ಪಾದರಕ್ಷೆ ಜಾಹೀರಾತಿಗೆ ದುರ್ಗಿ ಫೋಟೋಶೂಟ್ , ಕೊನೆಗೂ ತಪ್ಪಾಯ್ತು ಎಂದಳು!
ಮುಂಬೈ(ನ. 13) ಅಂತಾರಾಷ್ಟ್ರೀಯ ಖ್ಯಾತಿಯ ರ್ಯಾಪರ್ ಕಾರ್ಡಿ ಬಿ ಇತ್ತೀಚೆಗೆ ಪೋಟೋ ಶೂಟೊಂದನ್ನು ಮಾಡಿಸಿಕೊಂಡು ವಿವಾದ ಸೃಷಷ್ಟಿ ಮಾಡಿದ್ದರು. ಕೊನೆಗೂ ಕ್ಷಮೆ ಕೇಳಿದ್ದಾರೆ.
ಪಾದರಕ್ಷೆಯ ಜಾಹೀರಾತಿಗಾಗಿ ಹಿಂದೂ ದೇವತೆ ದುರ್ಗೆಯ ರೀತಿ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ವಿರೋಧಕ್ಕೆ ಕಾರಣವಾಗಿತ್ತು.
ಯಾರಿಗೂ ನೋವು ಮಾಡುವ ಉದ್ದೇಶ ನನಗೆ ಇರಲಿಲ್ಲ. ಈಗ ಆಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ.
ಯಾವ ಧರ್ಮವನ್ನು ಅಥವಾ ಯಾರನ್ನು ನೋಯಿಸುವ ಉದ್ದೇಶ ಇದರ ಹಿಂದೆ ಇಲ್ಲ. ನಿರ್ದೇಶಕರು ಹೇಳಿದಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಆಗ್ರಹಕ್ಕೆ ಮಣಿದ ನಟಿ ಕ್ಷಮೆ ಕೇಳಿದ್ದು ಇನ್ನು ಮುಂದೆ ಯಾವ ಬದಲಾವಣೆ ಪಡೆದುಕೊಳ್ಳುತ್ತದೆ ನೋಡಬೇಕು .