Asianet Suvarna News Asianet Suvarna News

ವಿಷ್ಣುದಾದಾ ನೆನಪಿಗಾಗಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ!

ಸೆ. 18,ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನ! ವಿಷ್ಣುದಾದಾ ನೆನಪಿಗಾಗಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ! ಉತ್ಸವ ಉದ್ಘಾಟಿಸಲಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
 

ಬೆಂಗಳೂರು(ಸೆ.16): ಸೆಪ್ಟೆಂಬರ್ 18ರಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನ. ಹೀಗಾಗಿ ವಿಷ್ಣುದಾದಾ ನೆನಪಿಗಾಗಿ ವಿಷ್ಣು ಸೇನಾ ಸಮಿತಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಹಮ್ಮಿಕೊಂಡಿದೆ. 

ಬೆಂಗಳೂರಿನ ವಿ.ವಿ.ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ ಇಂದಿನಿಂದ ಉತ್ಸವ ಆರಂಭವಾಗಲಿದ್ದು, ಟೌನ್​ಹಾಲ್​ನಿಂದ ಕುವೆಂಪು ಕಲಾಕ್ಷೇತ್ರದವರೆಗೂ ಮರೆವಣಿಗೆ ಸಾಗಲಿದೆ. 10.30ಕ್ಕೆ ಕುವೆಂಪು ಕಲಾಕ್ಷೇತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉತ್ಸವವನ್ನ ಉದ್ಘಾಟಿಸಲಿದ್ದಾರೆ. 

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ವಹಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡಪ್ರಭ ಸಂಪಾದಕರಾದ ರವಿ ಹೆಗಡೆ, ಸಾಹಿತಿ ದೊಡ್ಡ ರಂಗೇಗೌಡ ಮತ್ತು ಪತ್ರಕರ್ತ ಹಾಗೂ ಸಾಹಿತಿ ಜೋಗಿ ಅವ್ರು ಆಗಮಿಸುತ್ತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories