Asianet Suvarna News Asianet Suvarna News

ಪ್ರೇಕ್ಷಕರನ್ನು ತುಂಬಾನೇ ಕಾಡಿಸುವ ಅಂಧರ ಬದುಕಿನ ಕಥೆ ‘ಕೃಷ್ಣ ತುಳಸಿ’

  • ಸುಕೇಶ್ ನಾಯಕ್ ನಿರ್ದೇಶನದ, ಸಂಚಾರಿ ವಿಜಯ್ ನಟಿಸಿರುವ ಚಿತ್ರ ‘ಕೃಷ್ಣ ತುಳಸಿ’
  • ಕನ್ನಡಕ್ಕೆ ಹೊಸ ಎಂಟ್ರಿ ನೀಡಿರುವ ಮೇಘಾಶ್ರೀ ಅಭಿನಯದ ಚಿತ್ರ

ಸ್ಯಾಂಡಲ್’ವುಡ್, ಬಾಲಿವುಡ್’ಗಳಲ್ಲಿ ಅಂಧರ ಬದುಕಿನ ಕುರಿತಂತೆ ಬಹಳಷ್ಟು ಸಿನಿಮಾಗಳು ಬಂದಿದೆ. ಈಗ ತೆರೆಕಂಡಿರುವ ‘ಕೃಷ್ಣ-ತುಳಸಿ’ ಅಂತಹದ್ದೇ ಒಂದು ವಿಶಿಷ್ಟವಾದ ಕಥೆ. ಸುಕೇಶ್ ನಾಯಕ್ ನಿರ್ದೇಶನದ  ಚಿತ್ರದಲ್ಲಿ ಸಂಚಾರಿ ವಿಜಯ್, ಮೇಘಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ-ನಟಿಯರು ಅಂಧರಾಗಿದ್ದು, ಕಥೆಯ ತಾಜಾತನವನ್ನು ನಿರ್ದೇಶಕರು ಬಹಳ ಮನಮೋಹಕವಾಗಿ ದೃಶ್ಯರೂಪಕ್ಕೆ ತಂದಿದ್ದಾರೆ.