Asianet Suvarna News Asianet Suvarna News

ದಾವಣಗೆರೆ; 'ಕುಡಿಯಲು ಹಣ ಕೊಡಲ್ಲ, ಬುದ್ಧಿ ಹೇಳ್ತಿಯಾ' ಪಾಪಿಯಿಂದ ಪತ್ನಿ ಹತ್ಯೆ!

* ಗಂಡನಿಗೆ ಮದ್ಯಪಾನ ಮಾಡಬೇಡ ಎಂದು ಹೇಳಿದ್ದಕ್ಕೆ ಪತ್ನಿಯ ಕೊಲೆ

* ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಘಟನೆ 

* ಪತ್ನಿ ಶಿಲ್ಪಾ (40) ಳನ್ನು ಕೊಲೆಮಾಡಿದ ಪತಿ ಗಿರೀಶ್ 

* ಎರಡು ವರ್ಷಗಳಿಂದ ಸೊರಟೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ  ದಂಪತಿ

Man kills wife for refusing him money to buy alcohol Davanagere mah
Author
Bengaluru, First Published Aug 31, 2021, 11:04 PM IST

ದಾವಣಗೆರೆ(ಆ. 31)  ಮದ್ಯಪಾನ ಮಾಡಬೇಡ ಎಂದು ಹೇಳಿದ್ದಕ್ಕೆ ಪತ್ನಿಯ ಕೊಲೆ ಮಾಡಿದ್ದಾನೆ ಈ ಪಾಪಿ.  ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಪತ್ನಿ ಶಿಲ್ಪಾ (40) ಳನ್ನು ಪತಿ ಗಿರೀಶ್  ಹತ್ಯೆ ಮಾಡಿದ್ದಾನೆ.  ಎರಡು ವರ್ಷಗಳಿಂದ ಸೊರಟೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಪ್ರತಿನಿತ್ಯ ಕುಡಿದು ಬರುತ್ತಿದ್ದ ಗಂಡನಿಗೆ  ಪತ್ನಿ ಬುದ್ಧಿ ಹೇಳಿದ್ದಳು.

ಮಂಗಳೂರು;  ಹಿಂದು ದೇವರು ಮತ್ತು ಓಂ ಸ್ಟಿಕರ್ ತೆಗೆಯಲು ಹೇಳಿದ ಪೊಲೀಸ್ ವಿರುದ್ಧ ಆಕ್ರೋಶ

ಕುಡಿಯಲು ಹಣ ಕೊಡುತ್ತಿಲ್ಲ, ಬುದ್ದಿಮಾತು ಹೇಳತಿಯಾ?   ಎಂದು ಕೊಲೆ  ಮಾಡಿದ್ದಾನೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಗಿರೀಶ್  ಬಂಧನವಾಗಿದೆ. ಕೊಲೆಯಾದ 8 ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸಿಪಿಐ ದೇವರಾಜ್ ನೇತೃತ್ವದ ತಂಡ ಕಾರ್ಯಾಚೆಣೆ ನಡೆಸಿದೆ.

Follow Us:
Download App:
  • android
  • ios