Asianet Suvarna News Asianet Suvarna News

ಕಿಸ್' ನಿಂದಲೇ 'ಕಿರಿಕ್' ಜೋಡಿ ಬ್ರೇಕ್ ಅಪ್ ಆಯ್ತಾ ? ಸತ್ಯ ಬಿಚ್ಚಿಟ್ಟ ದೇವರಕೊಂಡ

ಸಿನಿಮಾದ ಆ ದೃಶ್ಯ ಲಿಕ್ ಚಿತ್ರತಂಡಕ್ಕೂ ಸಮಸ್ಯೆಯಾಯಿತು.ಆದರೆ ಇದು ಸಿನಿಮಾಗೆ ಮಾತ್ರ  ಸೀಮಿತವಾಗಿತ್ತು. ಚಿತ್ರತಂಡದಲ್ಲಿ ನಾನೊಬ್ಬ ಕಲಾವಿದ ಅಷ್ಟೆ. ಸಿನಿಮಾದ ಕಿಸ್ ದೃಶ್ಯದಿಂದಲೇ  ರಕ್ಷಿತ್ ಶೆಟ್ಟಿ-ರಶ್ಮಿಕಾ
ಸಂಬಂಧ ಮುರಿದುಬಿದ್ದಿರುವುದಕ್ಕೆ ನನಗೂ ಕೂಡ ತುಂಬಾ ಬೇಸರವಾಗಿದೆ.

Finally Vijay Devarakonda Spoke About Rashmika - Rakshit shetty Breakup
Author
Bengaluru, First Published Oct 4, 2018, 5:57 PM IST

ಬೆಂಗಳೂರು[ಅ.04]: ಗೀತ ಗೋವಿಂದಂ ಚಿತ್ರದಲ್ಲಿನ ಕಿಸ್ ದೃಶ್ಯಗಳು ವೈರಲ್ ಆದ ಕಾರಣದಿಂದ ನಿಶ್ಚಿತಾರ್ಥವಾಗಿದ್ದ ಸ್ಯಾಂಡಲ್ ವುಡ್ ತಾರಾ ಜೋಡಿ ರಷ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ಬಾಂಧವ್ಯ ಬ್ರೆಕ್ ಅಪ್ ಆಗಿರುವ ಬಗ್ಗೆ ಸ್ವತಃ ಚಿತ್ರದ ನಾಯಕ ನಟ ವಿಜಯ್ ದೇವರಕೊಂಡ ವಾಸ್ತವಾಂಶ ಬಿಚ್ಚಿಟ್ಟಿದ್ದಾರೆ.

ತಮ್ಮ ಮುಂಬರುವ ಚಿತ್ರ 'ನೋಟಾ' ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೀತ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ರಶ್ಮಿಕಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ.  ಸಿನಿಮಾದ ಆ ದೃಶ್ಯ ಲಿಕ್ ಚಿತ್ರತಂಡಕ್ಕೂ ಸಮಸ್ಯೆಯಾಯಿತು. ಆದರೆ ಇದು ಸಿನಿಮಾಗೆ ಮಾತ್ರ ಸೀಮಿತವಾಗಿತ್ತು. ಚಿತ್ರತಂಡದಲ್ಲಿ ನಾನೊಬ್ಬ ಕಲಾವಿದ ಅಷ್ಟೆ. ಸಿನಿಮಾದ ಕಿಸ್ ದೃಶ್ಯದಿಂದಲೇ ರಕ್ಷಿತ್ ಶೆಟ್ಟಿ-ರಶ್ಮಿಕಾ ಸಂಬಂಧ ಮುರಿದುಬಿದ್ದಿರುವುದಕ್ಕೆ ನನಗೂ ಕೂಡ ತುಂಬಾ ಬೇಸರವಾಗಿದೆ.

