ಅಪ್ರಾಪ್ತೆ ಮೇಲೆ ರೈಲು ನಿಲ್ದಾಣದಲ್ಲಿ ಅತ್ಯಾಚಾರ, ಮುಂಬೈನಲ್ಲಿ ಮತ್ತೊಂದು ಕರಾಳ ಘಟನೆ!
- ಮುಂಬೈನ ನಿರ್ಭಯಾ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ
- ಅಪ್ರಾಪ್ತೆ ಎಳೆದೊಯ್ದು ಅತ್ಯಾಚಾರ, ಆರೋಪಿ ಅರೆಸ್ಟ್
- ರಾತ್ರಿಯಿಡಿ ಕಾಮುಕನ ಬಂಧನದಲ್ಲಿದ್ದ ಅಪ್ರಾಪ್ತೆ
ಮುಂಬೈ(ಸೆ.12): ವಾಣಿಜ್ಯ ನಗರಿ ಮುಂಬೈನಲ್ಲಿ ಭೀಕರ ಘಟನೆಗಳು ಸಂಭವಿಸುತ್ತಲೇ ಇದೆ. 34ರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕಬ್ಬಿಣದ ರಾಡ್ ತುರುಕಿದ ಪ್ರಕರಣದ ಬೆನ್ನಲ್ಲೇ ಇದೀಗ 14 ವಯಸ್ಸಿನ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಥಾಣೆ ಜಿಲ್ಲೆಯ ಉಲ್ಲಾಸನಗರ ರೈಲು ನಿಲ್ದಾಣದ ಸನಿಹದಲ್ಲಿ ಈ ಘಟನೆ ನಡೆದಿದೆ.
ಮುಂಬೈನಲ್ಲೊಂದು ನಿರ್ಭಯಾ ಪ್ರಕರಣ; ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!
ಮುಂಬೈನ ಸಕಿನಕದಲ್ಲಿ ನಡೆದ ಅತ್ಯಂತ ಭೀಕರ ಅತ್ಯಾಚಾರದಲ್ಲಿ ತೀವ್ರ ಹಲ್ಲೆಗೊಳಗಾದ 34 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಪ್ರತಿಭಟನೆ ನಡೆಯುತ್ತಿದೆ. ಈ ಘಟನೆ ಮರುದಿನವೇ ಶಿರಡಿಯಿಂದ ಉಲ್ಲಾಸನಗರ ರೈಲು ನಿಲ್ದಾಣಕ್ಕೆ ಆಗಮಿಸಿದ್ದ 14ರ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ ಎಂದು ರೈಲ್ವೇ ಪೊಲೀಸ್ ಕಮಿಶನರ್ ಖಾಸಿರ್ ಖಾಲಿದ್ ಹೇಳಿದ್ದಾರೆ.
ಬಾಲಕಿ ಶಿರಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇಬ್ಬರು ಗೆಳೆತಿಯರ ಜೊತೆ ಬಾಲಕಿ ಉಲ್ಲಾಸಗನರ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾಳೆ. ಈ ವೇಳೆ ಆಕೆಯನ್ನು ಬೆದರಿಸಿ ಎಳೆದೊಯ್ದು ರೈಲು ನಿಲ್ದಾಣದ ಸನಿಹದಲ್ಲಿ ಅತ್ಯಾಚರ ಎಸಗಲಾಗಿದೆ. ರಾತ್ರಿಯಿಡಿ ಕಾಮುಕನ ಬಂಧನದಲ್ಲಿದ್ದ ಬಾಲಕಿ, ಬೆಳಗ್ಗೆ ತಪ್ಪಿಸಿಕೊಂಡು ಪೋಷಕರಿಗೆ ಮಾಹಿತಿ ನೀಡಿದ್ದಾಳೆ.
33 ಗಂಟೆಗಳ ಸಾವು- ಬದುಕಿನ ಹೋರಾಟ: ಕೊನೆಯುಸಿರೆಳೆದ ಮುಂಬೈನ 'ನಿರ್ಭಯಾ'!
ಈ ಪ್ರಕರಣ ಸಂಬಂಧ ಆರೋಪಿ ಶ್ರೀಕಾಂತ್ ಗಾಯಕ್ವಾಡ್ ಅಲಿಯಾಸ್ ದಾದನನ್ನು(35 ವರ್ಷ) ಬಂಧಿಸಲಾಗಿದೆ. ಆದರೆ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ ಘಟನೆಯೂ ನಡೆದಿದೆ. ಬಾಲಕಿ ತನ್ನ ಪೋಷಕರೊಂದಿಗೆ ಹತ್ತಿರದ ಹಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ ಘಟನೆ ನಡೆದಿರುವು ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ವಿಥಲವಾಡಿ ಠಾಣೆಯಲ್ಲಿ ದೂರು ನೀಡುವಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ವಿಥಲವಾಡಿ ಪೊಲೀಸ್ ಠಾಣೆಗೆ ತೆರಳಿದಾಗ ಘಟನೆ ರೈಲು ನಿಲ್ದಾಣದಲ್ಲಿ ನಡೆದ ಕಾರಣ ಕಲ್ಯಾಣಿ ಜಿಆರ್ಪಿ ಠಾಣೆಯಲ್ಲಿ ದೂರು ದಾಖಲಿಸುವಂತೆ ವಾಪಸ್ ಕಳುಹಿಸಿದ್ದಾರೆ. ಮೊದಲೇ ಆಘಾತದಿಂದ ಕುಸಿದಿದ್ದ ಬಾಲಕಿ ಕುಟುಂಬ ಮತ್ತಷ್ಟು ಹೈರಾಣಾಗಿದೆ. ಬಳಿಕ ವೆಲ್ಫೇರ್ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಅಧಿಕಾರಿಗಳ ಸಹಾಯದಿಂದ ದೂರು ದಾಖಲಿಸಲಾಗಿದೆ. ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.