ಹಸಿವಿಂದ ಅಲೆಯುತ್ತಿದ್ದ ಸಲೀಂಗೆ ಊಟ, ಕರ್ತವ್ಯದ ಜೊತೆ ಮಾನವೀಯತೆ ಮೆರೆದ ಪೊಲೀಸರಿಗೆ ಹ್ಯಾಟ್ಸಾಫ್..!
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ನಿರ್ಗತಿಕರು ಊಟ, ನೀರಿಲ್ಲದೆ ಬಡವಾಗಿದ್ದಾರೆ. ಮೈಸೂರು ರಸ್ತೆಯಲ್ಲಿ ಊಟ ಸಿಗದೆ ಹಸಿವಿನಿಂದ ಓಡಾಡುತ್ತಿದ್ದ ಮಹಮದ್ ಸಲೀಂ ಎಂಬುವರನ್ನು ಬ್ಯಾಟರಾಯನಪುರ ಸಂಚಾರಿ ಠಾಣೆಯ ಸಿಬ್ಬಂದಿ ರಕ್ಷಿಸಿ ಆಹಾರ ನೀಡಿದ್ದಾರೆ. ಪೊಲೀಸರ ಮಾನವೀಯ ಕೆಲಸಕ್ಕೆ ಹ್ಯಾಟ್ಸಾಫ್. ಇಲ್ಲಿವೆ ಫೋಟೋಸ್
ದೇಶಾದ್ಯಂತ ಲಾಕ್ಡೌನ್ ಆಗಿರುವುದರಿಂದ ಮೈಸೂರು ರಸ್ತೆಯಲ್ಲಿ ಆಹಾರ ಸಿಗದೆ ಹಸಿವಿನಿಂದ ಅಲೆಯುತ್ತಿದ್ದ ಮಹಮದ್ ಸಲೀಂ
ಬ್ಯಾಟರಾಯನಪುರ ಸಂಚಾರಿ ಠಾಣೆಯ ಸಿಬ್ಬಂದಿ ಸಲೀಂ ಅವರನ್ನು ರಕ್ಷಿಸಿ ಹೊಸ ರೂಪ ನೀಡಿರುವುದು
ಕರ್ತವ್ಯದ ಜೊತೆ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ
Police
ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಪೊಲೀಸರು ಮಾನವೀಯೆ ನೆಲೆಗಟ್ಟಿನಲ್ಲಿ ನಿರ್ಗತಿಗರಿಗೆ, ಬಡವರಿಗೆ ಆಹಾರ ಪೋರೈಸುತ್ತಿದ್ದಾರೆ.
ಹಸಿವಿನಿಂದ ಅಲೆಯುತ್ತಿದ್ದ ವ್ಯಕ್ತಿಯ ಮುಖದಲ್ಲಿ ಹೊಸ ನಗು
ಸಲೀಂಗೆ ಮಾಸ್ಕ್ ತೊಡಿಸುತ್ತಿರುವ ಪೊಲೀಸ್ ಸಿಬ್ಬಂದಿ
ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಅವರು ಸ್ವತಃ ತಾವೇ ಸೌಟ್ ಹಿಡಿದು ಊಟ ಬಡಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಎಲ್ಲಾ ಠಾಣೆಯಿಂದಲೂ ಊಟ ವಿತರಣೆ ಮಾಡಲಾಗುತ್ತಿದ್ದು ಪೊಲೀಸರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ
ಕೊರೊನಾ ಹೊಡೆತಕ್ಕೆ ಊಟವಿಲ್ಲದೇ ಪರದಾಡುತ್ತಿರುವ ಬಡವರಿಗೆ ಊಟ ವಿತರಣೆ ಮಾಡಿ ಪೊಲೀಸರು ಮಾನವೀಯತೆ ತೋರಿಸಿದ್ದಾರೆ.