ಚಿತ್ರಗಳು: ರಾಜಕೀಯ ಬದ್ಧವೈರಿಗಳ ಸಮಾಗಮ, ಸಿದ್ದು ಮಾತಿಗೆ BSY ಭಾವುಕ
ರೈತ ಬಂಧು ಯಡಿಯೂರಪ್ಪಗೆ ಶುಭಾಶಯಗಳ ಮಹಾಪೂರ...ಬಿ.ಎಸ್.ಯಡಿಯೂರಪ್ಪ... ಹುಟ್ಟು ಹೋರಾಟಗಾರ.. ದಣಿವರಿಯದ ಧೀಮಂತ ನಾಯಕ.. ಹಿಡಿದ ಹಠ ಸಾಧಿಸೋ ಛಲಗಾರ.. ರೈತ ಕಲ್ಯಾಣಕ್ಕೆ ಶ್ರಮಿಸಿದ ರೈತ ಬಂಧು.. ರಾಜ್ಯದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿರುವ ಅಭಿವೃದ್ಧಿಯ ಹರಿಕಾರ.. ದೇಶಕಂಡ ಇಂತಹ ಅಗ್ರಗಣ್ಯ ನಾಯಕನಿಗಿಂದು 77ನೇ ಹುಟ್ಟುಹಬ್ಬದ ಸಂಭ್ರಮ...ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದರಲ್ಲಿ ರಾಜಕೀಯ ಬದ್ಧವೈರಿಗಳ ಸಮಾಗಮವಾಗಿದೆ.
ಬಿ.ಎಸ್ ಯಡಿಯೂರಪ್ಪ ರಾಜಕೀಯ ಬದ್ಧ ವೈರಿ. ಆತ್ಮೀಯ ಸ್ನೇಹಿತ ಸಿದ್ದರಾಮಯ್ಯ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ರು.
ಯಡಿಯೂರಪ್ಪಗೆ ಶುಭಾಶಯಕೋರಿದ ಸಿದ್ದರಾಮಯ್ಯ
ಸಿಎಂ ಸಹ ಸಿದ್ದರಾಮಯ್ಯ ಅವರನ್ನ ಅಷ್ಟೇ ಆತ್ಮೀಯವಾಗಿ ಮಾತ್ನಾಡಿಸಿದ್ರು..
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಯಡಿಯೂರಪ್ಪನವರ ಅಭಿನಂದನಾ ಗ್ರಂಥ ಬಿಡುಗಡೆಯಲ್ಲಿ ಪಾಲ್ಗೊಂಡು ಬರ್ತ್ ಡೇ ವಿಶ್ ಮಾಡಿದರು.
ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಕವಿ ಸಿದ್ದಲಿಂಗಯ್ಯ ಸೇರಿ ಹಲವು ಗಣ್ಯರು ಬಿಎಸ್ವೈ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿದ್ರು.
ಹುಟ್ಟಹಬ್ಬದ ಸಮಾರಂಭದಲ್ಲಿ ಯಡಿಯೂರಪ್ಪ ಕುರಿತ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು
ಈ ವೇಳೆ ರೈತ ಬಂಧು ಯಡಿಯೂರಪ್ಪಗೆ ಸಮಾರಂಭಕ್ಕೆ ಆಗಮಿಸಿದ ಗಣ್ಯರು, ಹಸಿರು ಶಾಲು ಹೊದಿಸಿ, ಬೆಳ್ಳಿ ನೇಗಿಲು ನೀಡಿ ಸನ್ಮಾನಿಸಿದ್ರು..
ಸಮಾರಂಭ ಉದ್ದೇಶಿಸಿ ಮಾತ್ನಾಡಿದ ಸಿದ್ದರಾಮಯ್ಯ, ಬಿಎಸ್ವೈರನ್ನ ಹಾಡಿಹೊಗಳಿದ್ರು.. ಸಿದ್ದು ಮಾತು ಕೇಳಿ ಸಿಎಂ ಭಾವುಕರಾದ್ರು.
BSY