MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಯಾರಿಂದ ದೂರವಿದ್ದರೆ ಜೀವನ ಯಶಸ್ವಿಯಾಗುತ್ತೆ… ತಿಳಿಯಿರಿ ವಿದುರ ನೀತಿಯಿಂದ

ಯಾರಿಂದ ದೂರವಿದ್ದರೆ ಜೀವನ ಯಶಸ್ವಿಯಾಗುತ್ತೆ… ತಿಳಿಯಿರಿ ವಿದುರ ನೀತಿಯಿಂದ

ಮಹಾತ್ಮ ವಿದುರನನ್ನು ಮಹಾಭಾರತದ ಕಾಲದ ಮಹಾನ್ ಬುದ್ಧಿಜೀವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಮಹಾನ್ ಚಿಂತಕ ಮತ್ತು ದೂರದರ್ಶಿತ್ವ ಮತ್ತು ತೀಕ್ಷ್ಣ ಬುದ್ಧಿವಂತರಾಗಿದ್ದರು. ಧೃತರಾಷ್ಟ್ರ ಮತ್ತು ಪಾಂಡುವಿನಂತೆ ವಿದುರನು ವೇದವ್ಯಾಸ ಮಹರ್ಷಿಗಳ ಮಗನಾಗಿದ್ದರು, ಆದರೆ ಅವನು ಸೇವಕಿಯ ಗರ್ಭದಿಂದ ಜನಿಸಿದನು, ಇದರಿಂದಾಗಿ ಅವನು ರಾಜನಾಗಲು ಸಾಧ್ಯವಾಗಲಿಲ್ಲ. ಅವರು ಹಸ್ತಿನಾಪುರದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ವಿಧುರನ ನೀತಿಗಳು ಸರ್ವಕಾಲಕ್ಕೂ ಶ್ರೇಷ್ಟವಾಗಿದೆ. ಅವುಗಳ ಬಗ್ಗೆ ತಿಳಿಯೋಣ. 

2 Min read
Suvarna News
Published : Nov 10 2022, 03:33 PM IST
Share this Photo Gallery
  • FB
  • TW
  • Linkdin
  • Whatsapp
18

ವಿದುರನ ಬಗ್ಗೆ ಗ್ರಂಥಗಳಲ್ಲಿ ಸಾಕಷ್ಟು ಮಾಹಿತಿ ನೀಡಲಾಗಿದೆ. ಇವರ ನೀತಿಗಳು ಜೀವನಕ್ಕೆ ಉತ್ತಮ (life lesson) ಪಾಠ ನೀಡುತ್ತದೆ. ವಿಧುರ ಸಮಯಕ್ಕಿಂತ ಮುಂಚಿತವಾಗಿ ಸಂದರ್ಭಗಳನ್ನು ಗ್ರಹಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಮಹಾಭಾರತದ ಯುದ್ಧಕ್ಕೆ ಮುಂಚೆಯೇ, ವಿದುರ ಯುದ್ಧದ ಪರಿಣಾಮಗಳ ಬಗ್ಗೆ ಧೃತರಾಷ್ಟ್ರನಿಗೆ ತಿಳಿಸಿದ್ದರು.   

28

ವಿದುರ ಮತ್ತು ಮಹಾರಾಜ ಧೃತರಾಷ್ಟ್ರನ ನಡುವಿನ ಸಂಭಾಷಣೆಯನ್ನು ವಿದುರ ನೀತಿ ಎಂದು ಕರೆಯಲಾಗುತ್ತದೆ. ವಿದುರರು ಹೇಳಿದ ವಿಷಯಗಳು ಇಂದಿನ ಕಾಲಘಟ್ಟದಲ್ಲಿ ಎಷ್ಟು ಪ್ರಸ್ತುತವಾಗಿದ್ದವೋ ಹಾಗೆಯೇ ಎಲ್ಲರೂ ಒಪ್ಪಿಕೊಳ್ಳುವಂತಹ ವಿಷಯವೂ ಆಗಿದೆ. ವಿದುರರ ನೀತಿಗಳನ್ನು (Vidur Niti) ಜೀವನದಲ್ಲಿ ಅನುಸರಿಸಿದರೆ, ಅನೇಕ ರೀತಿಯ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ಜೀವನವನ್ನು ಸಂತೋಷಗೊಳಿಸಬಹುದು. 
 

