MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Mangaluru Railway Zone
Duleep Trophy Final
US Open 2026
Yeshwantpur-Mangaluru Vande Bharat
BDA Amendment Act 2026
Koppal Govt School
Hassan-Belur Road Project
Bigg Boss Kannada 13
Tukaram Mundhe
Uppinangady Ganeshotsava Samiti
  • Home
  • News
  • India News
  • ಭಾರತ- ಪಾಕಿಸ್ತಾನ ಕ್ರಿಕೆಟ್ ನಂಟು ಪುನರ್ ಸ್ಥಾಪಿಸಿದ ಚಾಣಕ್ಯ ಮನಮೋಹನ್‌ ಸಿಂಗ್‌!

ಭಾರತ- ಪಾಕಿಸ್ತಾನ ಕ್ರಿಕೆಟ್ ನಂಟು ಪುನರ್ ಸ್ಥಾಪಿಸಿದ ಚಾಣಕ್ಯ ಮನಮೋಹನ್‌ ಸಿಂಗ್‌!

ಎಲ್ಲರಲ್ಲೂ ಪಾಕ್ ತಂಡ ಭಾರತಕ್ಕೆ ಬರಲಿದೆಯೇ ಎಂಬ ಕೌತುಕ. ಈ ವೇಳೆ ಐತಿಹಾಸಿಕ ಹೆಜ್ಜೆ ಎಂಬಂತೆ ಪ್ರಧಾನಿ ಸಿಂಗ್, ಪಾಕಿಸ್ತಾನದ ಪ್ರಧಾನಿ ಯೂಸುಫ್ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದರು. 

2 Min read
Author : Kannadaprabha News
Published : Dec 27 2024, 08:21 AM IST
Share this Photo Gallery
  • FB
  • TW
  • Linkdin
  • Whatsapp
17

ಆರ್ಥಿಕ ತಜ್ಞರಾಗಿ ಗುರುತಿಸಿಕೊಳ್ಳುವ ಮನಮೋಹನ್ ಸಿಂಗ್, ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸಲು ಪಣತೊಟ್ಟು, ಅದರಲ್ಲಿ ಯಶಸ್ವಿಯಾದ ಚಾಣಕ್ಯ ಕೂಡಾ ಹೌದು. 2008ರಲ್ಲಿ ಮುಂಬೈ ದಾಳಿ ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಹಳಸಿತ್ತು. ಇದನ್ನು ಪುನರ್‌ಸ್ಥಾಪಿಸಿದ್ದು ಸಿಂಗ್‌. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಭಾರತ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು.  ಪಾಕ್ ತಂಡ ಗುಂಪು ಹಂತ, ಕ್ವಾರ್ಟ‌್ರಫೈನಲ್ ಪಂದ್ಯಗಳನ್ನು ಶ್ರೀಲಂಕಾ, ಬಾಂಗ್ಲಾದಲ್ಲಿ ಆಡಿದರೂ, ಭಾರತ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲು ಭಾರತಕ್ಕೆ ಆಗಮಿಸಬೇಕಿತ್ತು. ಅದು ಕ್ರಿಕೆಟ್ ಲೋಕವೇ ಕುತೂಹಲದ ಕಣ್ಣಿನಿಂದ ನೋಡುತ್ತಿದ್ದ ಸಮಯ. 

37

ಎಲ್ಲರಲ್ಲೂ ಪಾಕ್ ತಂಡ ಭಾರತಕ್ಕೆ ಬರಲಿದೆಯೇ ಎಂಬ ಕೌತುಕ. ಈ ವೇಳೆ ಐತಿಹಾಸಿಕ ಹೆಜ್ಜೆ ಎಂಬಂತೆ ಪ್ರಧಾನಿ ಸಿಂಗ್, ಪಾಕಿಸ್ತಾನದ ಪ್ರಧಾನಿ ಯೂಸುಫ್ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದರು. ಆಹ್ವಾನ ಸ್ವೀಕರಿಸಿ ಯೂಸುಫ್ ಭಾರತಕ್ಕೆ ಆಗಮಿಸಿದರು. ಮೊಹಾಲಿಯಲ್ಲಿನಡೆದ ಐತಿಹಾಸಿಕ ಪಂದ್ಯವನ್ನು ಸಿಂಗ್-ಯೂಸುಫ್ ಗಿಲಾನಿ ಒಟ್ಟಿಗೇ ಕೂತು ವೀಕ್ಷಿಸಿದರು. ಬಳಿಕ 2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆಯಿತು. ಇತ್ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ. 

