ಕಾಯ್ಕಿಣಿ ಬರೆದ, ಎಸ್ ಪಿಬಿ ಹಾಡಿದ ಕೊರೋನಾ ಹಾಡು ವೈರಲ್!
ಎಸ್ ಪಿ ಬಾಲಸುಬ್ರಹ್ಮಣ್ಯಮ್ ಹಾಡಿರುವ ಕಾಣದಂತೆ ಆಕ್ರಮಿಸಿದೆ ವೈರಿ ಕೊರೋನಾ ಹಾಡು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಲರ ವಾಟ್ಸಪ್ ಗಳಲ್ಲೂ ಈ ಹಾಡು ಕಾಣಿಸಿಕೊಂಡಿದೆ. ಅಂದಹಾಗೆ ಈ ಹಾಡು ಬರೆದಿರುವುದು ಜಯಂತ ಕಾಯ್ಕಿಣಿ. ಸಂಗೀತ ಸಂಯೋಜನೆ ಖುದ್ದು ಎಸ್ ಪಿ ಬಾಲಸುಬ್ರಹ್ಮಣ್ಯಮ್.
ಎಸ್ ಪಿ ಬಿ ಮನವಿ ಮೇರೆಗೆ ಈ ಹಾಡು ಬರೆದಿದ್ದೇನೆ. ಅವರು ನಾಲ್ಕೂ ಭಾಷೆಗಳ ಕವಿಗಳಿಂದ ಹೀಗೆ ಬರೆಸಿ ಧಾಟಿ ಸಂಯೋಜಿಸಿ ಹಾಡಿದ್ದಾರೆ.- ಜಯಂತ ಕಾಯ್ಕಿಣಿ
'ಮುಂಗಾರು ಮಳೆ' ಸುರಿಸಿ 'ಪರವಶ' ಮಾಡಿದ ಕವಿ ಕಾಯ್ಕಿಣಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ!
ಕೊರೋನಾ ಜಾಗೃತಿ ಮೂಡಿಸಲು ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಎಲ್ಲಾ ನಾಲ್ಕು ಭಾಷೆಯ ಕವಿಗಳ ಬಳಿ ಕೊರೋನಾ ಜಾಗೃತಿ ಹಾಡು ಬರೆಸಿ ಹಾಡಿದ್ದಾರೆ. ಅವರ ಈ ಸಾಮಾಜಿಕ ಕಾಳಜಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.