38

ವಿದುರ ನೀತಿಯು ಯಾವಾಗಲೂ ದೂರವಿರಲು ಉತ್ತಮವಾಗಿರುವ ಕೆಲವು ಜನರ ಬಗ್ಗೆ ಹೇಳಿದೆ. ಇದಲ್ಲದೆ, ವಿದುರ ನೀತಿಯಲ್ಲಿ ಜ್ಞಾನಿ ವ್ಯಕ್ತಿಯನ್ನು ಗುರುತಿಸುವುದು, ಹಣದ ಸರಿಯಾದ ಬಳಕೆ (money management) ಮತ್ತು ದುರುಪಯೋಗ ಇತ್ಯಾದಿಗಳ ಬಗ್ಗೆಯೂ ಪ್ರಮುಖ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಇದರ ಬಗ್ಗೆ ತಿಳಿದುಕೊಳ್ಳೋಣ.

48

ಜ್ಞಾನಿಯನ್ನು ಹೀಗೆ ಗುರುತಿಸಿ-
ಯಾರು ಕೇಳದೆ ಸುಮ್ಮನೇ ಯಾರು ಮಾತನಾಡುವುದಿಲ್ಲವೋ ಆ ವ್ಯಕ್ತಿಯು ಜ್ಞಾನಿಯಾಗಿರುತ್ತಾನೆ. ಅವನು ಇತರರ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾನೆ ಮತ್ತು ವಿಷಯವನ್ನು ಕಲಿಯಲು ಪ್ರಯತ್ನಿಸುತ್ತಾನೆ. ಕೆಲಸವನ್ನು ತಪ್ಪು ರೀತಿಯಲ್ಲಿ ಅಥವಾ ಆಸೆಯಿಂದ ಪೂರ್ಣಗೊಳಿಸುವ ಬದಲು ತನ್ನ ಬುದ್ಧಿಶಕ್ತಿಯಿಂದ ಪೂರ್ಣಗೊಳಿಸಲು ಪ್ರಯತ್ನಿಸುವ ವ್ಯಕ್ತಿ. ಅಂತಹ ಜನರು ಜ್ಞಾನವಂತರು (wise person).

58

ಈ ವ್ಯಕ್ತಿಗಳಿಂದ ದೂರವಿರಿ-
ವಿದುರ ನೀತಿಯು ಯಾವಾಗಲೂ  ಅಜಾಗರೂಕತೆ, ಸೋಮಾರಿತನ, ಕೋಪ, ಅನೈತಿಕ ಕೃತ್ಯಗಳು, ಮಾದಕ ವ್ಯಸನಿಗಳು, ದುರಾಸೆ, ಭಯ,,ಕಾಮಪ್ರಚೋದಕರಿಂದ ದೂರವಿರುವುದು ಒಳ್ಳೆಯದು ಎಂದು ಹೇಳುತ್ತದೆ. ಅಂತಹ ಜನರು ತಾವಾಗಿಯೇ ಮುಂದೆ ಸಾಗುವುದಿಲ್ಲ ಮತ್ತು ಇನ್ನೊಬ್ಬರನ್ನು ಮುಂದೆ ಸಾಗಲು ಬಿಡುವುದಿಲ್ಲ. ಇವೆಲ್ಲವೂ ನಿಮ್ಮನ್ನು ವಿನಾಶದತ್ತ ಕೊಂಡೊಯ್ಯುತ್ತವೆ. ಅಂತಹ ಜನರೊಂದಿಗೆ ಸಹವಾಸ ಮಾಡುವವರು ತಮ್ಮ ಜೀವನದಲ್ಲಿ ಕಷ್ಟಗಳನ್ನು (trouble in life) ಎದುರಿಸಬೇಕಾಗುತ್ತದೆ ಮತ್ತು ಎಂದಿಗೂ ಯಶಸ್ಸನ್ನು ಸಾಧಿಸುವುದಿಲ್ಲ. 

