ಡಿ-ಬಾಸ್ ಬಗ್ಗೆ ಗೊತ್ತಿರದ 20 ಸ್ಪೆಶಲ್ ವಿಚಾರಗಳಿವು, ಹ್ಯಾಪಿ ಬರ್ತಡೆ ದರ್ಶನ್
ಬೆಂಗಳೂರು(ಫೆ. 16) ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಸುಲ್ತಾನ ದರ್ಶನ್ ಜನ್ಮದಿನ ಅಂದರೆ ಕೇಳಬೇಕೆ ಅದು ಅಭಿಮಾನಿಗಳಿಹ ಹಬ್ಬ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಒಡೆಯನ ಬಗ್ಗೆ ನಿಮಗೆ ಗೊತ್ತಿರದ ಒಂದಿಷ್ಟು ವಿಚಾರಗಳನ್ನು ಹೇಳುತ್ತೇವೆ ಕೇಳಿ
ಖ್ಯಾತ ಖಳನಟ ತೂಗುದೀಪ್ ಶ್ರೀನಿವಾಸ್ ಅವರ ಪುತ್ರ ದರ್ಶನ್.
50ಕ್ಕೂ ಅಧಿಕ ಕನ್ನಡ ಚಿತ್ರದಲ್ಲಿ ನಟಿಸಿರುವ ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಯುತ್ತಾರೆ.
ಜನ್ಮದಿನದಂದು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಅಭಿಮಾನಿಗಳೊಂದಿಗೆ ಬರೆಯುತ್ತಾರೆ.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ದರ್ಶನ್ ಮೈಸೂರಿನಲ್ಲಿ ಪಡೆದುಕೊಂಡರು.
Darshan
Darshan
Darshan
ಶಿವಮೊಗ್ಗದ ನೀನಾಸಂನಲ್ಲಿ ರಂಗ ತರಬೇತಿ ಪಡೆದುಕೊಂಡರು.
ದಿವ್ಯಾ ಮತ್ತು ನಿರ್ದೇಶಕ ದಿನಕರ್ ತೂಗುದೀಪ ದರ್ಶನ್ ಅವರ ಸಹೋದರಿ ಮತ್ತು ಸಹೋದರ.
ವಿಜಯಲಕ್ಷ್ಮೀ ದರ್ಶನ್ ಅವರ ಪತ್ನಿ.
ವಿಘ್ನೇಶ್ ದರ್ಶನ್ ಅವರ ಪುತ್ರ .
ಕಷ್ಟದ ದಿನಗಳನ್ನು ಕಳೆದ ದರ್ಶನ್ ಬಾಲ್ಯದಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡಿದ್ದರು.
ಲೈಟ್ ಬಾಯ್ ಆಗಿ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಮೊದಲು ಕೆಲಸ ಮಾಡಿದರು.
ಬಿಸಿ ಗೌರಿಶಂಕರ್ ಗೆ ಅಸಿಸ್ಟಂಟ್ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದರು.
ಎಸ್ ನಾರಾಯಣ್ ನಿರ್ದೇಶನದ ಮಹಾಭಾರತ, ಅಂಬಿಕಾ ನಂತರ ಡಿಡೆಕ್ಟೀವ್ ಚಂದ್ರಕಾಂತ ಧಾರಾವಾಹಿಯಲ್ಲಿ ದರ್ಶನ್ ಮೊದಲಿಗೆ ಅಭಿನಯಿಸಿದರು.
ಇದಾದ ಮೇಲೆ ಕನ್ನಡ ಮತ್ತು ಕೆಲ ತಮಿಳು ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು.
ಪಿನ್ ಸತ್ಯ ಅವರ ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡ ದರ್ಶನ್ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ.
ಕಲಾಸಿಪಾಳ್ಯ ಎಂಬ ಚಿತ್ರ ದೊಡ್ಡ ಮಟ್ಟಿದ ಹೆಸರು ತಂದು ಕೊಟ್ಟಿತು \.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ದರ್ಶನ್ ಅವರಿಗೆ ಒಲಿದುಬಂತು.
ದರ್ಶನ್ ಮತ್ತು ಅಭಿಷೇಕ್ ಅಂಬರೀಶ್ ಅವರದ್ದು ಮಾದರಿ ಗೆಳೆತನ
ಸೃಜನ್ ಲೋಕೇಶ್ ಅವರೊಂದಿಗೆ ಸೇರಿದರೆ ಇಬ್ಬರು ಬಾಣಸಿಗರಾಗುತ್ತಾರೆ.