ಷಿತಾ ಮತ್ತು ಶೆಟ್ಟಿಪಲ್ಲಿ ಲಲಿತ್ ಸಂಜೀವ ರೆಡ್ಡಿ ಎಂಗೇಜ್ಮೆಂಟ್ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆದಿತ್ತು.
ಪುತ್ರಿಯ ಮದ್ವೆಗೆ ಪ್ರಧಾನಿ ಮೋದಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿದ್ದಾರೆ.