ಈ ಸುದ್ದಿಯನ್ನು ಓದಿ: ನಿಶ್ಚಿತಾರ್ಥ ಬ್ರೇಕ್ ಅಪ್ ಅಂದಿದ್ದಕ್ಕೆ ಸಿಟ್ಟಾದ ರಶ್ಮಿಕಾ ?
 
ಆದರೆ ಅವರಿಬ್ಬರ ಖಾಸಗಿ ಜೀವನಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇತ್ತೀಚಿನ ಸಿನಿಮಾಗಳಲ್ಲಿ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುತ್ತಿರುವ ರಕ್ಷಿತ್ ಶೆಟ್ಟಿ ಅವರ ಕೆಲಸದ ಬಗ್ಗೆ ನನಗೆ ಅಪಾರ ಮೆಚ್ಚುಗೆಯಿದೆ. ಇಬ್ಬರಿಗೂ ನಾನು ತುಂಬಾ ಗೌರವ ಕೊಡುತ್ತೇನೆ. ಆದರೆ ಇವರಿಬ್ಬರ ಬಾಂಧವ್ಯ ಬ್ರೇಕಪ್ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ವಿಚಾರದ ಬಗ್ಗೆ ರಷ್ಮಿಕಾ - ರಕ್ಷಿತ್ ಒಟ್ಟಾಗಿ ಕುಳಿತು ಪರಸ್ಪರ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ' ಎಂದು ಹೇಳಿದರು.

ಈ ಸುದ್ದಿಯನ್ನು ಓದಿ: ರಶ್ಮಿಕಾ-ವಿಜಯ್ ’ಲಿಪ್’ಲಾಕ್’ ಲೀಕ್!

ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಬೇಡ 

ಮಾಧ್ಯಮಗಳು ಕೂಡ ಬೇರೆಯವರ ಖಾಸಗಿ ವಿಚಾರಗಳನ್ನು ವೈಭವಿಯುತವಾಗಿ ಬಿತ್ತರಿಸುವುದು ಅಷ್ಟು ಒಳ್ಳೆಯದಲ್ಲ. ಸದ್ಯ ಆಗಿರುವುದೇ ಸಾಕು. ಇಬ್ಬರು ತಮ್ಮಿಷ್ಟಕ್ಕೆ ತಾವು ಇರಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.

ಈ ಸುದ್ದಿಯನ್ನು ಓದಿ: ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!
  
ಬೆಂಗಳೂರಿನ ನಂಟು, ಶಿವಣ್ಣನ ಅಭಿಮಾನಿ
ತಮ್ಮ ಬೆಂಗಳೂರಿನ ನಂಟಿನ ಬಗ್ಗೆಯೂ ಮಾತನಾಡಿದ ದೇವರಕೊಂಡ, ಬೆಂಗಳೂರು ನನಗೆ ತುಂಬ ಇಷ್ಟವಾದ ನಗರ. ಇಲ್ಲಿನ ಒರಾಯನ್ ಮಾಲ್, ಜಾಲಹಳ್ಳಿ ಮುಂತಾದ ಸ್ಥಳಗಳಲ್ಲಿ ಗೆಳೆಯರ ಜೊತೆ ಸುತ್ತಾಡಿದ್ದೇನೆ. ಭವಿಷ್ಯದಲ್ಲಿ ಕನ್ನಡದಲ್ಲಿ ಅವಕಾಶ ದೊರಕಿದರೆ ನಟಿಸುತ್ತೇನೆ ಎಂದ ಅವರು, ನಾನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತೇನೆ. ಅದೇ ರೀತಿ ಕಮಲ್ ಹಾಸನ್ ಅಪ್ಪಟ ಫ್ಯಾನ್ ಕೂಡ ಹೌದು ಎಂದರು. ಇದೇ ಸಂದರ್ಭದಲ್ಲಿ ಶಿವಣ್ಣ ಕೂಡ ವಿಜಯ್ ದೇವರಕೊಂಡ ಅವರ ಗೀತಗೋವಿಂದಂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಓದಿ: ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!         
 

Follow Us:
Download App:
  • android
  • ios