ಕೋಟಿಗೂ ಹೆಚ್ಚು ಸ್ಕಾಲರ್ಶಿಪ್ ಕೊಡಿಸಿದ ನಾರಾಯಣ ನಾಯಕ್
ಒಂದು ಕೋಟಿಗೂ ಅಧಿಕ ಸ್ಕಾಲರ್ಶಿಪ್ ಕೊಡಿಸಿದ ಸಿದ್ದಕಟ್ಟೆಯ ನಾರಾಯಣ ನಾಯಕ್ ನಿವೃತ್ತಿ ನಂತರವೂ 16 ವರ್ಷಗಳಿಂದ ಸ್ಕಾಲರ್ಶಿಪ್ ಸೇವೆಗೆ ನಿತ್ಯ ಓಡಾಟ
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಬಗ್ಗೆ ಅರಿವು ಕಡಿಮೆ. ಅರ್ಹತೆ, ಸೌಲಭ್ಯ ಇದ್ದರೂ ತೆಗೆಸಿಕೊಡುವವರು ವಿರಳ. ಬೇಕಾದರೆ ವಿದ್ಯಾರ್ಥಿಗಳೇ ಸ್ಕಾಲರ್ಶಿಪ್ನ ಹಿಂದೆ ಹೋಗಬೇಕು. ಇದನ್ನು ಮನಗಂಡ ನಾರಾಯಣ ನಾಯಕ್ ಅವರು ನಿವೃತ್ತಿಯ ನಂತರ ತಾವೇ ಸ್ಕಾಲರ್ಶಿಪ್ ತೆಗೆಸಿಕೊಡುವುದನ್ನು ನಿತ್ಯದ ಅಭಯಾನದಂತೆ ನಡೆಸಿಕೊಂಡು ಬಂದರು.