ಚಿತ್ರಗಳು: ಬಿಎಸ್ವೈ ಸೇರಿ ಸಚಿವರುಗಳ ಮನೆಯಲ್ಲಿ ನಂದಾದೀಪ..!
ಪ್ರಧಾನಿ ನರೇಂದ್ರ ಮೋದಿ ಕರೆಗೆ ಇಡೀ ದೇಶವೇ ಸ್ಪಂದಿಸಿದ್ದು, 9 ಗಂಟೆಗೆ ಸರಿಯಾಗಿ 9 ನಿಮಿಷಗಳ ಕಾಲ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಮನೆಯ ಮುಂದೆ ದೀಪ ಬೆಳಗಿ, ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಭಾಗಿಯಾದರು. ಇನ್ನು ಕರ್ನಾಟಕ ರಾಜಕಾರಣಿಗಳು ಹೊರತಾಗಿಲ್ಲ. ಕುಟುಂಬದ ಸಮೇತರಾಗಿ ನಂದಾದೀಪ ಬೆಳಗಿಸಿದರು.
ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ, ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಂಕೇತವಾದ ದೀಪವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಕಾವೇರಿ ನಿವಾಸದಲ್ಲಿ ಕುಟುಂಬದ ಸದಸ್ಯರೊಡನೆ 9 ಗಂಟೆಗೆ ಸರಿಯಾಗಿ 9 ನಿಮಿಷಗಳ ಕಾಲ ಬೆಳಗಿಸಿದರು.
ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಅವರು ಕುಟುಂಬ ಸಮೇತರಾಗಿ ದೀಪಾ ಬೆಳಗಿದರು
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೀಪಾ ಹಚ್ಚಿದರು
ಬಹೃತ್ ಕೈಗಾರಿಕೆ ಸಿಚಿವ ಜಗದಿಶ್ ಶೆಟ್ಟರ್ ಕುಟುಂಬ
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಫ್ಯಾಮಿಲಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕುಟುಂಬ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ
ಆರೋಗ್ಯ ಸಚಿವ ಶ್ರೀರಾಮುಲು
ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡ
ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಕುಟುಂಬ ಸಮೇತರಾಗಿ
ಕರ್ನಾಟಕ ರಾಜ್ಯಪಾಲ ವಾಜುಭಾಯಿ ವಾಲಾ ಅವರು ಕ್ಯಾಂಡಲ್ ಹಚ್ಚಿದರು.