ಪ್ರೇಯಸಿ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡವ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ!
ಇವರಿಬ್ಬರು ಲವ್ ಬರ್ಡ್ಸ್. ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಕಾಲೇಜು ಓದುತ್ತಿರುವಾಗ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರು ಪ್ರೀತಿ-ಪ್ರೇಮ-ಪ್ರಣಯ ಪಕ್ಷಿಗಳಂತೆ ಈ ಜೋಡಿ ಹಕ್ಕಿ ಎಲ್ಲೆಂದರಲ್ಲಿ ತಿರುಗಾಡುತ್ತಾ ಕದ್ದುಮುಚ್ಚಿ ಪ್ರೀತಿ ಮಾಡುತ್ತಿತ್ತು. ಆದರೆ, ಅದೇನಾಯಿತೋ ಮದುವೆ ನಿರಾಕರಿಸಿದ್ದಾಳೆ ಹುಡುಗಿ. ರೊಚ್ಚಿಗೆದ್ದಿದ್ದಾನೆ ಹುಡುಗ. ಕಾದು ಕುಳಿದು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ನಿತ್ಯಾಶ್ರಿಗೆ ಚಿಕಿತ್ಸೆ ಮುಂದುವರಿದಿದೆ. ಹಲ್ಲೆ ಮಾಡಿದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓದುವಾಗ ರಾಷ್ಟ್ರೀಯ ಹಾಗೂ ರಾಜ್ಯ ತಂಡಗಳನ್ನೂ ಪ್ರತಿನಿಧಿಸಿದ್ದಿ ಗಿರೀಶ್ ಕಬಿಡ್ಡ ಆಟಗಾರನಾಗಿದ್ದು, ಪ್ರೆಯಸಿ ಮಾತಿಗೆ ಕಟ್ಟು ಬಿದ್ದು ಆಟ ಬಿಟ್ಟು ಬೆಂಗಳೂರು ಸೇರಿದ್ದ. ಆದರೆ, ಬರಬರುತ್ತಾ ನಿತ್ಯಾಶ್ರೀ ಗಿರೀಶ್ನನ್ನು ದೂರ ಮಾಡಲು ಆರಂಭಿಸಿದ್ದು, ಸಿರಿವಂತನನ್ನು ಮದುವೆಯಾಗುತ್ತೇನೆಂದು ಹೇಳುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಜೋಡಿ ತೆಗೆದುಕೊಂಡು ಖಾಸಗೀ ಕ್ಷಣದ ಫೋಟೋಗಳಿವು.
ಪ್ರೆಯಸಿಯನ್ನು ಕೊಂದ ಗಿರೀಶ್, ಖ್ಯಾತ ಕಬಡ್ಡಿ ಪಟು ಮಂಜಿತ್ ಚಿಲ್ಲರ್ ಅವರೊಂದಿಗೆ.
ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ಇವರಿಬ್ಬರ ನಡುವೆ ಪ್ರೀತಿ ಮೊಳಕೆ ಹೊಡೆದಿದೆ.
ಹುಡುಗನ ಹೆಸರು ಗಿರೀಶ್, ಹುಡುಗಿ ಹೆಸ್ರು ಸುನೀತಾ (ಹೆಸರು ಬದಲಾಯಿಸಲಾಗಿದೆ)
ಅದೇನಾಯ್ತೋ ಏನೋ ಇಬ್ಬರ ನಡುವೆ ಜಗಳ ಆರಂಭವಾಗಿ ದೂರಾಗಿದ್ದರು.
ಅಷ್ಟೇ ಅಲ್ಲದೇ ಇಬ್ಬರ ಪ್ರೀತಿಯ ಗಲಾಟೆ ಠಾಣೆ ಮೆಟ್ಟಿಲೇರಿತ್ತು.
ಈ ಹಿನ್ನೆಲೆಯಲ್ಲಿ ಬಟ್ಟೆ ಶಾಪಿಂಗ್ಗೆಂದು ಯುವತಿ ಹೊರ ಬಂದಿದ್ದಳು. ಈ ವೇಳೆ ಮಂಡ್ಯದಿಂದ ಆಗಮಿಸಿದ್ದ ಗಿರೀಶ್, ಪಾಗಲ್ ಪ್ರೇಮಿಯೊಬ್ಬ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಯುವತಿ ಮೇಲೆ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಬಳಿಕ ರಾಜಿ ಮಾಡಿಕೊಂಡು ಸುಮ್ಮನಿರುವುದಾಗಿ ಆರೋಪಿ ಗಿರೀಶ್ ಹೇಳಿದ್ದ.
ಆದ್ರೆ, ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್ನಲ್ಲಿ ಮದುವೆಗೆ ಡೆಟ್ ಫಿಕ್ಸ್ ಕೂಡ ಆಗಿತ್ತು.
ಯುವತಿಯ ಕುತ್ತಿಗೆ, ತಲೆ, ಕಾಲು, ಹೊಟ್ಟೆ ಭಾಗಕ್ಕೆ ತೀವ್ರತರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾಳೆ
ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರುನ ತಾವರಕೇರೆ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಪ್ರೀತಿಯ ಜಗಳದಲ್ಲಿ ಪ್ರೇಯಸಿ ಆಸ್ಪತ್ರೆ ಸೇರಿದ್ರೆ, ಪ್ರಿಯತಮ ಮಸಣ ಸೇರಿದ್ದಾನೆ. ಆದ್ರೆ, ಈ ಹಿಂದೆ ಇವರಿಬ್ಬರು ಪ್ರಣಯ ಪಕ್ಷಿಗಳಂತೆ ಸುತ್ತಾಡಿರುವ ಚಿತ್ರಗಳು ಮಾತ್ರ ಅಚ್ಚಳಿಯದೆ ಉಳಿದಿವೆ.