MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • News
  • India News
  • ಮನಮೋಹನ್ ಸಿಂಗ್ ಎಷ್ಟು ಸಿಂಪಲ್ ಗೊತ್ತಾ? BMW ಬದಲಾಗಿ ಈ ಕಾರ್ ಕೇಳಿದ್ರು

ಮನಮೋಹನ್ ಸಿಂಗ್ ಎಷ್ಟು ಸಿಂಪಲ್ ಗೊತ್ತಾ? BMW ಬದಲಾಗಿ ಈ ಕಾರ್ ಕೇಳಿದ್ರು

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸರಳತೆ ಮತ್ತು ದೇಶಭಕ್ತಿಯನ್ನು ಈ ಲೇಖನವು ಬಿಂಬಿಸುತ್ತದೆ. ಬಿಎಂಡಬ್ಲ್ಯು ಕಾರನ್ನು ತಿರಸ್ಕರಿಸಿದ್ದರು.  ಶಸ್ತ್ರಚಿಕಿತ್ಸೆಯ ನಂತರ ದೇಶದ ಬಗ್ಗೆ ಕೇಳಿದ ಪ್ರಶ್ನೆಗಳು ಅವರ ದೇಶಪ್ರೇಮವನ್ನು ಎತ್ತಿ ತೋರಿಸುತ್ತವೆ. ಅನುಪಮ್ ಖೇರ್ ಅವರ ಸಂತಾಪ ಸಂದೇಶವನ್ನೂ ಒಳಗೊಂಡಿದೆ.

2 Min read
Author : Kannadaprabha News
Published : Dec 28 2024, 11:59 AM IST
Share this Photo Gallery
  • FB
  • TW
  • Linkdin
  • Whatsapp
17

ಪ್ರಧಾನಿ ಹುದ್ದೆಯನ್ನೇರಿದರೂ ಮಧ್ಯಮ ವರ್ಗದವರಾಗಿದ್ದುಕೊಂಡು ಸಾಮಾನ್ಯರಿಗಾಗಿ ಕೆಲಸ ಮಾಡಬೇಕು ಎಂದು ಬಯಸಿದ್ದ ಮನಮೋಹನ ಸಿಂಗ್‌ ಅವರು ಐಷಾರಾಮಿ ಬಿಎಂಡಬ್ಲು ಕಾರ್‌ ತಿರಸ್ಕರಿಸಿ ಮಾರುತಿ 800 ಪ್ರತಿ ಒಲವು ಹೊಂದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಈ ಕುರಿತು ಪ್ರಧಾನಿ ಸಿಂಗ್‌ ಅವರ ಅಂಗರಕ್ಷಕರಾಗಿ 3 ವರ್ಷ ಸೇವೆ ಸಲ್ಲಿಸಿರುವ ಅಸೀಮ್‌ ಅರುಣ್‌ ಮಾತನಾಡಿ, ‘ಸದಾ ಪ್ರಧಾನಿಯವರ ನೆರಳಿನಂತೆ ಅವರೊಂದಿಗೆ ಇರುವುದೇ ನನ್ನ ಕರ್ತವ್ಯವಾಗಿತ್ತು. ಆಗ ಸಿಂಗ್‌ರ ಬಳಿ ಭದ್ರತೆಯುಳ್ಳ ಹಲವು ವಾಹನಗಳಿದ್ದರೂ ಅವರು ಸಾಧಾರಣ ಕಾರಿನತ್ತ ಒಲವು ಹೊಂದಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

37

ಭದ್ರತಾ ದೃಷ್ಟಿಯಿಂದ ಬಿಎಂಡಬ್ಲು ಉತ್ತಮ ಎಂದು ಎಷ್ಟೇ ಮನವರಿಕೆ ಮಾಡಿಸಿದರೂ, ನನ್ನ ಕಾರ್‌ ಮಾರುತಿ 800’.. ಎನ್ನುತ್ತಿದ್ದರು. ಮಾರ್ಗದಲ್ಲೆಲ್ಲಾದರೂ ಮಾರುತಿ ಕಾರ್‌ ಕಂಡರೆ ಅವರ ಕಣ್ಣು ಅದನ್ನೇ ಹಿಂಬಾಲಿಸುತ್ತಿತ್ತು. ಇದು ಅವರ ಸರಳತೆಯ ದ್ಯೋತಕ’ ಎಂದರು.

47

ಅನುಪಮ್ ಖೇರ್ ಸಂತಾಪ
‘ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದಲ್ಲಿ ಡಾ. ಮನಮೋಹನ ಸಿಂಗ್‌ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನುಪಮ್‌ ಖೇರ್‌ ಅವರು ಸೀಂಗ್‌ರ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

57

ಖೇರ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಸುದೀರ್ಘ ವಿಡಿಯೋದಲ್ಲಿ, ‘ರಾಜಕೀಯ ಸೇರಿದಂತೆ ಹಲವು ಕಾರಣಗಳಿಂದಾಗಿ ಮೊದಲು ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಂತರ ಈ ಪಾತ್ರದಲ್ಲಿ ಮನಃಪೂರ್ವಕವಾಗಿ ಅಭಿನಯಿಸಿದೆ. ಈ ವೇಳೆ ಅವರ ಕೆಲ ಗುಣಗಳನ್ನೂ ಅಳವಡಿಸಿಕೊಂಡೆ. ಆ ಚಿತ್ರ ವಿವಾದಾತ್ಮಕವಾಗಿರಬಹುದು, ಆದರೆ ನೀಲಿ ಪೇಟದಲ್ಲಿ ಕಂಗೊಳಿಸಿದ ಆ ವ್ಯಕ್ತಿಯಲ್ಲ’ ಎಂದಿದ್ದಾರೆ.

67
ಸರ್ಜರಿ ವೇಳೆ ‘ದೇಶ ಹೇಗಿದೆ? ಕಾಶ್ಮೀರ ಹೇಗಿದೆ?’ ಎಂದಿದ್ದ ಸಿಂಗ್‌

ಸರ್ಜರಿ ವೇಳೆ ‘ದೇಶ ಹೇಗಿದೆ? ಕಾಶ್ಮೀರ ಹೇಗಿದೆ?’ ಎಂದಿದ್ದ ಸಿಂಗ್‌

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ವೇಳೆ ಶಸ್ತ್ರಚಿಕಿಸ್ತೆಗೆ ಒಳಗಾಗಿದ್ದಾಗಲೂ ಅವರಿಗೆ ಇದ್ದದ್ದು ದೇಶದ ಚಿಂತೆ ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಡಾ.ರಮಾಕಾಂತ್‌ ಪಾಂಡಾ, 2009ರಲ್ಲಿ ಸಿಂಗ್‌ ಅವರು ದೆಹಲಿಯ ಏಮ್ಸ್‌ನಲ್ಲಿ ಸತತ 10 ಗಂಟೆಗಳ ಕಾಲ ಬೈಪಾಸ್‌ ಸರ್ಜರಿಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಅವರು ಕೇಳಿದ ಮೊದಲ ಪ್ರಶ್ನೆಯೆಂದರೆ, ನನ್ನ ದೇಶ ಹೇಗಿದೆ? ಕಾಶ್ಮೀರ ಹೇಗಿದೆ?. ನನಗೆ ಚಿಕಿತ್ಸೆಯದ್ದಲ್ಲ, ದೇಶದ ಚಿಂತೆಯಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

77

ಸಿಂಗ್‌ರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಪಾಂಡಾ, ‘ಅವರು ಆಸ್ಪತ್ರೆಗೆ ಬರುತ್ತಿದ್ದಾಗ ನಾವು ಗೇಟಿನ ಬಳಿ ಹೋಗುವುದನ್ನು ನಯವಾಗಿ ನಿರಾಕರಿಸುತ್ತಿದ್ದರು. ಅವರು ಮಾನಸಿಕವಾಗಿ ಧೃಡವಾಗಿದ್ದರು’ ಎಂದು ಪ್ರಶಂಸಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕಾಂಗ್ರೆಸ್

Latest Videos
Recommended Stories
Recommended image1
ಮೀಸಲಾತಿಯನ್ನು ಬೆಂಬಲಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್​: ಆದ್ರೆ ಇಲ್ಲೊಂದಿದೆ ಸಕತ್​ ಟ್ವಿಸ್ಟ್​
Recommended image2
ಹಬ್ಬದ ತಯಾರಿ ನಡುವೆ, ನಡು ರಸ್ತೆಯಲ್ಲಿ ಧ್ವಂಸಗೊಂಡ ಗಣೇಶ ಮೂರ್ತಿ
Recommended image3
20 ವರ್ಷ ಚಿಕ್ಕವಳಾದ ನೀನು ವಿಧವೆಯಂತೆ ಬಾಳೋದು ಇಷ್ಟವಿಲ್ಲ- ತಲಾಖ್​ ಕೊಡುವೆ: ಉಗ್ರ ಯಾಸಿನ್​​ ಮಲಿಕ್​ ಪತ್ರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved