Asianet Suvarna News Asianet Suvarna News

ಶೀಲ ಶಂಕಿಸಿದ ಪ್ರಿಯತಮ: ಸುಳ್ಳೆಂದು ಪ್ರೂವ್ ಮಾಡಲು ಹೋದ ಪ್ರಿಯತಮೆ...!

ಯುವಕನೊಬ್ಬ ತನ್ನ ಪ್ರೇಯಸಿಯ ಶೀಲ ಶಂಕಿಸಿದ್ದಾನೆ. ಇದು ಸುಳ್ಳು ಎಂದು ಪ್ರೂವ್ ಮಾಡಲು ಲವರ್‌ ಹಾಕಿದ್ದ ಸವಾಲನ್ನು ನಯವಾಗಿ ಸ್ವೀಕರಿಸಿದ ಪ್ರಿಯತಮೆ ವಿಷ ಕುಡಿದು ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ. 

A girl commits suicide By Consuming Poison In gouribidanur
Author
Bengaluru, First Published Jan 13, 2020, 7:26 PM IST

ಚಿಕ್ಕಬಳ್ಳಾಪುರ, (ಜ.13): ಪ್ರೀತಿಸಿದ ಹುಡುಗಿಯ ಶೀಲದ ಬಗ್ಗೆ ಶಂಕೆಗೊಂಡ ಪ್ರಿಯತಮ ಆಕೆಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ಕಮಲಾಪುರದಲ್ಲಿ ನಡೆದಿದೆ.

ವೆಂಕಟೇಶ್​ ವಿಷ ಕುಡಿಸಿದ ಯುವಕ. ವಿಷ ಸೇವಿಸಿದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆ ಜ.8ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವಿವಾಹಿತೆ ಗುಪ್ತಾಂಗಕ್ಕೆ ‘ಲವರ್‌’ ಆ್ಯಸಿಡ್‌ ದಾಳಿ!

ಘಟನೆ ಹಿನ್ನೆಲೆ:
ಗೌರಿಬಿದನೂರು ತಾಲೂಕಿನ ವೆಂಕಟೇಶ್​,  ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಸ್ವಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ವೆಂಕಟೇಶ್​ ಇತ್ತೀಚೆಗೆ ಯುವತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೆ ವಿಚಾರವಾಗಿ ಜ.6ರಂದು ಇಬ್ಬರ ನಡುವೆ ಜಗಳ ನಡೆದಿತ್ತು. 

 ತಪ್ಪು ಮಾಡಿಲ್ಲ ಅಂದರೆ ವಿಷ ಕುಡಿದು ಸಾಬೀತುಪಡಿಸುವಂತೆ ವೆಂಕಟೇಶ್​ ಯುವತಿಗೆ ಸವಾಲು ಹಾಕಿದ್ದ. ಪ್ರಿಯತಮನ ಮಾತಿಗೆ ಬದ್ಧಳಾದ ಯುವತಿ ವಿಷ ಕುಡಿದು ನೇರವಾಗಿ ಮನೆಗೆ ತೆರಳಿದ್ದಾಳೆ. 

ಬಳಿಕ ಮನೆಯಲ್ಲಿ ಯುವತಿ ಕುಸಿದು ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಜ.8ರಂದು ಮೃತಪಟ್ಟಿದ್ದಾಳೆ. 

ಪಾಲಕರಿಗೆ ವೆಂಕಟೇಶ್​ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು.ಕೇಸು ದಾಖಲಿಸಿದ ಪೊಲೀಸರು ವೆಂಕಟೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. 

Follow Us:
Download App:
  • android
  • ios