Asianet Suvarna News Asianet Suvarna News

Suicide Cases: ಲವ್‌ ಬ್ರೇಕಪ್‌ಗೆ ನೊಂದು ಯುವತಿ ಆತ್ಮಹತ್ಯೆ

*   ಬಾಗ​ಲ​ಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿ​ಯಲ್ಲಿ ನಡೆ​ದ ಘಟನೆ
*   ಪ್ರಿಯ​ಕರ ನಾಗ​ರಾ​ಜು ಬಂಧಿನ
*   ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗ​ರಾಜು ಮತ್ತು ಚಂದನಾ 
 

23 Year Old Girl Committed Suicide Due to Love Breakup in Bengaluru grg
Author
Bengaluru, First Published Jan 24, 2022, 5:45 AM IST

ಬೆಂಗಳೂರು(ಜ.24):  ಪ್ರೀತಿಯಲ್ಲಿ ಬಿರುಕು(Love Breakup) ಮೂಡಿದ್ದರಿಂದ ಮನನೊಂದು ಯುವತಿಯೊಬ್ಬಳು ನೇಣು ಬಿಗಿ​ದು​ಕೊಂಡು ಆತ್ಮ​ಹತ್ಯೆ(Suicide) ಮಾಡಿ​ಕೊಂಡಿ​ರುವ ಘಟನೆ ಬಾಗ​ಲ​ಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿ​ಯಲ್ಲಿ ನಡೆ​ದಿದೆ. ಮಂಜು​ನಾ​ಥ​ನ​ಗರ ನಿವಾಸಿ ಚಂದ​ನಾ​(23) ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಸಂಬಂಧ ಆತ್ಮ​ಹ​ತ್ಯೆಗೆ ಪ್ರಚೋ​ದನೆ ನೀಡಿದ ಆರೋ​ಪದಡಿ ಆಕೆಯ ಪ್ರಿಯ​ಕರ ನಾಗ​ರಾ​ಜು​(23) ಎಂಬಾ​ತ​ನನ್ನು ಬಂಧಿ​ಸ​ಲಾ​ಗಿದೆ(Arrest) ಎಂದು ಪೊಲೀ​ಸರು(Police) ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗ​ರಾಜು ಮತ್ತು ಚಂದನಾ ಬಾಗ​ಲ​ಗುಂಟೆಯ ಪ್ರಾಥ​ಮಿಕ ಆರೋಗ್ಯ ಕೇಂದ್ರ​ದ​ಲ್ಲಿ ಸ್ವಾಬ್‌ ಸಂಗ್ರಹ ಮಾಡುವ ಕೆಲಸ ಮಾಡು​ತ್ತಿ​ದ್ದರು. ಈ ಮಧ್ಯೆ ಕೆಲ ತಿಂಗಳ ಹಿಂದೆ ಪ್ರೀತಿಯಲ್ಲಿ(Love) ಬಿರುಕು ಉಂಟಾ​ಗಿದ್ದು, ನಾಗರಾಜನು ಚಂದನಾಳೊಂದಿಗೆ ಮಾತು ಬಿಟ್ಟಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಚಂದ​ನಾ ಶನಿ​ವಾರ ಮನೆ​ಯಲ್ಲೇ ಆತ್ಮ​ಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಚಂದನಾ ಪೋಷಕರು ನೀಡಿದ ದೂರಿನ ಮೇರೆಗೆ ನಾಗ​ರಾ​ಜು​ನ​ನ್ನು​ಬಂಧಿಸಿ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀ​ಸರು ತಿಳಿಸಿದ್ದಾರೆ. ಬಾಗ​ಲ​ಗುಂಟೆ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.

Mandya: ತಂದೆ-ಮಗನ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್, ಪತ್ನಿಯ ಅಕ್ರಮ ಸಂಬಂಧ ಕಾರಣ.?