68

ಇವು ಹಣದ ಎರಡು ದುರುಪಯೋಗಗಳು
ಶ್ರದ್ಧೆ ಮತ್ತು ನೀತಿಯ ಗಳಿಕೆಗಳು ಒಳ್ಳೆಯದು ಎಂದು ವಿದುರ ನೀತಿ ಹೇಳುತ್ತಾರೆ. ಆದರೆ ಹಣದ ಮೊದಲ ದುರುಪಯೋಗವೆಂದರೆ ದುಷ್ಟರಿಗೆ (one who not need money) ಹಣವನ್ನು ನೀಡುವುದು ಮತ್ತು ಎರಡನೆಯ ದುರುಪಯೋಗ ಎಂದರೆ ಅಗತ್ಯವಿದ್ದಾಗ ಸಹ ಅರ್ಹರಿಗೆ ಹಣ ನೀಡದಿರುವುದು.

78

ಈ ಇಬ್ಬರು ವ್ಯಕ್ತಿಗಳು ಸ್ವರ್ಗಕ್ಕಿಂತಲೂ ಮಿಗಿಲಾದವರು 
ವಿದುರ ನೀತಿಯು ಇಬ್ಬರು ವ್ಯಕ್ತಿಗಳನ್ನು ವಿವರಿಸುತ್ತದೆ, ಅವರ ಸ್ಥಾನವು ಸ್ವರ್ಗಕ್ಕಿಂತ ಮೇಲಿದೆ. ವಿದುರ ನೀತಿ ಹೇಳುವಂತೆ, ಶಕ್ತಿಶಾಲಿಯಾಗಿದ್ದರೂ ಕ್ಷಮೆಯ ಗುಣವನ್ನು ಹೊಂದಿರುವ ಮತ್ತು ಬಡವರಾಗಿದ್ದರೂ ದಾನ ಮಾಡುವ ವ್ಯಕ್ತಿಗಳ ಸ್ಥಾನವು ಸ್ವರ್ಗಕ್ಕಿಂತ ಮೇಲಿರುತ್ತದೆ.

88

ಈ ಗುಣಗಳನ್ನು ಹೊಂದಿರುವ ವ್ಯಕ್ತಿಯು ಶ್ಲಾಘನಾರ್ಹ
ವಿದುರ ನೀತಿಯು ಎಂಟು ಗುಣಗಳ ಬಗ್ಗೆ ಮಾತನಾಡುತ್ತದೆ. ಈ ಗುಣಗಳನ್ನು ಹೊಂದಿರುವ ವ್ಯಕ್ತಿಯು ಶ್ಲಾಘನಾರ್ಹ ಎಂದು ಇದು ತಿಳಿಸಿದೆ. ಅವುಗಳೆಂದರೆ ಬುದ್ಧಿವಂತಿಕೆ, ಸಮಚಿತ್ತ, ಮೃದುಭಾಷೆ, ಜ್ಞಾನ, ಶೌರ್ಯ, ಕಡಿಮೆ ಮಾತನಾಡುವವರು, ಇನ್ನೊಬ್ಬರು ಮಾಡಿದ ಉಪಕಾರವನ್ನು ನೆನಪಿಟ್ಟುಕೊಳ್ಳುವವರು, ದಾನ ಮಾಡುವವರು ಈ ಎಂಟು ಗುಣಗಳನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಪ್ರಶಂಸೆಗೆ ಅರ್ಹನಾಗಿರುತ್ತಾನೆ.
 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved