'ರೇವಣ್ಣ ಕೊಳೆತ ನಿಂಬೆ ಹಣ್ಣು'
ರೇವಣ್ಣ ಕೊಳೆತ ನಿಂಬೆ ಹಣ್ಣು, ಅವರ ಬಗ್ಗೆ ಏನು ಅಂತ ಹೇಳಲಿ? ಬಿಜೆಪಿ ನಾಯಕನ
ದಾವಣಗೆರೆ[ಏ.22]: ಸಚಿವ ಎಚ್.ಡಿ. ರೇವಣ್ಣ ಕೊಳೆತ ನಿಂಬೆ ಹಣ್ಣಿನಂತೆ. ಅವರ ಬಗ್ಗೆ ಏನಂತ ಹೇಳಲಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರರನ್ನು ಈಶ್ವರಪ್ಪ ಸೋಲಿಸುತ್ತಾರೆಂಬ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಪಕ್ಷವನ್ನು ತಾಯಿ ಅನ್ನುವವರು ನಾವು. ತಾಯಿಗೆ ದ್ರೋಹ ಮಾಡುವ ಕೆಲಸವನ್ನು ನಾವು ಮಾಡುವವರಲ್ಲ. ಇನ್ನು ಪಕ್ಷವು ಸೋಲುತ್ತದೆಂಬ ಚಿಂತನೆ ಮಾಡುವುದಕ್ಕೂ ಸಾಧ್ಯವಿಲ್ಲ ಎಂದರು.
ಟಿಕೆಟ್ ಸಿಗದೆ ನಮ್ಮ ಜೊತೆ ಈಶ್ವರಪ್ಪ ಮಾತುಕತೆಗೆ ಬಂದಿದ್ದರು ಎಂಬ ರೇವಣ್ಣ ಹೇಳಿಕೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರು ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನು ಬೇರೆಯದೇ ಭಾಷೆ ಬಳಸಬೇಕಾಗುತ್ತದೆ ಎಂದರು. ಶಿವಮೊಗ್ಗದಲ್ಲಿ ರಾಘವೇಂದ್ರ ಗೆದ್ದ ನಂತರ ಇದೇ ನಿಂಬೆಹಣ್ಣಿನ ರೇವಣ್ಣ ಬಳಿ ಕರೆದೊಯ್ದು ನಿಲ್ಲಿಸುತ್ತೇವೆ. ಆಗ ರೇವಣ್ಣ ಮಾತನಾಡಲಿ ಎಂದರು.
ಟಿಕೆಟ್ ಗಾಗಿ ಈಶ್ವರಪ್ಪ ಸಂಪರ್ಕಿಸಿದ್ದರು, ಆದರೆ...!: ರೇವಣ್ಣ ಹೇಳಿದ ಸೀಕ್ರೆಟ್ ಏನು?
ಮೈತ್ರಿ ಧರ್ಮದ ಅರ್ಥವೇ ಗೊತ್ತಿಲ್ಲದ ರೇವಣ್ಣನಿಗೆ ಪಕ್ಷದ ಬಗ್ಗೆ ಏನು ಗೊತ್ತು? ಮೈತ್ರಿ ಅಂತಾ ಹೆಸರಿಗೆ ಅವಮಾನಿಸುವಂತೆ ಕಾಂಗ್ರೆಸ್-ಜೆಡಿಎಸ್ ನಾಯಕರ ವರ್ತನೆ ಇದೆ. ಆದರೆ, ಬಿಜೆಪಿಯನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಾರೆಯೇ ಹೊರತು ವ್ಯಕ್ತಿಯನ್ನು ಗೆಲ್ಲಿಸುವುದಕ್ಕಲ್ಲ. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ರೇವಣ್ಣ ಅವರನ್ನು ಸೋಲಿಸಿದರು. ಅದರ ಅನುಭವ ಅವರಿಗಿದೆ. ಈ ಅನುಭವವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಡಿಕೆಶಿ ಅಲ್ಲ, ಕೇಡಿ ಶಿವಕುಮಾರ್: ಈಶ್ವರಪ್ಪ ವ್ಯಂಗ್ಯ