ಸಾರಿಗೆ ಕಚೇರಿಯಲ್ಲೆ ಸಿಬ್ಬಂದಿ ಆತ್ಮಹತ್ಯೆ

ಹು​ಬ್ಬ​ಳ್ಳಿ(Hubballi):  ಸಾ​ರಿಗೆ ಸಂಸ್ಥೆಯ ಮ​ಹಿಳಾ ಸಿ​ಬ್ಬಂದಿ ಸು​ಜಾತಾ ವೀ​ರಪ್ಪ ಅಂಚೇ​ರ​ (42) ಡೆತ್‌ನೋಟ್‌(Deathnote) ಬ​ರೆ​ದಿಟ್ಟು ಗೋಕುಲ ರಸ್ತೆ ಕ​ಚೇರಿ ಆ​ವ​ರ​ಣ​ದ​ ಕ​ಟ್ಟ​ಡ​ದ​ಲ್ಲಿಯೇ ನೇಣು ಬೀ​ಗಿ​ದು​ಕೊಂಡು ಆ​ತ್ಮ​ಹತ್ಯೆ ಮಾ​ಡಿ​ಕೊಂಡಿ​ದ್ದಾರೆ.

ಅವರು ಸಾ​ರಿಗೆ ಸಂಸ್ಥೆ​ಯಲ್ಲಿ ಜ್ಯೂ​ನಿ​ಯರ್‌ ಅ​ಸಿ​ಸ್ಟಂಟ್‌ ಆಗಿ ಕಾ​ರ್ಯ​ ನಿ​ರ್ವ​ಹಿ​ಸು​ತ್ತಿದ್ದರು. ಎಂದಿ​ನಂತೆ ಭಾ​ನು​ವಾರ ಗೋ​ಕುಲ್‌ ರ​ಸ್ತೆ​ಯ​ಲ್ಲಿ​ರುವ ಕ​ಚೇ​ರಿಗೆ ಹಾ​ಜ​ರಾ​ಗಿ​ದ್ದರು. ಶೌ​ಚಾ​ಲ​ಯಕ್ಕೆ ಹೋಗಿ ಬ​ರು​ವು​ದಾಗಿ ಹೇಳಿ ಕೆಲ ಗಂಟೆ​ಗ​ಳಾ​ದರೂ ಕ​ರ್ತ​ವ್ಯಕ್ಕೆ ಹಾ​ಜ​ರಾ​ಗಲಿಲ್ಲ. ಈ ಹಿ​ನ್ನೆ​ಲೆ​ಯಲ್ಲಿ ಆ​ವ​ರ​ಣ​ದಲ್ಲಿ ತ​ಡ​ಕಾ​ಡಿ​ದ್ದಾರೆ. ಆ​ದರೆ, ಅದಾಗಲೇ ಮ​ಹಿಳೆ(Woman) ಕ​ಟ್ಟಡ ಕೋ​ಣೆ​ಯೊಂದ​ರಲ್ಲಿ ಆ​ತ್ಮ​ಹತ್ಯೆ ಮಾ​ಡಿ​ಕೊಂಡಿ​ದ್ದರು. ತ​ಕ್ಷ​ಣವೇ ಪತಿ ವೀ​ರಪ್ಪ ಹಾಗೂ ಪೊ​ಲೀ​ಸ​ರಿಗೆ ಸಾ​ರಿಗೆ ಸಂಸ್ಥೆ ಸಿ​ಬ್ಬಂದಿ ಮಾ​ಹಿತಿ ನೀ​ಡಿ​ದ್ದರು. ಬ​ಳಿಕ ಪೊ​ಲೀ​ಸರು ಘ​ಟನಾ ಸ್ಥಳ ಪ​ರಿ​ಶೀ​ಲನೆ ವೇ​ಳೆ​ಯಲ್ಲಿ ಮ​ಹಿಳೆ ಬಳಿ ಡೆ​ತ್‌​ನೋಟ್‌ ದೊ​ರೆ​ತಿದ್ದು, ನನ್ನ ಸಾ​ವಿಗೆ ನಾನೇ ಕಾ​ರಣ ಎಂದು ಬ​ರೆ​ದಿ​ದ್ದಾರೆ ಎಂದು ಪೊ​ಲೀ​ಸರು ಮಾ​ಹಿತಿ ನೀ​ಡಿ​ದ್ದಾರೆ. ಈ ಬಗ್ಗೆ ಗೋ​ಕು​ಲ ರಸ್ತೆ ಪೊ​ಲೀಸ್‌ ಠಾ​ಣೆ​ಯಲ್ಲಿ ಪ್ರ​ಕ​ರಣ ದಾ​ಖ​ಲಾ​ಗಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು:  ಎಸ್‌ಎಸ್‌ಎಲ್‌ಸಿ ವಿದ್ಯಾ​ರ್ಥಿ​ನಿ​ಯೊ​ಬ್ಬರು(SSL Student) ನೇಣು ಬಿಗಿ​ದು​ಕೊಂಡು ಆತ್ಮ​ಹತ್ಯೆ ಮಾಡಿ​ಕೊಂಡಿ​ರುವ ಘಟನೆ ಶನಿವಾರ ರಾತ್ರಿ ಕೆ.ಪಿ.​ಅ​ಗ್ರ​ಹಾರ ಠಾಣೆ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ.

ಚೆಲು​ವ​ಪ್ಪ​ ಗಾ​ರ್ಡನ್‌ ನಿವಾಸಿ ರಾಜು ಮತ್ತು ಜಯಂತಿ ದಂಪತಿ ದ್ವಿತೀಯ ಪುತ್ರಿ ಪೂಜಾ​(16) ಮೃತ ವಿದ್ಯಾ​ರ್ಥಿನಿ. ಘಟ​ನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳ​ದಲ್ಲಿ ಯಾವುದೇ ಮರಣಪತ್ರ ಪತ್ತೆ​ಯಾ​ಗಿಲ್ಲ. ತನಿಖೆ ಮುಂದುವರಿದೆ ಎಂದು ಪೊಲೀ​ಸರು ತಿಳಿಸಿದ್ದಾರೆ

ರಾಜು ಭದ್ರತಾ ಸಿಬ್ಬಂದಿಯಾಗಿದ್ದು, ಜಯಂತಿ ಮನೆ​ಯ​ಲ್ಲಿಯೇ ಟೈಲ​ರಿಂಗ್‌ ವೃತ್ತಿ ಮಾಡುತ್ತಾರೆ. ದಂಪ​ತಿಗೆ ಮೂವರು ಹೆಣ್ಣು ಮಕ್ಕಳಿದ್ದು, ದ್ವಿತೀಯ ಪುತ್ರಿ ಪೂಜಾ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡು​ತ್ತಿ​ದ್ದಳು. ರಾಜು ದಂಪತಿ ಶನಿ​ವಾರ ರಾತ್ರಿ 9 ಗಂಟೆ ಸುಮಾ​ರಿ​ಗೆ ಮನೆ ಸಮೀ​ಪದ ಸಂಬಂಧಿ​ಕರ ಮನೆಗೆ ಹೋಗಿ​ದ್ದು, 10 ಗಂಟೆಗೆ ವಾಪಾಸಾಗಿದ್ದಾರೆ. ಈ ವೇಳೆ ಮನೆಯ ಕೋಣೆ​ಯಲ್ಲಿ ಪೂಜಾ ನೇಣು ಬಿಗಿ​ದು​ಕೊಂಡು ಆತ್ಮ​ಹತ್ಯೆ ಮಾಡಿ​ಕೊಂಡಿ​ರುವುದು ಬೆಳಕಿಗೆ ಬಂದಿದೆ. ಯಾವ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪೋಷಕರಿಗೂ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆ.ಪಿ.ಅ​ಗ್ರ​ಹಾರ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.

ವರ​ದ​ಕ್ಷಿಣೆ ಕಿರು​ಕು​ಳ: ದುಬೈನಿಂದ ಗೃಹಿಣಿ ಆತ್ಮ​ಹ​ತ್ಯೆ

ಬೆಂಗಳೂರು:  ವರ​ದ​ಕ್ಷಿಣೆ ಕಿರು​ಕು​ಳ ತಳಲಾರದೆ ಮಹಿ​ಳೆ​ಯೊ​ಬ್ಬರು ಆತ್ಮ​ಹತ್ಯೆ ಮಾಡಿ​ಕೊಂಡಿ​ರುವ ಘಟನೆ ರಾಜಾ​ಜಿ​ನ​ಗರ ಪೊಲೀಸ್‌ ಠಾಣೆ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ. ತುಮ​ಕೂರು ಮೂಲದ ನುಮ್ರಾ​ಸ್‌​(31) ಆತ್ಮ​ಹತ್ಯೆ ಮಾಡಿಕೊಂಡವರು. ಪೋಷಕರು ನೀಡಿದ ದೂರಿನ ಮೇರೆಗೆ ಆಕೆಯ ಪತಿ ಶಹ​ನಾ​ಬ್‌​ಖಾನ್‌ ಎಂಬಾ​ತ​ನನ್ನು ಪೊಲೀಸರು ಬಂಧಿಸಿದ್ದಾರೆ.

Suicide Cases: ಸಾಲ ಕೊಟ್ಟವರ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ

ಆರು ವರ್ಷ​ಗಳ ಹಿಂದೆ ಶಹ​ನಾ​ಬ್‌​ಖಾನ್‌ ಮತ್ತು ನುಮ್ರಾಸ್‌ ಮದು​ವೆ​ಯಾ​ಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಸೌದಿಯಲ್ಲಿ ಕೆಲ ಕಾಲ ನೆಲೆಸಿದ್ದು, ಎರಡು ತಿಂಗಳ ಹಿಂದೆಯಷ್ಟೇ ಭಾರತಕ್ಕೆ(India) ವಾಪಸಾಗಿದ್ದರು. ಕುಟುಂಬ ಸಹಿತ ತುಮಕೂರಿನಲ್ಲಿ ನೆಲೆಸಿದ್ದರು. ಶುಕ್ರವಾರ ಸಂಜೆ ದಂಪತಿ ರಾಜಾಜಿನಗರ ಬಾಷ್ಯಂ ವೃತ್ತದಲ್ಲಿರುವ ಶಹನಾಬ್‌ ಖಾನ್‌ ಸಹೋದರಿಯ ಮನೆಗೆ ಬಂದಿದ್ದರು.

ಯಾವುದೋ ವಿಚಾರ ಸಂಬಂಧ ಶನಿ​ವಾರ ದಂಪತಿ ನಡುವೆ ಗಲಾ​ಟೆ​ಯಾ​ಗಿ​ದೆ. ರಾತ್ರಿ 9 ಗಂಟೆ ಸುಮಾ​ರಿಗೆ ಆಕೆ ಕೋಣೆ​ಯ ಬಾಗಿಲು ಹಾಕಿ​ಕೊಂಡು ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾರೆ. ಭಾನು​ವಾರ ಬೆಳ​ಗ್ಗೆ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಆಕೆಯ ಪೋಷ​ಕರು ವರ​ದ​ಕ್ಷಿಣೆ ಕಿರು​ಕುಳವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಆರೋ​ಪಿಸಿ ಅಳಿಯನ ವಿರುದ್ಧ ದೂರು ನೀಡಿ​ದ್ದಾರೆ. ಇದರ ಆಧಾರದ ಮೇಲೆ ಈ ಹಿನ್ನೆ​ಲೆ​ಯಲ್ಲಿ ಶಹನಾಬ್‌ ಖಾನ್‌ನನ್ನು ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ತಿಳಿಸಿದ್ದಾರೆ. ಈ ಸಂಬಂಧ ರಾಜಾ​ಜಿ​ನ​ಗರ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.
 

Follow Us:
Download App:
  • android
  • ios