ಪೂಜೆಗೆ ಹೋದಾಗ ಬಾಲಕಿ ಮೇಲೆ ರೇಪ್: ಮರುದಿನ ನಡೆದಿದ್ದು ದುರಂತ...!
ಅಪ್ರಾಪ್ತೆ ಬಾಲಕಿ ಹೊಲಕ್ಕೆ ಪೂಜೆ ಮಾಡಲು ಹೋಗಿದ್ದ ವೇಳೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಆದ್ರೆ, ಮರುದಿನ ಆಗಿದ್ದ ದುರಂತ.
ಧಾರವಾಡ,(ಆ.02): ದೇವರ ಪೂಜೆಗೆ ಹೋದಾಗ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆ ಗುರುವಾರ ಹೊಲದಲ್ಲಿನ ದೇವರಿಗೆ ಪೂಜೆ ಮಾಡಲು ತೆರಳಿದ್ದಳು. ಈ ವೇಳೆ ಗ್ರಾಮದ ಯುವಕ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಮರುದಿನ ಬಾಲಕಿ ತಾಯಿ ಬಳಿ ಹೊಲದಲ್ಲಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಿದ ಬಳಿಕ ಮನನೊಂದು ವಿಷ ಸೇವಿಸಿದ್ದಾಳೆ.
ವಿಧವೆ ಅತ್ತಿಗೆಯನ್ನೇ ರೇಪ್ ಮಾಡಿದ ಮೈದುನ!
ಕೂಡಲೇ ಕುಟುಂಬಸ್ಥರು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಭಾನುವಾರ) ಬಾಲಕಿಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಬಾಲಕಿಯ ಪೋಷಕರು ಗರಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.