Asianet Suvarna News Asianet Suvarna News

ಬಿಜೆಪಿ ಚುನಾವಣಾ ಪ್ರಚಾರ ವಾಹನದ ಮೇಲೆ ನಕ್ಸಲೀಯರ ದಾಳಿ: ಶಾಸಕ ಸೇರಿ ಆರು ಜನರ ಹತ್ಯೆ!

ಛತ್ತೀಸ್‌ಗಡ್‌ದ ದಂತೇವಾಡಾದಲ್ಲಿ ನಕ್ಸಲೀಯರ ಅಟ್ಟಹಾಸ| ಬಿಜೆಪಿ ಚುನಾವಣಾ ಪ್ರಚಾರ ವಾಹನದ ಮೇಲೆ ದಾಳಿ| ಐವರು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ನಕ್ಸಲೀಯರು| ನಕ್ಸಲೀಯರಿಂದ ಶಾಸಕ ಭೀಮಾ ಮಂಡಾವಿ ಹತ್ಯೆ|  

5 Killed In Maoist Attack On BJP Convoy In Dantewada
Author
Bengaluru, First Published Apr 9, 2019, 6:35 PM IST

ದಂತೇವಾಡಾ(ಏ.09): ಬಿಜೆಪಿ ಪ್ರಚಾರ ವಾಹನದ ಮೇಲೆ ದಾಳಿ ಮಾಡಿರುವ ನಕ್ಸಲೀಯರು 5 ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಘಟನೆ ಛತ್ತೀಸ್‌ಗಡ್‌ನ ದಂತೇವಾಡಾದಲ್ಲಿ ನಡೆದಿದೆ.

ಬಿಜೆಪಿ ಪ್ರಚಾರ ವಾಹನದಲ್ಲಿದ್ದ ಶಾಸಕ ಭೀಮಾ ಮಂಡಾವಿ ಅವರನ್ನು ಕೂಡ ಹತ್ಯೆಗೈದಿರುವ ನಕ್ಸಲೀಯರು, ಮೊದಲ ಹಂತದ ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ಹಿಂಸೆಯ ಮುನ್ಸೂಚನೆ ನೀಡಿದ್ದಾರೆ.

ಛತ್ತೀಸ್‌ಗಡ್‌ದಲ್ಲಿ ಒಟ್ಟು ಮೂರು ಹಂತದ ಚುನಾವಣೆ ನಡೆಯಲಿದ್ದು, ಏ.11, ಏ.18, ಏ.23 ರಂದು ಮತದಾನ ನಡೆಯಲಿದೆ.
 

Follow Us:
Download App:
  • android
  • ios