ಚಿತ್ರಗಳು: ಇದಪ್ಪಾ ಓರ್ವ ಜನಪ್ರತಿನಿಧಿಯ ಕೆಲ್ಸ ಅಂದ್ರೆ, ಗ್ರೇಟ್ ಗೌಡ್ರೇ..!
ಎಲೆಕ್ಷನ್ ಇದ್ದಾಗ ಮತದಾನದ ದಿನ ಬಂದು ವೋಟು ಮಾಡಿ, ನಾವು ವಾಹನ ಕಳುಹಿಸಿಕೊಡುತ್ತೇವೆ, ನಂತರ ನಾವೇ ನಿಮ್ಮನ್ನು ಅದೇ ವಾಹನದಲ್ಲಿ ಬಿಟ್ಟು ಬರ್ತೇವೆ ಅಂತ ಕೈಕಾಲು ಹಿಡಿಯುವ ಜನಪ್ರತಿನಿಧಿಗಳು. ಆದ್ರೆ, ತನ್ನ ಮತದಾರನಿಗೆ ಕಷ್ಟ ಬಂದಾಗ ಕ್ಯಾರೇ ಎನ್ನದವರು ಹೆಚ್ಚು. ಇದೀಗ ಕೊರೋನಾ ಮಾಹಾಮಾರಿಯಿಂದ ಹಲವು ಬಡ, ನಿರ್ಗತಿಕ ಜನರು ಊಟ ಇಲ್ಲದೇ ಸಂಕಷ್ಟದಲ್ಲಿದ್ದಾರೆ.ಕೆಲ ರಾಜಕಾರಣಿಗಳು ಮಾತ್ರ ತಮಗೆ ಕೊರೋನಾ ಬಂದು ಬಿಡ್ತೋ ಎನ್ನುವ ರೀತಿಯಲ್ಲಿ ಮನೆಯೊಳಗೆ ಬೆಚ್ಚಗೆ ಮಲಗಿದ್ದಾರೆ. ಮತ್ತೊಂದೆಡೆ ಕೃಷ್ಣಬೈರೇಗೌಡ್ರು ತಮ್ಮ ವಾಹನದಲ್ಲಿ ತಿರುಗಾಡಿ ಬಡವರ ಸಂಕಷ್ಟವನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.
ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದ ಬಡ, ನಿರ್ಗತಿಕರ ನೆರವಿಗೆ ಕೃಷ್ಣಬೈರೇಗೌಡ್ರು
ತಮ್ಮ ವಾಹನದಲ್ಲಿ ಊಟ ಸಾಮಾಗ್ರಿಗಳನ್ನು ತಂದು ಹಂಚುತ್ತಿರುವ ಕೃಷ್ಣ ಬೈರೆಗೌಡ
ಓರ್ವ ಪುಟ್ಟ ಮಗುವಿಗೆ ಆಹಾರ ಪೊಟ್ಟಣ ನೀಡುತ್ತುರುವ ದೃಶ್ಯ
250 Kg ಅಕ್ಕಿ, 50 Kg ಬೇಳೆ, 20 Kg ಉಪ್ಪು, 50 Kg ಸಕ್ಕರೆ ವಿತರಣೆ
ಆಹಾರ ಸಾಮಾಗ್ರಿ ಜತೆಗೆ ಸ್ವಲ್ಪ ನಗದು ಹಣ ಸಹ ಕೊಟ್ಟ ಕೃಷ್ಣ ಬೈರೇಗೌಡ
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಎಲ್ಲಾ ಸ್ಲಂಗಳನ್ನು ಸುತ್ತಾಡಿ ಬಡವರಿಗೆ ಧಾನ
ಪೂರ್ತಿ ಬಡವರಿಗೆ ನಗದು ಹಣ ಕೊಟ್ಟ ಕೃಷ್ಣಬೈರೇಗೌಡ