ಸ್ಯಾಂಡಲ್ವುಡ್ ಯುವರಾಜನಿಗೆ ಮೂವತ್ತು, ನಿಖಿಲ್ ಬಗ್ಗೆ ನಿಮಗೆಷ್ಟು ಗೊತ್ತು!?
ಸ್ಯಾಂಡಲ್ವುಡ್ ಯುವರಾಜ, ಜಾಗ್ವಾರ್ ಹೀರೋ ನಿಖಿಲ್ ಕುಮಾರಸ್ವಾಮಿಗೆ ಇಂದು ಮೂವತ್ತನೇ ಹುಟ್ಟುಹಬ್ಬದ ಸಂಭ್ರಮ. ಮಾಡಿದ ಮೂರು ಸಿನಿಮಾಗಳಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಅವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ..!
ನಿಖಿಲ್ ಕುಮಾರಸ್ವಾಮಿ 'ಜಾಗ್ವಾರ್' ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡರು.
ಜನವರಿ 22, 1990 ಇವರ ಬರ್ತಡೇ
ರಾಜಕೀಯ ಮನೆತನದಿಂದ ಬಂದಿರುವುದರಿಂದ ರಾಜಕಾರಣ ಇವರಿಗೆ ಹೊಸದಲ್ಲ. ಈಗಾಗಲೇ ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.
'ನಿನ್ನಂಥ ಅಪ್ಪಾ ಇಲ್ಲ, ನಿನ್ನಂತ ಮಗನೂ ಇಲ್ಲ'.. ಎಂದು ಹೇಳುತ್ತಿರುವಂತಿದೆ ಈ ಫೋಟೋ..!
ರಚಿತಾ ರಾಮ್ ಜೊತೆ ನಟಿಸಿದ 'ಸೀತಾರಾಮ ಕಲ್ಯಾಣ' ಸಿನಿಮಾ ತಕ್ಕ ಮಟ್ಟಿಗೆ ಹೆಸರು ತಂದು ಕೊಟ್ಟಿತು.
ಅಪ್ಪ- ಮಗನ ಖುಷಿಯ ಕ್ಷಣ
2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸಿ 128725 ವೋಟ್ಗಳಿಂದ ಪರಾಭವಗೊಂಡಿದ್ದರು.
ದೋಸ್ತ್ ದೋಸ್ತ್ ನಾ ರಹೇ... ಕುಚಿಕೂ ಗೆಳೆಯ ಅಭಿಷೇಕ್ ಜೊತೆ ನಿಖಿಲ್
ಮಂಡ್ಯ ಚುನಾವಣೆ ಸಂದರ್ಭದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಟೈಟಲ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಬಹುತಾರಾಗಣದ 'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಪ್ರೇಕ್ಷಕರ ಮನ ಗೆದ್ದಿದೆ.
ಅಜ್ಜಿ, ತಾತನ ಜೊತೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