47

ಪಾಕ್‌ನಲ್ಲಿ ಮನಮೋಹನ್ ಸಿಂಗ್ ಹೆಸರಲ್ಲಿದೆ ಶಾಲೆ!: ಡಾ.ಮನಮೋಹನ ಸಿಂಗ್ ಅವರ ಹುಟ್ಟೂರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾಹ್ ಗ್ರಾಮ. ಅಲ್ಲೀಗ ಮನಮೋಹನ ಸಿಂಗ್ ಹೆಸರಲ್ಲಿ ಶಾಲೆಯೂ ಇದೆ. 

57

ಹೌದು, ಮನಮೋಹನ ಸಿಂಗ್ ಪ್ರಾಥಮಿಕ ಶಿಕ್ಷಣ ಪಡೆದದ್ದು ಇದೇ ಶಾಲೆಯಲ್ಲಿ, ಹೀಗಾಗಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಹುಟ್ಟೂರಲ್ಲೂ ಸಂಭ್ರಮ ಮನೆ ಮಾಡಿತ್ತು. ಅಲ್ಲಿನ ಪಂಜಾಬ್ ಪ್ರಾಂತ್ಯದ ಸರ್ಕಾರ ಕೂಡ 2007ರಲ್ಲಿ ಮನಮೋಹನ ಸಿಂಗ್ ಅವರ ಗೌರವಾರ್ಥವಾಗಿ ಗಹ್ ಗ್ರಾಮದಲ್ಲಿರುವ ಬಾಲಕರ ಶಾಲೆಯನ್ನು ಮನಮೋಹನ ಸಿಂಗ್ ಬಾಲಕರ ಶಾಲೆ ಎಂದು ಮರುನಾಮಕರಣ ಮಾಡಿತು.

67

ವೈದ್ಯಕೀಯ ಕೋರ್ ಬಿಟ್ಟು ಅರ್ಥಶಾಸ್ತ್ರ ನೆಚ್ಚಿದ್ದ ಸಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ತಂದೆಯ ಇಚ್ಛೆಯಂತೆ ಪೂರ್ವ ವೈದ್ಯಕೀಯ ಕೋರ್ಸ್‌ಗೆ ದಾಖಲಾಗಿದ್ದರು. ಆದರೆ ಆ ವಿಷಯದಲ್ಲಿ ಆಸಕ್ತಿ ಕಳೆದುಕೊಂಡ ಕಾರಣ ಕೆಲವೇ ತಿಂಗಳಲ್ಲಿ ಕೋರ್ಸ್ ಕೈಬಿಟ್ಟಿದ್ದರು. ಸಿಂಗ್ ಅವರನ್ನು ಅರ್ಥಶಾಸ್ತ್ರದ ವಿಷಯ ಸೆಳೆಯುತ್ತಿತ್ತು. 

77

'ನನಗೆ ಬಡತನದ ವಿಷಯದಲ್ಲಿ ಸದಾ ಆಸಕ್ತಿಯಿತ್ತು. ಕೆಲವು ದೇಶಗಳು ಬಡವೇಕೆ, ಕೆಲವು ಶ್ರೀಮಂತವೇಕೆ? ಈ ಪ್ರಶ್ನೆಗಳನ್ನು ಕೇಳುವ ವಿಷಯವೇ ಅರ್ಥಶಾಸ್ತ್ರಎಂದು ನನಗೆ ಹೇಳಲಾಗಿತ್ತು' ಎಂದು ಸಿಂಗ್ ಅವರ ಪುತ್ರಿ ತಮ್ಮ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ.
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕ್ರಿಕೆಟ್
ಭಾರತ

Latest Videos
Recommended Stories
Recommended image1
'ದಿನದ 24 ಗಂಟೆಯೂ ಕೆಲಸ ಮಾಡೋಕೆ ಆಗಲ್ಲ' ವಾಟ್ಸಾಪ್‌ನಲ್ಲೇ ರಾಜೀನಾಮೆ ಪತ್ರ ಕಳಿಸಿದ ಪೊಲೀಸ್
Recommended image2
ರೈಲಿನಲ್ಲಿ ಒಣ ತೆಂಗಿನಕಾಯಿ ಕೊಂಡೊಯ್ಯುವುದು ನಿಷೇಧ! ಯಾಕೆ ಗೊತ್ತಾ?
Recommended image3
ಭಾರತದಲ್ಲಿ ವಾಯುಯಾನ ವಿಸ್ತರಣೆಗೆ ರಷ್ಯಾ ಸಜ್ಜು, 105 ಪ್ರಾದೇಶಿಕ ವಿಮಾನಗಳ ಒಪ್ಪಂದಕ್ಕೆ ಮುನ್ನುಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved