ಮಕ್ಕಳ ಆರೋಗ್ಯದಿಂದ ಹಿಡಿದು, ಹಿರಿಯರ ಸದೃಢತೆಗೆ ನೇಂದ್ರ ಬಾಳೆಹಣ್ಣೆಂಬ ಔಷಧ
ನೇಂದ್ರ ಬಾಳೆ ಹಣ್ಣನ್ನು ಚೆಂಗಲಿ ಕೊಂಡನ್ ನೇಂದ್ರ ಬಾಳೆಹಣ್ಣು ಅಂತಲೂ ಕರೆಯುತ್ತಾರೆ. ಇದನ್ನು ಕೇರಳದ ತ್ರಿಶೂರ್ನ ಚೆಂಗಾಸಿ ಕೊಡು ಎಂಬ ಹಳ್ಳಿಯಲ್ಲಿ ಬೆಳೆಸುತ್ತಾರೆ. ಈ ಬಾಳೆಹಣ್ಣಿನಲ್ಲಿ ಎಷ್ಟು ಪೌಷ್ಠಿಕತೆ ಇದೆ ಎಂದರೆ, ಪುಟ್ಟಮಕ್ಕಳಿಂದ ಹಿಡಿದು ಹಿರಿಯರು ತಿನ್ನಬಹುದು. ಇದು ಬೇರೆ ಬಾಳೆಹಣ್ಣಿನ ಹಾಗೆ ಸಿಪ್ಪೆ ತೆಳ್ಳಗೆ ಇರುವುದಿಲ್ಲ ದಪ್ಪಗೆ ಇರುತ್ತದೆ. ಇದರ ತಿನಿಸುಗಳನ್ನು ಇಷ್ಟ ಪಡದವರಿಲ್ಲ.
ನೇಂದ್ರಬಾಳೆಕಾಯಿ ಸಿಹಿ ಚಿಪ್ಸ್, ಉಪ್ಪು ಹಾಕಿ ಚಿಪ್ಸ್ ಮಾಡಬಹುದು. ಬೆಲ್ಲ ಹಾಕಿಯೂ ಚಿಪ್ಸ್ ಮಾಡಬಹುದು. ಇದು ಹಣ್ಣು ಆದಾಗ ಇದರ ಹಲ್ವಾ, ಪಾಯಸ ಬಲು ರುಚಿ. ಮಕ್ಕಳಿಗೆ ಕೊಡಲು ಹಬೆಯಲ್ಲಿ ಬೇಯಿಸಿ ಇದಕ್ಕೆ ಜೇನುತುಪ್ಪ ಹಾಕಿ ತಿನ್ನಲು ಬಲು ರುಚಿ. ಇದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ತುಪ್ಪದಲ್ಲಿ ಫ್ರೈ ಮಾಡಿ ಸಕ್ಕರೆ ಪಾಕದಲ್ಲಿ ಅದ್ದಿ ತಿಂದರೂ ಸೂಪರೇ ಟೋಸ್ಟ್.
![article_image2](https://static-ai.asianetnews.com/images/01dmxbw6f8p8fk42eyyp0bdmrr/banana-jpg_300x171xt.jpg)
ತೂಕ ಹೆಚ್ಚಿಸಿಕೊಳ್ಳುವವರು ನೇಂದ್ರಬಾಳೆಹಣ್ಣಿನ ಸೇವನೆ ನಿರಂತರ ಮಾಡಿದರೆ ಉತ್ತಮ.
ಇದರಿಂದ ಆಗುವಂತಹ ಉಪಯೋಗಗಳು: ಅನೇಕ ಆರೋಗ್ಯ ದೃಷ್ಟಿ ಯಿಂದ ನೋಡಿದರೂ ಇದರಲ್ಲಿ ಖನಿಜ, ಲವಣ ಅಂಶ, ವಿಟಮಿನ್ ಬಿ6 ಮತ್ತು ನಾರಿನ ಅಂಶ ಹೆಚ್ಚು. ಮಕ್ಕಳಲ್ಲಿ ತೂಕ ಹೆಚ್ಚಬೇಕು ಮತ್ತು ಮೂಳೆ ಗಟ್ಟಿಯಾಗಬೇಕು ಎಂದಾದರೆ ನೇಂದ್ರಬಾಳೆ ಹಣ್ಣನ್ನು ಬೇಯಿಸಿ ಕೊಡಿ. ಪಾಯಸ ಮಾಡಿಯೂ ಕೂಡ ಕೊಡಬಹುದು.
ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಂ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಕಣ್ಣಿನ ಆರೋಗ್ಯಕ್ಕೂ ಬಾಳೆಹಣ್ಣಿನ ಉಪಯೋಗ ಬಹಳ. ಕಣ್ಣಿನ ಆರೋಗ್ಯ ಉತ್ತಮವಾಗಿರಲು ನಿಯಮಿತವಾಗಿ ಬಾಳೆಹಣ್ಣು ಸೇವಿಸುತ್ತಿರಿ.
ಈಗ ಅಂಗಡಿಗಳಲ್ಲಿ ಬಾಳೆಕಾಯಿ ಪೌಡರ್ ಸಿಗುತ್ತದೆ ಇದನ್ನು 6 ತಿಂಗಳ ಮೇಲಿನ ಮಕ್ಕಳಿಗೆ ಬೇಯಿಸಿ ಕೊಟ್ಟರೆ ಬಹಳ ಒಳ್ಳೆಯದು. ಇದು ಮಕ್ಕಳ ಮೊದಲ ಆಹಾರವಾಗಿ ಕೇರಳಗಳಲ್ಲಿ ಕೊಡುತ್ತಾರೆ. ಇದನ್ನು ಬೆಳಗಿನ ಉಪಹಾರವಾಗಿ ಸೇವಿಸಬಹುದು.
ಮಲಬದ್ಧತೆ ಸಮಸ್ಯೆ ಇದ್ದವರು ಬಾಳೆಹಣ್ಣಿನ ಸೇವನೆ ಮಾಡಿದಲ್ಲಿ ಬಹಳ ಪರಿಣಾಮ ಬೀರುತ್ತದೆ.
ನೇಂದ್ರ ಬಾಳೆ ಕಾಯಿ ಇದನ್ನು ಹಣ್ಣು ಮಾಡಲು ನಾಲ್ಕೈದು ದಿನ ರೂಮ್ ಟೆಂಪರೇಚರ್ನಲ್ಲಿ ಇಟ್ಟರೆ ಸಾಕು ಹಣ್ಣಾಗುತ್ತದೆ.
ರೋಗನೀರೋಧಕ ಶಕ್ತಿ ಹೆಚ್ಚಿಸುವಲ್ಲಿ ನೇಂದ್ರ ಬಾಳೆ ಹಣ್ಣು ಸಹಾಯ ಮಾಡುತ್ತದೆ.