ಕೊರೋನಾ ಕಾಟ: ಸಿಎಂ ಬಿಎಸ್ವೈ ಮನೆದೇವರ ಸ್ವಾಮೀಜಿಯಿಂದ ಮೌನವ್ರತ
ಭಾರತ ಸೇರಿದಂತೆ ಇಡೀ ಪ್ರಪಂಚವನ್ನ ಕೊರೋನಾ ಮಹಾಮಾರಿ ಆವರಿಸಿದೆ. ದಿನದಿಂದ ದಿನಕ್ಕೆ ಇದರ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದರಿಂದ ಪಾರಾಗಲು ಬಿಎಸ್ ಯಡಿಯೂರಪ್ಪನವರ ಮನೆ ದೇವರಾದ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರನಿಗೆ ಸ್ವಾಮೀಜಿಯೊಬ್ಬರು ಮೊರೆ ಹೋಗಿದ್ದಾರೆ. 48ದಿನಗಳ ಕಾಲ ಮೌನ ವ್ರತ ಆಚರಣೆ ಶ್ರೀಗಳು ಮುಂದಾಗಿದ್ದಾರೆ. ಯಾರು ಆ ಶ್ರೀಗಳು..? ಚಿತ್ರಗಳಲ್ಲಿ ನೋಡಿ
ಕೊರೋನಾದಿಂದ ದೇಶ ಪಾರಾಗಲೆಂದು ಬಿಎಸ್ವೈ ಮನೆ ದೇವರ ದೇವಸ್ಥಾನದ ಸ್ವಾಮೀಜಿಯಿಂದ ಮೌನವ್ರತ
ಗವಿಮಠದ ಶ್ರೀಗಳಾದ ಸ್ವತಂತ್ರ ಚನ್ನವೀರಮಹಾ ಸ್ವಾಮಿಗಳಿಂದ 48ದಿನಗಳ ಕಾಲ ಮೌನ ವ್ರತ
ಕೆಆರ್ ಪೇಟೆಯ ಕಾಪನಹಳ್ಳಿಯಲ್ಲಿರುವ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿ ಸನ್ನಿಧಿ
ದಿನಕ್ಕೆ ಒಂದು ಹೊತ್ತು ಉಪಹಾರ ಸೇವಿಸಿ ಶ್ರೀಗಳಿಂದ 48ದಿನಗಳ ಕಾಲ ಮೌನ ವ್ರತ ಆಚರಣೆ
ಬೆಟ್ಟದ ಗವಿಯಲ್ಲಿ ಕುಳಿತು ದಿನಪೂರ್ತಿ ಮನದಲ್ಲೇ ಪಂಚಾಕ್ಷರಿ ಮಂತ್ರ ಜಪಿಸುತ್ತ ವ್ರತ ಆಚರಿಸಲಿರುವ ಶ್ರೀಗಳು
ಸೋಮವಾರದಿಂದ ಆರಂಭವಾಗಲಿರುವ ವ್ರತ ಮೇ16 ರಂದು ಅಂತ್ಯ
ಮಂಡ್ಯದ ಕೆಆರ್ ಪೇಟೆಯ ಕಾಪನಹಳ್ಳಿಯಲ್ಲಿರುವ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿ ಸಿಎಂ ಬಿಎಸ್ವೈ ಮನೆದೇವರು