ಬಾಗಲಕೋಟೆ ಪೊಲೀಸರ ಮಾನವಿಯತೆಗೊಂದು ಸಲಾಂ..!
ಬಾಗಲಕೋಟೆ(ಮಾ.30): ಲಾಕ್ಡೌನ್ ಮಧ್ಯೆ ಕರ್ತವ್ಯ ಪ್ರಜ್ಞೆಯ ಜೊತೆಗೆ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ನಗರದ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಗರದ ರೈಲ್ವೆ ನಿಲ್ದಾಣ, ನವನಗರ, ವಿದ್ಯಾಗಿರಿ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಪೊಲೀಸರು ಆಹಾರ ವಿತರಣೆ ಮಾಡಿದ್ದಾರೆ.
ಲಾಠಿ ಎತ್ತುವ ಕೈಯಿಂದಲೇ ಮಾನವೀಯ ಕಾರ್ಯ
ಹಸಿದ ಹೊಟ್ಟೆಗಳಿಗೆ ಆಹಾರ ವಿತರಿಸಿದ ಬಾಗಲಕೋಟೆ ಪೊಲೀಸರು
ರೈಲ್ವೆ ನಿಲ್ದಾಣ, ನವನಗರ, ವಿದ್ಯಾಗಿರಿ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಆಹಾರ ವಿತರಣೆ
ಪೊಲೀಸರ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ
ಆಸ್ಪತ್ರೆ ಸಿಬ್ಬಂದಿ ಜೊತೆ ಬೀದಿಗಳಲ್ಲಿ ಆಹಾರ ಸಿಗದೆ ಪರದಾಡ್ತಿರೋ ಜನರಿಗೂ ಆಹಾರ ವಿತರಣೆ