ಅಂಬರೀಶ್ ಆರೋಗ್ಯದಲ್ಲಿ ಏರುಪೇರು : ಕ್ರೀಡಾಂಗಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಕೆಸಿಸಿ ಪಂದ್ಯಾವಳಿ ವೀಕ್ಷಣೆ ವೇಳೆ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಸುಸ್ತಾದರು. ನಂತರ ಕ್ರೀಡಾಂಗಣದಲ್ಲೇ ಕುಳಿತು ಸುಧಾರಿಸಿಕೊಂಡರು. ಕೆಲ ಸಮಯದ ನಂತರ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ತೆರಳಿದರು. ಚಿಕಿತ್ಸೆಯ ನಂತರ ಅಂಬಿ ಆರೋಗ್ಯವಾಗಿದ್ದಾರೆ ಎಂದು ಆಪ್ತರಾದ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
- ನಟ ಅಂಬರೀಶ್ ಆರೋಗ್ಯದಲ್ಲಿ ಏರುಪೇರು, ಕೆಸಿಸಿ ಪಂದ್ಯಾವಳಿ ವೀಕ್ಷಣೆ ವೇಳೆ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಸುಸ್ತಾದ ಅಂಬಿ
- ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕುಳಿತು ಸುಧಾರಿಸಿಕೊಂಡ ಅಂಬಿ, ಅಂಬುಲೆನ್ಸ್ ನಿರಾಕರಿಸಿ ಕಾರಿನಲ್ಲಿಯೇ ಆಸ್ಪತ್ರೆಗೆ ತೆರಳಿದ ನಟ
- ಚೇತರಿಕೆಗೊಂಡಿರುವ ಬಗ್ಗೆ ಆಪ್ತರಿಂದ ಮಾಹಿತಿ