userpic
user icon
0 Min read

ಹಲ್ಲೆಯನ್ನು ಗ್ಯಾಂಗ್‌ ರೇ*ಎಂದು ಕಥೆ ಕಟ್ಟಿದ ಮಹಿಳೆ: ಕೇಸ್‌ ದಾಖಲು!

haveri Woman who lies assault as gang rap Case booked

Synopsis

ಬ್ಯಾಡಗಿಯಲ್ಲಿ ಮಹಿಳೆಯೊಬ್ಬರು ಗ್ಯಾಂಗ್ ರೇ* ಆರೋಪ ಮಾಡಿದ್ದರು. ಆದರೆ ಬಳಿಕ ಪೊಲೀಸರ ವಿಚಾರಣೆಯಲ್ಲಿ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಹಣಕಾಸಿನ ವಿಚಾರಕ್ಕೆ ಜಗಳವಾಗಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಬ್ಯಾಡಗಿ(ಹಾವೇರಿ): ಐದು ಜನರಿಂದ ಗ್ಯಾಂಗ್ ರೇಪ್ ನಡೆದಿರುವುದಾಗಿ ಮಹಿಳೆಯೊಬ್ಬಳು ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಪೊಲೀಸರ ಬಳಿ ತನ್ನ ಮೇಲೆ ದೌರ್ಜನ್ಯ ನಡೆದಿಲ್ಲ, ಇಬ್ಬರು ಮಹಿಳೆಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಪ್ಪೊಪ್ಪಿಕೊಂಡ ಘಟನೆ ಮಂಗಳವಾರ ಬ್ಯಾಡಗಿಯಲ್ಲಿ ನಡೆದಿದೆ. 

ಮಂಗಳವಾರ ರಾತ್ರಿ ಯಾರೋ ಕೆಲವರು ತನ್ನ ಬೆನ್ನಿಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ಕೊಟ್ಟು ಅಪಹರಿಸಿ ಸಾಮೂಹಿಕ ಬಲತ್ಕಾರ ನಡೆಸಿ ದೈಹಿಕವಾಗಿ ಹಲ್ಲೆ ಮಾಡಿದ್ದರು, ನಾನು ಅವರಿಂದ ತಪ್ಪಿಸಿಕೊಂಡು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೆ ಎಂದು ಮಹಿಳೆ ಮಾಧ್ಯಮಗಳ ಬಳಿ ಹೇಳಿಕೆ ನೀಡಿದ್ದಳು. ಆದರೆ ಮಹಿಳೆಯ ಹೇಳಿಕೆಗಳು ಪೊಲೀಸರಲ್ಲಿ ಹಲವು ಅನುಮಾನಗಳನ್ನು ಮೂಡಿಸಿತು. ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಹಣಕಾಸಿನ ವಿಚಾರಕ್ಕೆ ಜಗಳವಾಗಿದ್ದು, ಇಬ್ಬರು ಮಹಿಳೆಯರು ನನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಮಹಿಳೆ ಬಾಯ್ಬಿಟ್ಟಿದ್ದಾಳೆ. 

ಇದನ್ನೂ ಓದಿ: 'ಮಗಳ ತಂಟೆಗೆ ಹೋಗಬೇಡ' ಎಂದ ತಂದೆಯ ಕತೆ ಮುಗಿಸಿದ ಪಾತಕಿ!

ಡಿವೈಡರ್‌ಗೆ ಬೈಕ್ ಡಿಕ್ಕಿ, ಯುವಕ ಸಾವು

ಮಂಗಳೂರು: ಪಣಂಬೂರಿನಲ್ಲಿ ಮಂಗಳವಾರ ತಡರಾತ್ರಿ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿಯಾಗಿ ಬೆಂಗಳೂರು ಮೂಲದ ಯುವಕ ಮೃತಪಟ್ಟಿದ್ದಾರೆ. ಶ್ರೀಕಾಂತ್‌ (24) ಮೃತರು.

ಶ್ರೀಕಾಂತ್‌ ಅವರು ಪಣಂಬೂರು ಬೀಚ್‌ಗೆ ತೆರಳಿ ಹಿಂತಿರುಗುತ್ತಿದ್ದಾಗ ರಾತ್ರಿ 12.15ರ ವೇಳೆಗೆ ಪಣಂಬೂರು ಸರ್ಕಲ್‌ನಲ್ಲಿ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿಯಾಗಿದೆ. ಸ್ಥಳದಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು.

ಬೆಂಗಳೂರಿನ ಶ್ರೀಕಾಂತ್‌ ಒಂದು ತಿಂಗಳ ಹಿಂದೆ ಮಂಗಳೂರಿನಲ್ಲಿ ವಾಸವಿರುವ ತನ್ನ ಸಹೋದರಿ ಮನೆಗೆ ಬಂದು ನೆಲೆಸಿದ್ದರು. ಉದ್ಯೋಗ ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಸುರತ್ಕಲ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos