Asianet Suvarna News Asianet Suvarna News

ಧರ್ಮಸ್ಥಳ, ಸುಬ್ರಹ್ಮಣ್ಯ ಪ್ರವಾಸಿಗರ ಚಿನ್ನ ಕದ್ದು ಬೆಂಗಳೂರಲ್ಲಿ ಎಂಜಾಯ್ ಮಾಡ್ತಿದ್ಲು!

* ಆ ಕಿಲಾಡಿ ಲೇಡಿಗೆ ಕುಕ್ಕೆ ಸುಬ್ರಮಣ್ಯ  ಮತ್ತು ಧರ್ಮಸ್ಥಳದ ಪ್ರವಾಸಿಗರೇ ಟಾರ್ಗೆಟ್..

* ಪ್ರವಾಸಿಗರ ಸೋಗಿನಲ್ಲಿ ಚಿನ್ನಾಭರಣ ಕದಿಯೋದೆ ಆಕೆ ನಿತ್ಯ ಕಾಯಕ

* ಯಶವಂತಪುರ ಪೊಲೀಸರಿಂದ ಆರೋಪಿತೆ ಮಮತಾ(38) ಬಂಧನ

* ಈಕೆಯ ಬಾಯ್ ಫ್ರೆಂಡ್ ಕಂ ಸಹಚರ ಎಸ್ಕೇಪ್

Andhra Woman Arrested For Snatching Gold From Dharmasthala and kukke subramanya tourists mah
Author
Bengaluru, First Published Aug 31, 2021, 4:10 PM IST

ಬೆಂಗಳೂರು(ಆ. 31)  ಈ ಕಿಲಾಡಿ ಲೇಡಿ ಎಂತೆಂಥ ಕಳ್ಳತನ ಮಾಡಿದ್ದಳು ಅಬ್ಬಬ್ಬಾ.. ಕಿಲಾಡಿ ಲೇಡಿಗೆ ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳದ ಪ್ರವಾಸಿಗರೇ ಟಾರ್ಗೆಟ್. ಪ್ರವಾಸಿಗರ ಸೋಗಿನಲ್ಲಿ ಚಿನ್ನಾಭರಣ ಕದಿಯೋದೆ ಆಕೆ ನಿತ್ಯ ಕಾಯಕ!

ಯಶವಂತಪುರ ಪೊಲೀಸರಿಂದ ಆರೋಪಿತೆ ಮಮತಾ (38) ಬಂಧನವಾಗಿದೆ. ಈಕೆಯ ಬಾಯ್ ಫ್ರೆಂಡ್ ಕಂ ಸಹಚರ ಎಸ್ಕೇಪ್ ಆಗಿದ್ದಾನೆ. ಬಂಧಿತ ಮಮತಾಳಿಂದ 20.2 ಲಕ್ಷ ಮೌಲ್ಯದ 439 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 

ಉಡುಪಿ; ನಿಶ್ಚಿತಾರ್ಥವಾದ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ

ಕಿಲಾಡಿ ಮಮತಾ ಮೂಲತಃ‌ ಆಂಧ್ರ ಪ್ರದೇಶದಳು 2 ವರ್ಷದ ಹಿಂದೆ ಈಕೆಯ ಗಂಡ ಸಾವನ್ನಪ್ಪಿದ್ದ ಬಳಿಕ ಮತ್ತೊಬ್ಬ ವ್ಯಕ್ತಿಯ ಜೊತೆ ಸಲುಗೆ ಬೆಳೆಸಿಕೊಂಡು ಮದುವೆಯಾಗಲು ನಿರ್ಧಾರ ಮಾಡಿದ್ದಳು.

ಈಕೆ, ತನ್ನ ಸಹಚರನೊಂದಿಗೆ ಪ್ರವಾಸಿಗರ ಸೋಗಿನಲ್ಲಿ ಕುಕ್ಕೆ ಮತ್ತು ಧರ್ಮಸ್ಥಳಕ್ಕೆ ಸಾಮಾನ್ಯರಂತೆ ಹೋಗುತ್ತಿದ್ದಳು. ಅಲ್ಲಿ ಶ್ರೀಮಂತರನ್ನ ಗುರುತು ಮಾಡಿ ಹಿಂಬಾಲಿಸುತ್ತಿದ್ದಳು. ಅಲ್ಲಿ ದೇವರ ದರ್ಶನದ ವೇಳೆ ಜನರ ಬ್ಯಾಗ್ ಗಳಿಗೆ ಹೊಂಚು ಹಾಕುತ್ತಿದ್ದ ಮಮತಾ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಳು.

ಅಲ್ಲಿಂದ ಬೆಂಗಳೂರಿಗೆ ಬಂದು ಚಿನ್ನ ಅಡವಿಟ್ಟು ಸಾಲ ಪಡೆದುಕೊಳ್ಳುತ್ತಿದ್ದಳು. ಸದ್ಯ ತನಿಖೆ ವೇಳೆ ಕುಕ್ಕೆ ಸುಬ್ರಹ್ಮಣ್ಯ ಠಾಣೆಯ 1 ಕೇಸ್ ಪತ್ತೆಯಾಗಿದೆ. ಯಶವಂತಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. 

Andhra Woman Arrested For Snatching Gold From Dharmasthala and kukke subramanya tourists mah

 

 

Follow Us:
Download App:
  • android
  • ios